Goa Liberation Day:450 ವರ್ಷಗಳ ಪೋರ್ಚುಗೀಸ್‌ ಹಿಡಿತ ಭಾರತ ಸೇನೆ ಕೊನೆಗಾಣಿಸಿದ್ದು ಹೇಗೆ

ಕೊನೆಯ ಅಸ್ತ್ರ ಎಂಬಂತೆ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲಕ್ಕೆ ಅಂಗಲಾಚಿ ವಿಶ್ವಸಂಸ್ಥೆ ಮೊರೆ ಹೋಗಿತ್ತು.

ನಾಗೇಂದ್ರ ತ್ರಾಸಿ, Dec 19, 2023, 12:51 PM IST

Goa Liberation Day:450 ವರ್ಷಗಳ ಪೋರ್ಚುಗೀಸ್‌ ಹಿಡಿತ ಭಾರತ ಸೇನೆ ಕೊನೆಗಾಣಿಸಿದ್ದು ಹೇಗೆ

ಗೋವಾ ವಿಮೋಚನಾ ದಿನ (ಡಿಸೆಂಬರ್‌ 19) ಭಾರತೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಹೌದು ಯಾಕೆಂದರೆ 1947ರ ಆಗಸ್ಟ್‌ 15ರಂದು ಬ್ರಿಟಿಷ್‌ ವಸಾಹತುಶಾಹಿಯಿಂದ ಮುಕ್ತಗೊಂಡು ಭಾರತ ಸ್ವತಂತ್ರವಾಗಿತ್ತು. ಆದರೆ ಪೋರ್ಚುಗೀಸರು ಮಾತ್ರ ನಮ್ಮ ಗೋವಾವನ್ನು ಬಿಟ್ಟುಕೊಡಲು ಸಿದ್ಧರಿಲ್ಲವಾಗಿತ್ತು.

ಗೋವಾದ ಸ್ವಾತಂತ್ರ್ಯಕ್ಕಾಗಿ ಭಾರತ ಹೋರಾಟ ನಡೆಸಿದ್ದರು ಕೂಡಾ ಅದು ಫಲಪ್ರದವಾಗಿರಲಿಲ್ಲ. ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದ್ದವು. ಕೊನೆಗೆ ಭಾರತ ಸರ್ಕಾರ ಸೇನೆಯನ್ನು ಬಳಸಿ ಗೋವಾವವನ್ನು ವಶಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿತ್ತು.

ಇದನ್ನೂ ಓದಿ:Corruption Case: ತಮಿಳುನಾಡು ಸಚಿವ ಕೆ.ಪೊನ್ಮುಡಿ ದೋಷಿ…: ಮದ್ರಾಸ್ ಹೈಕೋರ್ಟ್ ತೀರ್ಪು

ಯೋಜನೆಯಂತೆ ಭಾರತ 1961ರ ಡಿಸೆಂಬರ್‌ 18ರಂದು ಭೂ, ನೌಕಾಪಡೆ ಮತ್ತು ವಾಯುಪಡೆ ಮೂಲಕ ಗೋವಾದ ಮೇಲೆ ದಾಳಿ ನಡೆಸಿತ್ತು. ಆದರೆ ಗೋವಾದ ಹಿಡಿತ ಬಿಟ್ಟುಕೊಡಲು ಸಿದ್ಧರಿಲ್ಲದ ಪೋರ್ಚುಗೀಸರು ಕೊನೆಯ ಅಸ್ತ್ರ ಎಂಬಂತೆ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲಕ್ಕೆ ಅಂಗಲಾಚಿ ವಿಶ್ವಸಂಸ್ಥೆ ಮೊರೆ ಹೋಗಿತ್ತು.

ಪೋರ್ಚುಗೀಸ್‌ ಗೆ ಬ್ರಿಟನ್‌, ಅಮೆರಿಕ ಬೆಂಬಲ!

ಭಾರತ ಕೂಡಲೇ ಗೋವಾದಲ್ಲಿ ಕಾರ್ಯಾಚರಣೆಗೆ ನಿಯೋಜಿಸಿದ್ದ ಸೇನಾಪಡೆಗಳನ್ನು ಹಿಂಪಡೆಯಬೇಕೆಂದು ಪೋರ್ಚುಗೀಸ್‌ ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದನ್ನು ಪ್ರಸ್ತಾಪಿಸಿತ್ತು. ಇದಕ್ಕೆ ಬ್ರಿಟನ್‌, ಅಮೆರಿಕ ಮತ್ತು ಫ್ರಾನ್ಸ್‌ ಬೆಂಬಲ ಸೂಚಿಸಿದ್ದವು. ಆದರೆ ಪೋರ್ಚುಗೀಸ್‌ ನ ಈ ನಿರ್ಣಯವನ್ನು ರದ್ದುಗೊಳಿಸಲು ಅಂದಿನ ಯುಎಸ್‌ ಎಸ್‌ ಆರ್‌, ಲಿಬೇರಿಯಾ, ಶ್ರೀಲಂಕಾ, ಯುನೈಟೆಡ್‌ ಅರಬ್‌ ರಿಪಬ್ಲಿಕ್‌ ಬೆಂಬಲ ನೀಡಿದ್ದವು.

ಪೋರ್ಚುಗಲ್‌ ನಿರ್ಣಯಕ್ಕೆ ದಕ್ಷಿಣ ಅಮೆರಿಕದ ಈಕ್ವೆಡಾರ್‌, ಚಿಲಿ, ಬ್ರೆಜಿಲ್‌ ಮತ್ತು ಚೀನಾ ಕೂಡಾ ಬೆಂಬಲ ಘೋಷಿಸಿದ್ದವು. ಆಂಗೋಲಾ ಸ್ವಾತಂತ್ರ್ಯ ಚಳವಳಿಯನ್ನು ಪೋರ್ಚುಗಲ್‌ ಹತ್ತಿಕ್ಕಿದೆ ಎಂದು ಯುಎಸ್‌ ಎಸ್‌ ಆರ್‌ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ 1961ರ ಡಿಸೆಂಬರ್‌ 18ರಂದು ಭಾರತದ ವಿರುದ್ಧದ ಪ್ರಸ್ತಾವಿತ ವಿಶ್ವಸಂಸ್ಥೆಯ ನಿರ್ಣಯವನ್ನು ಮಂಡಿಸುವ ಕೆಲವು ತಿಂಗಳ ಮೊದಲು ನೆರೆಯ ಕ್ಯೂಬಾವನ್ನು ಅತಿಕ್ರಮಿಸಲು ವಿಫಲವಾದ ಅಮೆರಿಕದ ನೈತಿಕತೆಯ ಹಕ್ಕನ್ನು ಯುಎಸ್‌ ಎಸ್‌ ಆರ್‌ ಪ್ರಶ್ನಿಸಿತ್ತು.

450 ವರ್ಷಗಳಿಂದ ಗೋವಾ ಪೋರ್ಚುಗೀಸ್‌ ಹಿಡಿತದಲ್ಲಿರುವುದಾಗಿ ಪೋರ್ಚುಗಲ್‌ ಹಕ್ಕನ್ನು ಮಂಡಿಸಿತ್ತು. ಆದರೂ ಯುಎಸ್‌ ಎಸ್‌ ಆರ್‌, ಗೋವಾ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಭೌಗೋಳಿಕವಾಗಿ ಹಾಗೂ ಇತಿಹಾಸ, ಸಂಸ್ಕೃತಿ, ಸಂಪ್ರದಾಯದ ಅಂಶಗಳನ್ನು ಎತ್ತಿಹಿಡಿಯುವ ಮೂಲಕ ವಿಶ್ವಸಂಸ್ಥೆಗೆ ತಿರುಗೇಟು ನೀಡಿತ್ತು.

ಆಪರೇಷನ್‌ ವಿಜಯ್!‌

ವಿಶ್ವಸಂಸ್ಥೆಯಲ್ಲಿ ಪೋರ್ಚುಗಲ್‌ ಪ್ರಸ್ತಾಪಿಸಿದ ನಿರ್ಣಯವನ್ನು ಯುಎಸ್‌ ಎಸ್‌ ಆರ್‌ ತನ್ನ ವಿಟೋ ಅಧಿಕಾರವನ್ನು ಬಳಸಿ ರದ್ದುಗೊಳಿಸುವಲ್ಲಿ ನೆರವು ನೀಡಿತ್ತು. ಈ ಮೂಲಕ 1961ರ ಡಿಸೆಂಬರ್‌ 19ರಂದು ಭಾರತದ ಸೇನೆ ಆಪರೇಶನ್‌ ವಿಜಯ್‌ ಹೆಸರಿನಲ್ಲಿ ದಾಳಿ ನಡೆಸಿ ಪೋರ್ಚುಗೀಸ್‌ ಯುದ್ಧ ನೌಕೆಯನ್ನು ನಾಶಗೊಳಿಸಿ, ಯಾವುದೇ ರಕ್ತಪಾತವಿಲ್ಲದೇ ಗೋವಾವನ್ನು ವಶಕ್ಕೆ ಪಡೆದಿತ್ತು.

ಭಾರತದ ಸೇನಾ ಕಾರ್ಯಾಚರಣೆಯಲ್ಲಿ ಪೋರ್ಚುಗೀಸರು ಶರಣಾದ ನಂತರ ಪೋರ್ಚುಗೀಸ್‌ ಗವರ್ನರ್‌ ಜನರಲ್‌ ವಾಸಾಲೋ ಡಿಸಿಲ್ವಾ ಭಾರತೀಯ ಸೈನ್ಯದ ಬ್ರಿಗೇಡಿಯರ್‌ ಕೆ.ಎಸ್.‌ ಧಿಲ್ಲನ್‌ ಅವರಿಗೆ ಅಧಿಕೃತವಾಗಿ ಶರಣಾಗತಿ ಪತ್ರ ಬರೆದುಕೊಡುವ ಮೂಲಕ ಗೋವಾ ಪೋರ್ಚುಗೀಸರಿಂದ ವಿಮೋಚನೆ ಕಂಡಿತ್ತು.

ಆಜಾದ್‌ ಗೋಮಾಂತಕ್‌ ದಳ:

1947ರ ಜೂನ್‌ 18ರಂದು ಆಜಾದ್‌ ಗೋಮಾಂತಕ್‌ ದಳ ಜನ್ಮತಳೆದಿತ್ತು. ಇದು ಗೋವಾದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಏಳು ಜನ ತರುಣರ ಸಂಘಟನೆಯಾಗಿತ್ತು. ಸಿನಾರಿ ದತ್ತಾತ್ರೇಯ ದೇಶಪಾಂಡೆ, ಬೇಟು ನಾಯ್ಕ್‌, ತುಕಾರಾಂ ಕಾನ್ಕೋಕರ್‌, ಜೈವಂತ್‌, ನಾರಾಯಣ ನಾಯ್ಕ್‌ ಮತ್ತು ವಿಶ್ವನಾಥ್‌ ಲಾವಂಡೆ ಸೇರಿ ಏಳು ಮಂದಿ ಯುವಕರು ಮರ್ಡೊಲ್‌ ಸಮೀಪದ ಕುಂಕೋಲಿಯಮ್‌ ನಲ್ಲಿರುವ ಶ್ರೀಶಾಂತದುರ್ಗಾ ದೇವಸ್ಥಾನದಲ್ಲಿ ಗೆರಿಲ್ಲಾ ತಂತ್ರದ ಮೂಲಕ ಗೋವಾ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದರು. ಗೋವಾ ವಿಮೋಚನೆ ಹೋರಾಟದಲ್ಲಿ ಹಲವು ಮಂದಿ ಹುತಾತ್ಮರಾಗಿದ್ದರು. ಅವರನ್ನು ಪ್ರತಿವರ್ಷ ಡಿಸೆಂಬರ್‌ 19ರಂದು ಸ್ಮರಿಸಿಕೊಳ್ಳಲಾಗುತ್ತಿದೆ.

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.