Grass: ಹುಲ್ಲು ತೃಣಮಾತ್ರವಲ್ಲ! ಪ್ರಪಂಚದಲ್ಲಿ 12,000 ಜಾತಿಯ ಹುಲ್ಲುಗಳಿವೆ…

ನಿರಂತರತೆಯಲ್ಲಿರುವ ಭೂಮಿ-ಹುಲ್ಲು ಹಳತರಲ್ಲಿರುವ ಹೊಸತನ್ನು ಸೂಸುತ್ತದೆ.

Team Udayavani, Aug 15, 2023, 4:45 PM IST

Grass: ಹುಲ್ಲು ತೃಣಮಾತ್ರವಲ್ಲ! ಪ್ರಪಂಚದಲ್ಲಿ 12,000 ಜಾತಿಯ ಹುಲ್ಲುಗಳಿವೆ…

ಅದೊ! ಹುಲ್ಲಿನ ಮಕಮಲ್ಲಿನ ಜೊಸಪಚ್ಚೆಯ ಜಮಖಾನೆ ಪಸರಿಸಿ ತಿರೆ ಮೈ ಮುಚ್ಚಿರೆ ಬೇರೆ ಬಣ್ಣವನೆ ಕಾಣೆ! ಕವಿಪುಂಗವ ಕುವೆಂಪು ಹಸಿರ ಹುಲ್ಲನ್ನು ವರ್ಣಿಸಿದ್ದು ಹೀಗೆ. ಜಾರ್ಜ್‌ ಬರ್ನಾರ್ಡ್‌ ಷಾ ಹೇಳಿದ್ದು – ಭೂಮಿಯ ಚರ್ಮವೇನಾದರೂ ಇದ್ದರೆ ಅದು ಹುಲ್ಲಂತೆ. ಆಹಾರದಿಂದ ಬಯೋಫ್ಯೂ ಯೆಲ್‌ ವರೆಗಿನ ಹಿಡಿತ ಹೊಂದಿರುವ ಹುಲ್ಲು ಬರಿಯ ಹುಲ್ಲಾಗಿ ಉಳಿದಿಲ್ಲ.

ಹುಲ್ಲು ಹೂ ಬಿಡುವ ಸಸ್ಯವರ್ಗದ ವೈವಿಧ್ಯಮಯ ಪ್ರಜಾತಿ. ಪ್ರಪಂಚದಲ್ಲಿ ಅಂದಾಜು 12,000 ಜಾತಿಯ ಹುಲ್ಲುಗಳಿವೆ. ಅದೆಷ್ಟು ಬಗೆಯ ಹುಲ್ಲನ್ನು ನೀವು ಗಮನಿಸಿದ್ದೀರಿ? ಮಜ್ಜಿಗೆ ಹುಲ್ಲು, ಲಾವಂಚ, ಗರಿಕೆ, ದರ್ಭೆ, ಚಪ್ಪರಿಕೆ, ಜೊಂಡು, ಚಾಪೆ ಹುಲ್ಲು, ಬಳುಕುವ ಹುಲ್ಲು, ಮುಳಿಹುಲ್ಲು, ಭತ್ತ-ಗೋಧಿ ಹುಲ್ಲು, ಟರ್ಫ್ ಕೆಂಟುಕಿ ಹುಲ್ಲು, ಗಾಲ್ಫ್ ಹಸಿರಿನ ಬರ್ಮುಡಾ ಹುಲ್ಲು, ರೇಶಿಮೆ ಹೂವಿನ ಪಂಪಾಸ್‌ ಹುಲ್ಲು ಹಾಗೂ ಹೆಸರಿಸಲಾಗದ ಇನ್ನೂ ಸಾವಿರಾರು. ಉದ್ಯಾನವನಗಳಲ್ಲಿ ಬೆಳೆಸುವ ಕಂಬಳಿಯ ನುಣುಪಿನ ಲಾನ್‌ ಹುಲ್ಲು ಇಂಚುಗಳಷ್ಟೆತ್ತರಕ್ಕೇ ಚಾಚಬಲ್ಲದು. ಚಾಪೆಯ ಹುಲ್ಲು, ಕಬ್ಬಿನ ಹುಲ್ಲು, ಬಿದಿರಿನ ಪ್ರಭೇದಗಳು ಆಕಾಶದೆತ್ತರಕ್ಕೂ ಬೆಳೆಯಬಲ್ಲವು. ಹುಲ್ಲು ಆಹಾರಧಾನ್ಯಗಳನ್ನು ಒದಗಿಸುವ ಪ್ರಮುಖ ಆಕರ. ಇಷ್ಟು ಮಾತ್ರವಲ್ಲದೇ ಅದು ಒದಗಿಸುವ ಜೀವನ ಪಾಠಗಳೂ ಅನೇಕ. ‌

ಕೃಶಕಾಯವಾಗಿದ್ದರೂ ಎಂತಹ ಕಾರ್ಪಣ್ಯಕ್ಕೂ ಹೊಂದಿಕೊಳ್ಳಿ ಎನ್ನುವುದನ್ನು ಹುಲ್ಲು ಕಲಿಸುತ್ತದೆ. ಗಾಳಿಬಂದಾಗ ತೂರಿಕೋ ಎನ್ನುವಂತೆ ಹುಲ್ಲು ಗಾಳಿಯಲ್ಲಿ ಬಾಗುತ್ತದೆ, ಆದರೆ ಅದು ಸೀಳುವುದಿಲ್ಲ. ಜೀವನದಲ್ಲಿ ಹೊಂದಿಕೊಳ್ಳುವುದು ಮುಖ್ಯ ಎಂದು ಇದು ನಮಗೆ ಕಲಿಸುತ್ತದೆ. ಜೀವನದಲ್ಲಿ ಸಂಭವಿಸುವ ಎಲ್ಲ ಘಟನೆಗಳನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಮ್ಮ ಪ್ರತಿಕ್ರಿಯೆಗಳನ್ನು ನಿಯಂತ್ರಿಸಬಹುದು. ನಾವು ತುಂಬಾ ಕಠಿನವಾಗಿದ್ದರೆ, ಜೀವನದ ಸವಾಲುಗಳಿಂದ ನಾವು ಸುಲಭವಾಗಿ ಆಘಾತಗೊಳ್ಳುತ್ತೇವೆ. ಹುಲ್ಲು ನಮ್ಯತೆಯ ಸಂಕೇತ.

ಎಂತಹ ಪ್ರತಿಕೂಲ ಪ್ರರಿಸ್ಥಿತಿಯಲ್ಲಿಯೂ ಸ್ಥಿತಿಸ್ಥಾಪಕರಾಗಿರಿ ಎನ್ನುವುದು ಹುಲ್ಲು ಹೇಳುವ ಇನ್ನೊಂದು ಪಾಠ. ಶೀತೋಷ್ಣಗಳನ್ನು ಸಹಿಸಿ ಕಠಿನ ಪರಿಸ್ಥಿತಿಗಳಲ್ಲಿಯೂ ಹುಲ್ಲು ಬದುಕಬಲ್ಲದು. ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥಿತಿಸ್ಥಾಪಕರಾಗಿ ಸ್ಥಿತಪ್ರಜ್ಞನಂತೆ ಸವಾಲುಗಳನ್ನು ಬೆನ್ನತ್ತಿ ಜಯಿಸುವ ಮಾರ್ಗವನ್ನು ಹುಲ್ಲು ಹೇಳುತ್ತದೆ. ಹುಲ್ಲು ತೆನೆಯುವುದು ಬದಲಾವಣೆಗೆ ತೆರೆದು ಮತ್ತೆ ಮೊಳೆಯುವ ಸಂಕೇತ. ಸತತ ನಿರಂತರತೆಯಲ್ಲಿರುವ ಭೂಮಿ-ಹುಲ್ಲು ಹಳತರಲ್ಲಿರುವ ಹೊಸತನ್ನು ಸೂಸುತ್ತದೆ. ಹುಲ್ಲಾ ಗು ಬೆಟ್ಟದಡಿ ಎನ್ನುವಂತೆ ತನ್ನತನಕ್ಕೆ ಸಂತುಷ್ಟರಾಗಿರುವ ಇನ್ನೊಂದು ವಿಷಯಕ್ಕೂ ಹುಲ್ಲು ಉದಾಹರಣೆ. ಹುಲ್ಲು ಹುಲ್ಲಿನಂತೆ ತೃಪ್ತ, ಸಂಪೂರ್ಣ. ನಮ್ಮಲ್ಲಿರುವುದರಿಂದ ನಾವು ತೃಪ್ತರಾಗಿರಬೇಕು ಎಂದು ಇದು ನಮಗೆ ಕಲಿಸುತ್ತದೆ. ಸಂತೋಷವಾಗಿರಲು ಪ್ರತಿಯೊಬ್ಬರೂ ಹೊಂದಿರುವ ಎಲ್ಲವನ್ನೂ ನಾವು ಹೊಂದಬೇಕಾಗಿಲ್ಲ.

ಸಾಮರಸ್ಯತೆ ಹುಲ್ಲು ಕಲಿಸುವ ಅಮೂಲ್ಯ ಮೌಲ್ಯ. ಹುಲ್ಲು ಒಂದು ದೊಡ್ಡ ಪರಿಸರ ವ್ಯವಸ್ಥೆಯ ಭಾಗವಾಗಿದೆ. ಇದು ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತದೆ, ಮಣ್ಣನ್ನು ಹಿಡಿದಿಡುತ್ತದೆ. ಪರಸ್ಪರ ಮತ್ತು ನೈಸರ್ಗಿಕ ಪ್ರಪಂಚದೊಂದಿಗೆ ಸಂಪರ್ಕ ಹೊಂದಿರುವ ಹುಲ್ಲು ಮೇವಿನಿಂದ ಛಾವಣಿಯವರೆಗೂ ಹೊಂದಾಣಿಕೆಯ ತಣ್ತೀವನ್ನೇ ಹೇಳುತ್ತದೆ.

ಹುಲ್ಲು ಪರಿಸರ ವ್ಯವಸ್ಥೆಗೆ ವ್ಯಾಪಕವಾದ ಪ್ರಯೋಜನಗಳನ್ನು ಹೊಂದಿರುವ ಹಾಗೂ ಗಡುಸಾದ ಸಸ್ಯಗಳಾಗಿವೆ. ಪರಿಸರ ವ್ಯವಸ್ಥೆಯಲ್ಲಿ ಮಣ್ಣಿನ ಸ್ಥಿರೀಕರಣ, ಇಂಗಾಲದ ಸೀಕ್ವೆಸ್ಟ್ರೇಶನ್‌, ಆವಾಸಸ್ಥಾನ ಸೃಷ್ಟಿ, ಮಣ್ಣಿನ ಸವೆತ ನಿಯಂತ್ರಣ ಮತ್ತು ಜಾನುವಾರು ಆಹಾರದಲ್ಲಿ ಹುಲ್ಲು ನಿರ್ಣಾಯಕ ಪಾತ್ರವಹಿಸುತ್ತವೆ. ಹಾಗಾಗಿ ತೃಣ ಮಾತ್ರವಲ್ಲ, ಅಸಾಮಾನ್ಯ.

*ವಿಶ್ವನಾಥ ಭಟ್‌ , ಧಾರವಾಡ

ಟಾಪ್ ನ್ಯೂಸ್

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.