ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ
Team Udayavani, Oct 26, 2021, 9:15 PM IST
ಹಾಸನ: ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿರುವವ ರಿ ಗಷ್ಟೇ ಹಾಸನಾಂಬೆಯ ದರ್ಶನ ಪಡೆಯಲು ಜಿಲ್ಲಾ ಡ ಳಿತ ಅವಕಾಶ ಕಲ್ಪಿ ಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ನಂತರ ಈ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ದೇವಿಯ ನೇರ ದರ್ಶನ ಪಡೆಯಲು ಬರುವ ಭಕ್ತರು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿರುವುದರ ದಾಖಲೆ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರದಿಯ ಸಾಲಿನಲ್ಲಿ ಸಾಗುವಾಗಲೇ ಭಕ್ತರು ಕೊರೊನಾ ಲಸಿಕೆ ಪಡೆದ ಸರ್ಟಿಫಿಕೇಟ್ ಪ್ರತಿ ಅಥವಾ ಲಸಿಕೆ ಪಡೆದಿರುವುದಕ್ಕೆ ಬಂದ ಮೆಸೇಜ್ನ್ನು ಮೊಬೈಲ್ನಲ್ಲಿ ತೋರಿಸಿದ ನಂತರವೇ ದೇಗುಲಕ್ಕೆ ಪ್ರವೇಶ ನೀಡಲಾಗುತ್ತದೆ. ಇದರ ಪರಿಶೀಲನೆಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿ ವರು ತಿಳಿ ಸಿ ದರು. 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಲ್ಲ. ಹಾಗಾಗಿ ಮಕ್ಕಳ ಪ್ರವೇಶ ನಿರ್ಬಂಧಿಸಿಲ್ಲ. ಆದರೆ, ಮಕ್ಕಳು ಹಾಗೂ ವಯಸ್ಸಾದವರು ಸುರಕ್ಷತೆಯ ದೃಷ್ಟಿಯಿಂದ ನೇರ ದರ್ಶನಕ್ಕೆ ಬಾರದೆ ಆನ್ಲೈನ್ನಲ್ಲಿಯೇ ಹಾಸನಾಂಬೆಯ ದರ್ಶನ ಪಡೆಯುವುದು ಸೂಕ್ತ ಎಂದರು.
ದೇವಿಯ ನೇರ ದರ್ಶನಕ್ಕೆ ಗಣ್ಯರಿಗೆ, ಹಿರಿಯ ಅಧಿಕಾರಿಗಳಿಗೆ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಪಾಸ್ಗಳನ್ನು ವಿತರಿಸಲಾಗುತ್ತದೆ. ಗಣ್ಯರ ಒಂದು ಪಾಸ್ಗೆ ಐವರಿಗೆ ಪ್ರವೇಶಾವಕಾಶವಿರುತ್ತದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ :ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ
ಸರದಿಯ ಸಾಲಿನಲ್ಲಿ ನಿಂತಿರುವವರಿಗೆ ಶುದ§ ಕುಡಿಯುವ ನೀರು, ದೇವಾಲಯದ ಆವರಣದಲ್ಲಿಯೂ ಕುಡಿವ ನೀರಿನ ವ್ಯವಸ್ಥೆ ಮಾಡಲಾಗುವುದು. ತುರ್ತು ವೈದ್ಯಕೀಯ ಸೇವೆಯ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದು ಹೇಳಿದರು.