ಕಾಡಾನೆ ದಾಳಿಗೆ ರೈತ ಸಾವು : ಚಿಕ್ಕಮ್ಮನ ತಿಥಿ ಕಾರ್ಯ ನೆಡೆಯಬೇಕಿದ್ದ ದಿನದಂದೇ ನಡೆಯಿತು ಘಟನೆ

ನಾಗಾಪುರದಲ್ಲೂ ಮನೆ ಮೇಲೆ ಸಲಗನ ದಾಳಿ ಮನೆ ಜಖಂ

Team Udayavani, Feb 3, 2022, 12:08 PM IST

ಕಾಡಾನೆ ದಾಳಿಗೆ ರೈತ ಸಾವು : ಚಿಕ್ಕಮ್ಮನ ತಿಥಿ ನೆಡೆಯಬೇಕಿದ್ದ ದಿನದಂದೇ ನಡೆಯಿತು ಘಟನೆ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗ್ರಾಮದಲ್ಲಿ ಒಂಟಿ ಸಲಗದ ದಾಳಿಗೆ ರೈತನೊರ್ವ ಬಲಿಯಾಗಿರುವ ಘಟನೆ ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೊಳವಿಗೆಯ ದಿ.ಚನ್ನವೀರಪ್ಪರ ಪುತ್ರ ರಾಜೇಶ್ (50) ಸಾವನ್ನಪ್ಪಿದ ದುರ್ದೈವಿ. ಪತ್ನಿ, ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಘಟನೆ ವಿವರ: ವೀರನಹೊಸಹಳ್ಳಿ ವಲಯದಂಚಿನ ಕೊಳವಿಗೆ ಗ್ರಾಮದ ರೈತ ರಾಜೇಶ್ ಬುಧವಾರ ರಾತ್ರಿ 9ರ ವೇಳೆ ರಾಸುಗಳಿಗೆ ಮೇವು ಹಾಕಲು ಹುಲ್ಲು ತರಲು ಮನೆಯಿಂದ ಹೊರಬಂದು ಹುಲ್ಲಿನ ಮೆದೆಯಿಂದ ಹುಲ್ಲು ತರುವ ವೇಳೆ ಕತ್ತಲಲ್ಲೆ ರಾಗಿ ಮೆದೆ ಬಳಿ ಹುಲ್ಲು ಮೇಯುತ್ತಿದ್ದ ಸಲಗ ರಾಜೇಶನನ್ನು ಕಂಡು ಒಮ್ಮೆಲೆ ಘೀಳಿಟ್ಟಿದೆ. ಕಾಡಾನೆ ಘೀಳಿಟ್ಟಿದ್ದರಿಂದ ಕಂಗೆಟ್ಟ ರಾಜೇಶ ಹುಲ್ಲು ಬಿಸಾಡಿ ಹತ್ತಿರದ ಮರ ಹತ್ತಿ ಜೀವ ಉಳಿಸಿಕೊಳ್ಳಲು ಓಡಿ ಹೋಗಿ ಮರ ಹತ್ತುವ ವೇಳೆ ಆತನನ್ನು ಸೊಂಡಿನಲಿನಿಂದ ಎಳೆದು ಬಿಸಾಡಿದ ರಭಸಕ್ಕೆ ತೀವ್ರಪೆಟ್ಟು ಬಿದ್ದ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಿಕ್ಕಮ್ಮನ ತಿಥಿ ದಿನವೇ ಸಾವು:
ರಾಜೇಶನ ಚಿಕ್ಕಮ್ಮ ಗೌರಮ್ಮರ ತಿಥಿ ಕಾರ್ಯ ಗುರುವಾರ ನಡೆಯಬೇಕಿತ್ತು. ಮನೆ ಮಂದಿಯೆಲ್ಲಾ ತಯಾರಿಯಲ್ಲಿದ್ದರು. ಹೀಗಾಗಿ ರಾತ್ರಿ 9 ರ ವೇಳೆಗೆ ತಡವಾಗಿ ರಾಸುಗಳಿಗೆ ಹುಲ್ಲು ತರಲು ಹೋದ ವೇಳೆ ಘಟನೆ ನಡೆದಿದ್ದು. ಚಿಕ್ಕಮ್ಮನ ತಿಥಿಯಂದೇ ರಾಜೇಶ ಸಾವನ್ನಪ್ಪಿರುವುದು ಕುಟುಂಬದವರ ಆಕ್ರಂದನ ಮಯಗಿಲು ಮುಟ್ಟಿತ್ತು.

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿಯೇ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಗ್ರಾಮಾಂತರ ಠಾಣೆ ಎಸ್.ಐ.ಜಮೀರ್ ಅಹಮದ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ : ಮಿತ್ರನ ರಾಜಕೀಯ ಮರುಪ್ರವೇಶಕ್ಕೆ ವೇದಿಕೆ: ರಾಮುಲು ದಿಲ್ಲಿ ಭೇಟಿಯ ಉದ್ದೇಶವೇನು?

ನಾಗಾಪುರದಲ್ಲಿ ಮನೆ ಮೇಲೆ ಕಾಡಾನೆ ದಾಳಿ ಮನೆ ಮೇಲ್ಚಾವಣಿ ಹಾನಿ
ಒಂದೆಡೆ ಕಾಡಾನೆ ಕೊಳವಿಗೆಯಲ್ಲಿ ರೈತನನ್ನು ಬಲಿ ಪಡೆದಿದ್ದರೆ, ಮತ್ತೊಂದೆಡೆ ಹುಣಸೂರು-ನಾಗರಹೊಳೆ ರಸ್ತೆಯ ಗಿರಿಜನ ನಾಗಾಪುರ ಪುನರ್ವಸತಿ ಕೇಂದ್ರದದ ಒಂದನೇ ಬ್ಲಾಕ್‌ನಲ್ಲಿ ಗುರುವಾರ ಮುಂಜಾನೆ ಮೂರು ಆನೆಗಳು ಕಾಡಾನೆಗಳು ಕಾಣಿಸಿಕೊಂಡಿದ್ದು, ಈ ಪೈಕಿ ಒಂದು ಸಲಗವು ಕಾಳನ ಪುತ್ರ ರಾಜುರಿಗೆ ಸೇರಿದ ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆ ಮನೆಯ ವಸಾರಿನಲ್ಲಿ ಮಲಗಿದ್ದ ಮನೆಯವರು ಕಿರುಚಿಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಘೀಳಿಡುತ್ತಾ ಎರಡನೇ ಬಾರಿ ದಾಳಿ ನಡೆಸಿ ಮನೆಗೆ ಮೇಲ್ಚಾವಣಿಗೆ ಸಾಕಷ್ಟು ಹಾನಿ ಮಾಡಿದೆ. ಮನೆಯವರ ಕೂಗಾಟ ಕೇಳಿದ ಕೇಂದ್ರದ ಆದಿವಾಸಿಗಳು ಕಾಡಾನೆಗಳನ್ನು ನಾಗರಹೊಳೆ ರಸ್ತೆ ಮೂಲಕ ಹಿಮ್ಮೆಟ್ಟಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮೂರು ಕಾಡಾನೆಗಳ ಪೈಕಿ ಒಂದು ಆನೆ ಎರಡನೇ ಬ್ಲಾಕ್‌ನ ಜಂಗಲ್ ಉಡ್ ಲಾಟ್‌ನಲ್ಲಿ ಸೇರಿಕೊಂಡಿದೆ. ಈ ಭಾಗದಲ್ಲೂ ನಿತ್ಯವೂ ಕಾಡಾನೆಗಳ ಹಾವಳಿ ವಿಪರೀತವಾಗಿದೆ.

ನಿತ್ಯದ ಹಾವಳಿ:
ಉದ್ಯಾನದ ವೀರನಹೊಸಹಳ್ಳಿ ಹಾಗೂ ಹುಣಸೂರು ವಲಯದ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾಗೂ ಹುಲಿ ಹಾವಳಿ ನಿರಂತರವಾಗಿದ್ದು, ರೈತರು ಆಂತಕದ ನಡುವೆಯೂ ಕೃಷಿ ಚಟುವಟಿಕೆ ನಡೆಸುವಂತಾಗಿದೆ. ಈ ಭಾಗದಲ್ಲಿ ರೈಲ್ವೆ ಹಳಿ ಬೇಲಿ ಬಾಕಿ ಇದ್ದು, ಅಲ್ಲಿಂದಲೇ ಆನೆಗಳು ಹೊರದಾಟುತ್ತಿದ್ದು, ಸರಕಾರದ ದಿವ್ಯ ನಿರ್ಲಕ್ಷö್ಯದಿಂದಾಗಿ ಅಮಾಯಕರು ವನ್ಯಪ್ರಾಣಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಇನ್ನಾದರೂ ರೈಲ್ವೆ ಹಳಿ ತಡೆಗೋಡೆ ಪೂರ್ಣಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.

ನಾಗಾಪುರದಲ್ಲಿ ಮನೆ ಮೇಲೆ ಕಾಡಾನೆ ದಾಳಿ:
ಒಂದೆಡೆ ಕಾಡಾನೆ ಕೊಳವಿಗೆಯಲ್ಲಿ ರೈತನನ್ನು ಬಲಿ ಪಡೆದಿದ್ದರೆ, ಮತ್ತೊಂದೆಡೆ ಹುಣಸೂರು-ನಾಗರಹೊಳೆ ರಸ್ತೆಯ ಗಿರಿಜನ ನಾಗಾಪುರ ಪುನರ್ವಸತಿ ಕೇಂದ್ರದದ ಒಂದನೇ ಬ್ಲಾಕ್‌ನಲ್ಲಿ ಗುರುವಾರ ಮುಂಜಾನೆ ಮೂರು ಆನೆಗಳು ಕಾಡಾನೆಗಳು ಕಾಣಿಸಿಕೊಂಡಿದ್ದು, ಈ ಪೈಕಿ ಒಂದು ಸಲಗವು ಕಾಳನ ಪುತ್ರ ರಾಜುರಿಗೆ ಸೇರಿದ ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆ ಮನೆಯ ವಸಾರಿನಲ್ಲಿ ಮಲಗಿದ್ದ ಮನೆಯವರು ಕಿರುಚಿಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಘೀಳಿಡುತ್ತಾ ಎರಡನೇ ಬಾರಿ ದಾಳಿ ನಡೆಸಿ ಮನೆಗೆ ಮೇಲ್ಚಾವಣಿಗೆ ಸಾಕಷ್ಟು ಹಾನಿ ಮಾಡಿದೆ. ಮನೆಯವರ ಕೂಗಾಟ ಕೇಳಿದ ಕೇಂದ್ರದ ಆದಿವಾಸಿಗಳು ಕಾಡಾನೆಗಳನ್ನು ನಾಗರಹೊಳೆ ರಸ್ತೆ ಮೂಲಕ ಹಿಮ್ಮೆಟ್ಟಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮೂರು ಕಾಡಾನೆಗಳ ಪೈಕಿ ಒಂದು ಆನೆ ಎರಡನೇ ಬ್ಲಾಕ್‌ನ ಜಂಗಲ್ ಉಡ್ ಲಾಟ್‌ನಲ್ಲಿ ಸೇರಿಕೊಂಡಿದೆ. ಈ ಭಾಗದಲ್ಲೂ ನಿತ್ಯವೂ ಕಾಡಾನೆಗಳ ಹಾವಳಿ ವಿಪರೀತವಾಗಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.