ಕೊಲೆ ಪ್ರಕರಣದ ಆರೋಪಿ ಜೈಲಲ್ಲಿದ್ದೇ ಐಐಟಿ Rank ಪಡೆದ..ವಿಜ್ಞಾನಿಯಾಗುವ ಕನಸು ಈತನದ್ದು!
ಅಭಿಷೇಕ್ ಪಾಂಡೆ ಅಗತ್ಯವಿರುವ ಪುಸ್ತಕಗಳನ್ನು ಒದಗಿಸಿಕೊಟ್ಟು ಪರೀಕ್ಷೆ ಬರೆಯಲು ನೆರವು ನೀಡಿರುವುದಾಗಿ ವರದಿ ವಿವರಿಸಿದೆ.
Team Udayavani, Mar 26, 2022, 10:56 AM IST
ಪಟ್ನಾ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕೈದಿ ಉನ್ನತ ವಿದ್ಯಾಭ್ಯಾಸದ ಆಸೆಯೊಂದಿಗೆ ಐಐಟಿ ರೂರ್ಕಿಯ ಸ್ನಾತಕೋತ್ತರ ಪದವಿಯ “ಜಂಟಿ ಪ್ರವೇಶ ಪರೀಕ್ಷೆ'(ಜೆಎಎಂ)ಯನ್ನು ಬರೆದು, ಅದರಲ್ಲಿ ರ್ಯಾಂಕ್ ಪಡೆದುಕೊಂಡಿದ್ದಾನೆ.
ಇದನ್ನೂ ಓದಿ:ನ್ಯಾಯಾಲಯಕ್ಕೆ ಹಾಜರಾಗದ 7 ಮಂದಿ ಎಸ್.ಡಿ.ಪಿ.ಐ ಕಾರ್ಯಕರ್ತರು ಬಂಧನ
23 ವರ್ಷದ ಸೂರಜ್ ಕುಮಾರ್ ಈ ಸಾಧನೆ ಮಾಡಿರುವವ. ಐಐಟಿಯ ಆಲ್ ಇಂಡಿಯಾ 54ನೇ Rank ಪಡೆದಿದ್ದು, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ನನಸು ಮಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಆಶಾಭಾವ ಹೊಂದಿರುವುದಾಗಿ ಸೂರಜ್ ತಿಳಿಸಿದ್ದಾನೆ.
ಕಳೆದ ವರ್ಷ ಏಪ್ರಿಲ್ ನಿಂದ ಸೂರಜ್ ಕುಮಾರ್ ಯಾದವ್ ತನ್ನ ಹಿರಿಯ ಸಹೋದರ ಬಿರೇಂದ್ರ ಜೊತೆ ಬಿಹಾರದ ನವಾದಾ ಉಪ ಜೈಲಿನಲ್ಲಿದ್ದಾನೆ. ಈತನ ಕಲಿಕೆಗೆ ನವಾದಾ ಜೈಲು ಸೂಪರಿಟೆಂಡೆಂಟ್ ಅಭಿಷೇಕ್ ಪಾಂಡೆ ಅಗತ್ಯವಿರುವ ಪುಸ್ತಕಗಳನ್ನು ಒದಗಿಸಿಕೊಟ್ಟು ಪರೀಕ್ಷೆ ಬರೆಯಲು ನೆರವು ನೀಡಿರುವುದಾಗಿ ವರದಿ ವಿವರಿಸಿದೆ.
ರಾಜಸ್ಥಾನದ ಕೋಟಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತ, ಅಲ್ಲಿನ ಮೊಸ್ಮಾ ಗ್ರಾಮದಲ್ಲಿ 2021ರ ಮಾರ್ಚ್ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅದೇ ಹಿನ್ನೆಲೆ ಆತ 2021ರ ಎಪ್ರಿಲ್ ನಿಂದಲೇ ಬಿಹಾರದ ನವಾದಾ ವಿಭಾಗೀಯ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಪರೀಕ್ಷೆಗೆ ತಯಾರಿ ನಡೆಸಿದ್ದಾನೆ. 2022ರ ಫೆ.13ರಂದು ಪರೀಕ್ಷೆ ನಡೆದಿದ್ದು, ಅದರಲ್ಲಿ ಆತ 100ಕ್ಕೆ 50.33 ಅಂಕ ಹಾಗೂ 54ನೇ ರ್ಯಾಂಕ್ ಪಡೆದಿದ್ದಾನೆ.
ಜೈಲಿನಲ್ಲಿ ಕೈದಿಯಾಗಿರುವ ಸೂರಜ್ ಕುಮಾರ್ ಐಐಟಿ ಪ್ರವೇಶ ಪರೀಕ್ಷೆಯಲ್ಲಿ Rank ಪಡೆದಿರುವುದು ಜೀವನಕ್ಕೊಂದು ತಿರುವು ಸಿಕ್ಕಂತಾಗಿದೆ. ತಾನು ಕೊಲೆ ಪ್ರಕರಣದಲ್ಲಿ ಶೀಘ್ರವೇ ಖುಲಾಸೆಗೊಂಡು, ಬಿಡುಗಡೆಯಾಗಿ ಐಐಟಿ ರೂರ್ಕಿಗೆ ಸೇರ್ಪಡೆಗೊಳ್ಳುವ ಭರವಸೆ ಸೂರಜ್ ಕುಮಾರನದ್ದಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು