Glass Bridge: ಪ್ರವಾಸಿಗರ ಆಕರ್ಷಣೆಗಾಗಿ ಕೇರಳದಲ್ಲಿ ಅತೀ ಉದ್ದದ ಗಾಜಿನ ಸೇತುವೆ ನಿರ್ಮಾಣ

ಸುತ್ತಲೂ ಹಸಿರಿನಿಂದ ಕೂಡಿರುವ ಇಡುಕ್ಕಿಯ ವಾಗಮೋನ್‌ ಪ್ರದೇಶದ ವಿಹಂಗಮ ನೋಟವನ್ನು ಕಾಣಬಹುದಾಗಿದೆ.

Team Udayavani, Sep 9, 2023, 11:47 AM IST

Glass Bridge: ಪ್ರವಾಸಿಗರ ಆಕರ್ಷಣೆಗಾಗಿ ಕೇರಳದಲ್ಲಿ ಅತೀ ಉದ್ದದ ಗಾಜಿನ ಸೇತುವೆ ನಿರ್ಮಾಣ

ಇಡುಕ್ಕಿ(ಕೇರಳ): ಕರ್ನಾಟಕದಲ್ಲಿ ನದಿ, ಕಡಲು, ಪ್ರಕೃತಿ ಸೌಂದರ್ಯದ ತಾಣಗಳಿಗೇನೂ ಕೊರತೆ ಇಲ್ಲಾ. ಅದೇ ರೀತಿ ಕೇರಳದಲ್ಲಿಯೂ ಹಲವಾರು ಪ್ರವಾಸಿ ಕೇಂದ್ರಗಳಿವೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇರಳದ ಇಡುಕ್ಕಿಯ ವಾಗಮೋನ್‌ ಎಂಬಲ್ಲಿ ಭಾರತದ ಅತೀ ಉದ್ದನೆಯ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರ ಕಣ್ಮನ ಸೆಳೆಯುವಂತಾಗಿದೆ.

ಇದನ್ನೂ ಓದಿ:iOS 17 ರಲ್ಲಿ ಕನ್ನಡ, ತಮಿಳು, ತೆಲುಗು ಮಲಯಾಳಂ ಗೆ ಲಿಪ್ಯಂತರ ಕೀಬೋರ್ಡ್

ನಿಮಗೇನಾದರು 3,500 ಅಡಿ ಎತ್ತರದಲ್ಲಿ‌ ಗಾಜಿನ ಸೇತುವೆ ಮೇಲೆ ಅಡ್ವೆಂಚರ್ ನಡಿಗೆ ಮಾಡಲು ಬಯಸುವುದಾದರೆ…

ಇಡುಕ್ಕಿಯ ವಾಗಮೋನ್‌ ಗೆ ಭೇಟಿ ನೀಡಲೇಬೇಕು. ಹೌದು ಕೇರಳದ ವಾಗಮೋನ್‌ ನಲ್ಲಿ ಕ್ಯಾಂಟಿಲಿವರ್‌ ಸ್ಕೈವಾಕ್‌ ಗಾಜಿನ ಸೇತುವೆಯನ್ನು ಪ್ರವಾಸೋದ್ಯಮ ಸಚಿವ ಮುಹಮ್ಮದ್‌ ರಿಯಾಜ್‌ ಅಡ್ವೆಂಚರ್‌ ಪಾರ್ಕ್‌ ನಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸುವ ಮೂಲಕ ಪ್ರವಾಸಿಗರ ಭೇಟಿಗೆ ಅನುವು ಮಾಡಿಕೊಟ್ಟಿದ್ದಾರೆ.

40 ಮೀಟರ್‌ ಉದ್ದದ ಗಾಜಿನ ಸೇತುವೆ:

ಉಸಿರು ಬಿಗಿಹಿಡಿದು ನಡೆದು ಹೋಗಬೇಕಾದ ಸುಮಾರು 40 ಮೀಟರ್‌ ಉದ್ದದ ಗಾಜಿನ ಸೇತುವೆಯನ್ನು ಜಿಲ್ಲಾ ಪ್ರವಾಸೋದ್ಯಮ ಮಂಡಳಿ ಖಾಸಗಿ ಕಂಪನಿಯ ಸಹಭಾಗಿತ್ವದೊಂದಿಗೆ ಅಂದಾಜು 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಸುತ್ತಲೂ ಹಸಿರಿನಿಂದ ಕೂಡಿರುವ ಇಡುಕ್ಕಿಯ ವಾಗಮೋನ್‌ ಪ್ರದೇಶದ ವಿಹಂಗಮ ನೋಟವನ್ನು ಕಾಣಬಹುದಾಗಿದೆ.

ಈ ಸೇತುವೆ ನಿರ್ಮಾಣಕ್ಕಾಗಿ 35 ಟನ್‌ ಗಳಷ್ಟು ಸ್ಟೀಲ್‌ ಅನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿತ್ತು. ಒಂದು ಬಾರಿಗೆ ಈ ಕ್ಯಾಂಟಿಲಿವರ್‌ ಗ್ಲಾಸ್‌ ಸೇತುವೆ ಮೇಲೆ 15 ಮಂದಿ ತೆರಳಬಹುದಾಗಿದೆ. ಪ್ರತಿ ವ್ಯಕ್ತಿ 500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

 

View this post on Instagram

 

A post shared by pa_mohamedriyas (@pamuhammadriyas)

ಗಾಜಿನ ಸೇತುವೆ ಮೇಲೆ ಕೇವಲ 10 ನಿಮಿಷಗಳ ಕಾಲ ಮಾತ್ರ ಸಮಯ ಕಳೆಯಬಹುದಾಗಿದೆ. ಒಮ್ಮೆ ಈ 120 ಅಡಿ ಉದ್ದದ ಗಾಜಿನ ಸೇತುವೆ ಮೇಲಿಂದ ನಡೆದುಕೊಂಡು ಬಂದು ತುದಿ ಭಾಗವನ್ನು ತಲುಪಿದಾಗ ಮುಂಡಕಾಯಂ, ಕೋಟ್ಟಿಕಾಲ್‌ ಮತ್ತು ಕೊಕಾಯಾರ್‌ ಪ್ರದೇಶದ ದೂರದ ನೋಟವನ್ನು ವೀಕ್ಷಿಸಬಹುದಾಗಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.