ಸದ್ಗುರು ಅವರ ಮಣ್ಣು ರಕ್ಷಿಸೋಣ ಅಭಿಯಾನಕ್ಕೆ 6 ರಾಷ್ಟ್ರಗಳಿಂದ ಸಹಿ
Team Udayavani, Mar 17, 2022, 6:50 AM IST
ಬೆಂಗಳೂರು: ಈಶಾ ಫೌಂಡೇಶನ್ನ ಸ್ಥಾಪಕ ಸದ್ಗುರು ಅವರು ಆರಂಭಿಸಿರುವ “ಮಣ್ಣು ರಕ್ಷಿಸೋಣ’ ಅಭಿಯಾನಕ್ಕೆ ಸಂಬಂಧಿಸಿ 6 ಕೆರಿಬಿಯನ್ ರಾಷ್ಟ್ರಗಳ ಪ್ರಮುಖರು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ತಮ್ಮ ದೇಶಗಳಲ್ಲಿ ಮಣ್ಣು ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಆ್ಯಂಟಿಗುವಾ ಆ್ಯಂಡ್ ಬಾಬುìಡ, ಡೊಮಿನಿಕಾ, ಸೈಂಟ್ ಲೂಸಿಯಾ, ಸೈಂಟ್ ಕಿಟ್ಸ್ ಆ್ಯಂಡ್ ನೆವಿಸ್, ಗಯಾನಾ ಮತ್ತು ಬಾರ್ಬಡೋಸ್ ದೇಶಗಳು ಒಡಂಬಡಿಕೆಗೆ ಸಹಿ ಹಾಕಿವೆ.
ಅಭಿಯಾನದ ಅಂಗವಾಗಿ ಸದ್ಗುರು ಅವರು ಏಕಾಂಗಿಯಾಗಿ 100 ದಿನಗಳಲ್ಲಿ 30 ಸಾವಿರ ಕಿ.ಮೀ. ದೂರದ ಬೈಕ್ ರ್ಯಾಲಿ ನಡೆಸಲಿದ್ದು, ಇದನ್ನು ಮಾರ್ಚ್ 21ರಂದು ಇಂಗ್ಲಂಡ್ನಿಂದ ಆರಂಭಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ 6 ರಾಷ್ಟ್ರಗಳಿಗೆ ಭೇಟಿ ನೀಡಿರುವ ಅವರು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ.