ಫೋನ್ ಕದ್ದಾಲಿಕೆಯಲ್ಲಿ ಹಲವರು ಭಾಗಿ : ಪ್ರತಾಪಗೌಡ ಪಾಟೀಲ್
Team Udayavani, Aug 15, 2019, 3:12 PM IST
ಕೊಪ್ಪಳ : ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದರೆಂದು ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.
ನನ್ನ ಮತ್ತು ನನ್ನ ಆಪ್ತ ಕಾರ್ಯದರ್ಶಿಯ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿದ್ದು ಇದರೊಂದಿದೆ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದರಿಂದ ಈ ಪ್ರಕರಣವನ್ನು ಎಸ್ಐಟಿ ಅಥವಾ ಸಿಐಡಿ ತನಿಖೆಗೆ ವಹಿಸುವುದು ಸೂಕ್ತ ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ಈಗಿನ ಸರಕಾರ ಈ ಪ್ರಕರಣವನ್ನು ಈಗಾಗಲೇ ಗಂಭೀರವಾಗಿ ಪರಿಗಣಿಸಿದೆ ಹಿಂದಿನ ಸರಕಾರ ಫೋನ್ ಕದ್ದಾಲಿಕೆ ಮಾಡಿರುವ ಅನುಮಾನವಿದೆ ಹಾಗಾಗಿ ತ್ವರಿತವಾಗಿ ಉನ್ನತ ಮಟ್ಟದ ತನಿಖೆಗೆ ಸರಕಾರ ಮುಂದಾಗಬೇಕೆಂದು ಪ್ರತಾಪ್ ಗೌಡ ಪಾಟೀಲ್ ತಿಳಿಸಿದರು.
ಪೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ ಈ ಹಿಂದೆ ಅತೃಪ್ತ ಶಾಸಕರ ಪೋನ್ ಕದ್ದಾಲಿಕೆ ಆಗಿದ್ದು ಈ ಬಗ್ಗೆ ಎರಡು ದಿನದೊಳಗೆ ಅನರ್ಹ ಶಾಸಕರು ಸಭೆ ಸೇರಿ ಸಭೆಯಲ್ಲಿ ವಿಷಯದ ಬಗ್ಗೆ ತೀರ್ಮಾನಿಸಿ ಹೈಕೋರ್ಟ್ ಮೂಲಕ ಉನ್ನತ ತನಿಖೆಗೆ ಕೋರುತ್ತೇವೆ ಎಂದು ಹೇಳಿದ್ದಾರೆ.