ಫೋನ್‌ ಕರೆಗಳಿಗೆ ಮೊರೆ : ಸಮಯ ಕಳೆಯಲು ದೂರವಾಣಿಯೇ ಸಂಗಾತಿ


Team Udayavani, May 18, 2020, 7:30 PM IST

ಫೋನ್‌ ಕರೆಗಳಿಗೆ ಮೊರೆ : ಸಮಯ ಕಳೆಯಲು ದೂರವಾಣಿಯೇ ಸಂಗಾತಿ

ಜಾರ್ಜಿಯ: ಕೋವಿಡ್‌ ಮಹಾಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಜನರಿಗೆ ಈಗ ನಿಬಿಡ ಚಟುವಟಿಕೆಗಳಿಂದ ತುಸು ವಿರಾಮ ದೊರೆತಿದೆ. ಸಂದೇಶಗಳನ್ನು ಕಳುಹಿಸುತ್ತಿದ್ದ ಹೊಸ ತಲೆಮಾರಿನ ಜನರು ಈಗ ಸ್ನೇಹಿತರು ಹಾಗೂ ಆಪ್ತರಿಗೆ ಕರೆ ಮಾಡಿ ದೀರ್ಘ‌ ಸಮಯ ಮಾತನಾಡುವ ಪ್ರವೃತ್ತಿ ಕಾಣಿಸಿದೆ.

ಕೋವಿಡ್‌ ಸೋಂಕು ಆರಂಭವಾದ ಬಳಿಕ‌ ಫೋನ್‌ ಕರೆಗಳ ಸಂಖ್ಯೆ ಹಾಗೂ ಅವಧಿ ಒಂದೇ ಸಮನೆ ಹೆಚ್ಚಾಗುತ್ತಿರುವುದನ್ನು ಟೆಲಿಕಾಂ ಕಂಪೆನಿಗಳು ಗಮನಿಸಿವೆ. ಮೂಲೆಗುಂಪಾಗಿದ್ದ ಸ್ಥಿರ ದೂರವಾಣಿಗಳು ಕೂಡ ರಿಂಗಣಿಸತೊಡಗಿವೆ.

2004ರಲ್ಲಿ ಅಮೆರಿಕದ ಶೇ.90ಕ್ಕಿಂತ ಅಧಿಕ ಮನೆಗಳು ಸ್ಥಿರ ದೂರವಾಣಿಯನ್ನು ಹೊಂದಿದ್ದವು. ಆದರೆ 2019ರ ವೇಳೆ ಇದು ಶೇ. 40ಕ್ಕೆ ಕುಸಿದಿತ್ತು. ಸ್ಮಾರ್ಟ್‌ ಫೋನ್‌ಗಳು ಸ್ಥಿರ ದೂರವಾಣಿಗಳ ಜಾಗದಲ್ಲಿ ಬಳಕೆಗೆ ಬಂದವು ಮತ್ತು ಜನರು ಮಾತನಾಡುವುದಕ್ಕಿಂತ ಹೆಚ್ಚಾಗಿ ಸಂದೇಶಗಳನ್ನು ಕಳುಹಿಸುವುದಕ್ಕೆ ಅವುಗಳನ್ನು ಬಳಸಲಾರಂಭಿಸಿದರು.

ಅಮೆರಿಕದಲ್ಲಿ ಕರೆ ಮಾಡುವುದಕ್ಕಿಂತ ಐದು ಪಟ್ಟು ಹೆಚ್ಚಿಗೆ ಸಂದೇಶಗಳನ್ನು ರವಾನಿಸಲು ಅಥವಾ ಸ್ವೀಕರಿಸಲು ಜನರು ಸ್ಮಾರ್ಟ್‌ಫೋನ್‌ ಬಳಸುತ್ತಾರೆ. ಹೆಚ್ಚಿನ ವಯೋಗುಂಪಿನವರು ಫೋನ್‌ನಲ್ಲಿ ಮಾತನಾಡುವುದಕ್ಕೆ ಕಡಿಮೆ ಸಮಯ ವಿನಿಯೋಗಿಸುತ್ತಾರೆಂದು 2015ರಲ್ಲಿ ಕೈಗೊಳ್ಳಲಾದ ಸಮೀಕ್ಷೆಯೊಂದು ಹೇಳಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮಾರ್ಚ್‌ ಮಧ್ಯಭಾಗದಿಂದ ಮೇ 1ರ ವರೆಗಿನ ಅವಧಿಯಲ್ಲಿ ಮೊಬೈಲ್‌ ಫೋನ್‌ ಕರೆಗಳು ಶೇ. 44 ಹೆಚ್ಚಳವಾದರೆ ವೈಫೈ ಕರೆಗಳು ಇಮ್ಮಡಿಗಿಂತಲೂ ಹೆಚ್ಚಾದವು ಎಂದು ವರದಿಯೊಂದು ತಿಳಿಸಿದೆ.

ಮಾರ್ಚ್‌ನಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿದ್ದಾಗ ಟೆಲಿಕಾಂ ಸೇವಾ ಸಂಸ್ಥೆ ವೆರಿಝೋನ್‌ ವಾರದ ಪ್ರತಿದಿನ ಸರಾಸರಿ 80 ಕೋಟಿ ಕರೆಗಳು ಹೋಗುತ್ತಿದ್ದುದನ್ನು ವರದಿ ಮಾಡಿದೆ. ಇದು ವರ್ಷದ ಅತಿಹೆಚ್ಚು ಕರೆ ಹೋಗುವ ದಿನವಾದ ವಿಶ್ವ ತಾಯಂದಿರ ದಿನದಲ್ಲಿ ಮಾಡಲಾಗುವ ಕರೆಗಳ ಬಹುತೇಕ ದುಪ್ಪಟ್ಟಾಗಿದೆ. ಈ ವರ್ಷ ವಿಶ್ವ ತಾಯಂದಿರ ದಿನ ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದಲ್ಲಿ ಶೇ. 10 ಹೆಚ್ಚು ಕರೆಗಳು ಹೋಗಿದ್ದವು. ಕರೆಗಳ ಅವಧಿ ಕೂಡ ಹೆಚ್ಚಾಗಿದ್ದು ಜನರು ಫೋನ್‌ನಲ್ಲಿ ಹೆಚ್ಚು ಸಂಪರ್ಕದಲ್ಲಿರುವುದನ್ನು ಇದು ಬಿಂಬಿಸುತ್ತದೆ.

ಇದಲ್ಲದೆ ಸಂದೇಶ ರವಾನೆ ಮತ್ತು ವಿಡಿಯೋ ಕಾನ್ಫೆರೆನ್ಸಿಂಗ್‌ ಸೇವೆಗಳಲ್ಲಿ ಕೂಡ ಹೆಚ್ಚಳ ದಾಖಲಾಗಿದೆ. ಆದರೆ ಫೋನ್‌ ಕರೆಗಳಲ್ಲಿ ಸಂದೇಶ ರವಾನೆ ಮತ್ತು ವಿಡಿಯೋ ಕರೆಗಳಿಗಿಂತ ಹೆಚ್ಚಿನ ಆತ್ಮೀಯತೆ ಇರುತ್ತದೆಯೆಂದು ಜಾರ್ಜಿಯ ನಿವಾಸಿ ಲಾರೆನ್‌ ಪೆಲ್ಲಿಸಿಯರ್‌ ಅವರ ಅಭಿಪ್ರಾಯ. ಸಂದೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲಾಗುವುದಿಲ್ಲ ಮತ್ತು ವಿಡಿಯೋ ಕರೆ ವೇಳೆ ತಾವು ಕಾಣಿಸಿಕೊಳ್ಳುವ ವಿಚಾರದತ್ತ ಗಮನವಿರುತ್ತದೆ. ಹಾಗಾಗಿ ಫೋನ್‌ ಕರೆ ಪರಿಪೂರ್ಣ ಮಧ್ಯದ ಮಾರ್ಗವೆಂದು ಅವರು ಹೇಳುತ್ತಾರೆ.

ಫೋನ್‌ ಕರೆಗಳು ಹೆಚ್ಚಾಗುವುದಕ್ಕೆ ಅನೇಕ ಕಾರಣಗಳಿವೆ. ಹಳ್ಳಿಗಳಲ್ಲಿ ವಾಸಿಸುವವರಿಗೆ ಮತ್ತು ತಾಂತ್ರಿಕವಾಗಿ ಹೆಚ್ಚು ಪರಿಣತರಲ್ಲದ ಹಿರಿಯ ಪೀಳಿಗೆಯವರಿಗೆ ಫೋನ್‌ ಕರೆ ಸುಲಭದ ಮತ್ತು ವಿಶ್ವಾಸಾರ್ಹ ಸಂಪರ್ಕ ಮಾಧ್ಯಮವಾಗಿದೆ. ಜನರು ಈಗ ತಮ್ಮ ಕುಟುಂಬವರ್ಗವಲ್ಲದೆ ಹಳೆಯ ಸ್ನೇಹಿತರೊಂದಿಗೆ ಕೂಡ ಫೋನ್‌ನಲ್ಲಿ ಮಾತನಾಡತೊಡಗಿದ್ದಾರೆ. ತಾವು ಒಂಟಿಯಾಗಿದ್ದೇವೆಂಬ ಭಾವನೆಗೊಳಗಾದಾಗ ಮಾನವ ಸಂಪರ್ಕವನ್ನು ಬಯಸುವ ಜನರ ಬಯಕೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಮನಃಶಾಸ್ತ್ರಜ್ಞರ ಸಂಘದ ನಿರ್ದೇಶಕಿ ವೈಲ್‌ ರೈಟ್‌ ಹೇಳುತ್ತಾರೆ.

ಫೋನ್‌ ಕರೆಗಳು ಕೋವಿಡ್‌ನಿಂದ ನಿರ್ಮಾಣವಾಗಿರುವ ಆತಂಕದ ಸ್ಥಿತಿಯಿಂದ ಹೊರಬರಲು ಕೂಡ ಜನರಿಗೆ ನೆರವಾಗುತ್ತವೆ. ಜನಜೀವನ ಸಹಜತೆಯತ್ತ ಹೊರಳಿದ ಬಳಿಕ ಫೋನ್‌ ಕರೆಗಳು ಹೀಗೆ ಮುಂದುವರಿಯುತ್ತದೊ ಎಂಬುದನ್ನು ಕಾದುನೋಡಬೇಕಾಗಿದೆ. ಜನರು ಈಗ ತಮಗೆ ಯಾವುದು ಮುಖ್ಯವೆಂದು ಬಿಂಬಿಸುತ್ತಿರುವುದನ್ನು ಪರಿಗಣಿಸಿದಲ್ಲಿ ಫೋನ್‌ ಕರೆಗಳ ಮೂಲಕ ಸಂಪರ್ಕಿಸುವ ಪ್ರವೃತ್ತಿ ಹೀಗೇ ಮುಂದುವರಿಯಬಹುದೆಂದು ಅವರು ಅಭಿಪ್ರಾಯಪಡುತ್ತಾರೆ.

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.