ವಿಶ್ವಶ್ರೇಷ್ಠ ಕ್ರೀಡಾ ವಿವಿ: ಮೋದಿ ಶಂಕುಸ್ಥಾಪನೆ
Team Udayavani, Jan 3, 2022, 8:00 AM IST
ಮೇರಠ : ಇಡೀ ವಿಶ್ವದಲ್ಲೇ ಶ್ರೇಷ್ಠ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಭಾರತದಲ್ಲಿ ನಿರ್ಮಿಸಬೇಕು..
ಇದು ಭಾರತ ಸರಕಾರದ ಯೋಜನೆಗಳಲ್ಲೊಂದು. ಹೀಗೊಂದು ಉದ್ದೇಶದಿಂದ ಉತ್ತರ ಪ್ರದೇಶದ ಮೇರಠ ನಲ್ಲಿ ಧ್ಯಾನ್ಚಂದ್ ಕ್ರೀಡಾ ವಿವಿ ಕಾಮಗಾರಿ ಆರಂಭಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ರವಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಎಲ್ಲಿದೆ, ಹೇಗಿದೆ ವಿವಿ?: ಮೇರಠ ನ ಸರ್ಧಾನ ನಗರದ ಸಲಾವ ಮತ್ತು ಕೈಲಿ ಹಳ್ಳಿಗಳಲ್ಲಿ ಈ ವಿವಿ ನಿರ್ಮಾಣವಾಗುತ್ತಿದೆ. ಅಂದಾಜು ವೆಚ್ಚ 700 ಕೋಟಿ ರೂ. ಇಡೀ ಜಗತ್ತಿನಲ್ಲಿ ಶ್ರೇಷ್ಠ ವಿವಿಯಾಗಬೇಕು ಎಂಬ ಉದ್ದೇಶದಿಂದ ಇದಕ್ಕೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಇದರಲ್ಲಿ 1,080 ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದು. 540 ಮಹಿಳೆಯರು, 540 ಪುರುಷ ಕ್ರೀಡಾಪಟುಗಳಿಗೆ ಇಲ್ಲಿ ಸ್ಥಾನ ಸಿಗಲಿದೆ. ಭಾರತೀಯ ಕ್ರೀಡಾಪಟುಗಳನ್ನು ವಿಶ್ವದರ್ಜೆ ಗೇರಿಸುವುದೇ ಇದರ ಉದ್ದೇಶವಾಗಿದೆ.
ಇದನ್ನೂ ಓದಿ:ಕಾರು ಮಾರಾಟದಲ್ಲಿ ಹುಂಡೈಯನ್ನು ಮೀರಿಸಿದ ಟಾಟಾ
ಅತ್ಯಾಧುನಿಕ ಸೌಲಭ್ಯಗಳು ಈ ವಿವಿ ಯಲ್ಲಿ ಸಿಗಲಿವೆ. ಕ್ರೀಡಾ ಮೂಲಸೌಕ ರ್ಯಗಳಾದ ಸಿಂಥೆಟಿಕ್ ಹಾಕಿ ಮೈದಾನ, ಫುಟ್ಬಾಲ್ ಮೈದಾನ, ಬಾಸ್ಕೆಟ್ಬಾಲ್, ವಾಲಿಬಾಲ್, ಹ್ಯಾಂಡ್ಬಾಲ್, ಕಬಡ್ಡಿ ಅಂಕಣಗಳು, ಲಾನ್ ಟೆನಿಸ್ ಅಂಕಣ, ಜಿಮ್ನಾಶಿಯಂ, ಸಿಂಥೆಟಿಕ್ ಓಟದ ಅಂಕಣ, ಈಜುಕೊಳ, ಸೈಕ್ಲಿಂಗ್ ವೆಲೋಡ್ರೋಮ್, ಬಹೂಪಯೋಗಿ ಭವನ ಇಲ್ಲಿರಲಿದೆ.
ಹಾಗೆಯೇ ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್ಲಿಫ್ಟಿಂಗ್, ಬಿಲ್ಗಾರಿಕೆ, ಕೆನೋಯಿಂಗ್, ಕಯಾಕಿಂಗ್ ಇತರ ಸೌಲಭ್ಯಗಳೂ ಇಲ್ಲಿರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ