ಪಂಜಾಬ್‌ಗೂ ಪಂಚ್‌ ಕೊಟ್ಟೀತೇ ಸನ್‌ರೈಸರ್ ಹೈದರಾಬಾದ್‌?


Team Udayavani, Apr 17, 2022, 7:10 AM IST

ಪಂಜಾಬ್‌ಗೂ ಪಂಚ್‌ ಕೊಟ್ಟೀತೇ ಸನ್‌ರೈಸರ್ ಹೈದರಾಬಾದ್‌?

ನವೀ ಮುಂಬಯಿ: ಮೊದಲೆರಡು ಪಂದ್ಯಗಳಲ್ಲಿ ಸೋತು ಕಳೆದ ವರ್ಷದ ಕಳಪೆ ಪ್ರದರ್ಶನದ ಪುನರಾವರ್ತನೆಯ ಹಾದಿಯಲ್ಲಿದ್ದ ಸನ್‌ರೈಸರ್ ಹೈದರಾಬಾದ್‌ ದಿಢೀರ್‌ ಚೇತರಿಕೆ ಕಂಡಿದೆ. ಹ್ಯಾಟ್ರಿಕ್‌ ಗೆಲುವಿನೊಂದಿಗೆ ಮುಂದಡಿ ಇರಿಸಿದೆ.

ಶುಕ್ರವಾರವಷ್ಟೇ ಕೆಕೆಆರ್‌ಗೆ ಸೋಲುಣಿಸಿದ ಹುಮ್ಮಸ್ಸಿನಲ್ಲಿರುವ ಕೇನ್‌ ವಿಲಿಯಮ್ಸನ್‌ ಪಡೆ ಒಂದೇ ದಿನದ ವಿರಾಮದ ಬಳಿಕ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಂಗಳಕ್ಕಿಳಿಯಲಿದೆ. ಪಂಜಾಬ್‌ಗೂ ಅದು ಪಂಚ್‌ ಕೊಟ್ಟೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್‌ ಅಭಿಮಾನಿಗಳು.

ಪಂಜಾಬ್‌ ಮತ್ತು ಹೈದರಾಬಾದ್‌ ತಂಡಗಳದ್ದು ಸಮಬಲದ ಸಾಧನೆ. ಎರಡೂ ತಂಡಗಳು 5 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದಿವೆ. ಆದರೆ ರನ್‌ರೇಟ್‌ನಲ್ಲಿ ಪಂಜಾಬ್‌ ಮುಂದಿದೆ. ಹೈದರಾಬಾದ್‌ ಮೈನಸ್‌ನಲ್ಲಿದೆ.

ಮೂರೂ ಚೇಸಿಂಗ್‌ ಗೆಲುವು
ಸನ್‌ರೈಸರ್ ಹೈದರಾಬಾದ್‌ ಪಂದ್ಯದಿಂದ ಪಂದ್ಯಕ್ಕೆ ಸುಧಾರಿತ ಪ್ರದರ್ಶನ ನೀಡುತ್ತ ಬರುತ್ತಿದ್ದು, ಕಳೆದ 3 ಪಂದ್ಯಗಳಲ್ಲಿ ಕ್ರಮವಾಗಿ ಚೆನ್ನೈ, ಗುಜರಾತ್‌ ಮತ್ತು ಕೆಕೆಆರ್‌ಗೆ ಸೋಲುಣಿಸಿದೆ. ಗುಜರಾತ್‌ಗೆ ಮೊದಲ ಹಾಗೂ ಈವರೆಗಿನ ಏಕೈಕ ಸೋಲುಣಿಸಿದ್ದು ಹೈದರಾಬಾದ್‌ ಹೆಗ್ಗಳಿಕೆ. ಹಾಗೆಯೇ ಈ ಮೂರೂ ಗೆಲುವು ಚೇಸಿಂಗ್‌ ಮೂಲಕವೇ ಬಂದಿರುವುದೊಂದು ಹೆಚ್ಚುಗಾರಿಕೆ. ಇನ್ನೊಂದೆಡೆ ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಕೆಕೆಆರ್‌ ಕಳೆದ ಪಂದ್ಯದಲ್ಲಿ ಮುಂಬೈಗೆ 12 ರನ್‌ ಅಂತರದ ಸೋಲುಣಿಸಿದ ಆತ್ಮವಿಶ್ವಾಸದಲ್ಲಿದೆ.

ಚೆನ್ನೈ ಮತ್ತು ಗುಜರಾತ್‌ ವಿರುದ್ಧ ಗೆಲುವಿನ ಹೀರೋಗಳಾಗಿ ಮೂಡಿಬಂದಿದ್ದ ಕೇನ್‌ ವಿಲಿಯಮ್ಸನ್‌ ಮತ್ತು ಅಭಿಷೇಕ್‌ ಶರ್ಮ ಕೆಕೆಆರ್‌ ವಿರುದ್ಧ ಯಶಸ್ಸು ಕಾಣಲಿಲ್ಲ. ಆದರೆ ರಾಹುಲ್‌ ತ್ರಿಪಾಠಿ, ಐಡನ್‌ ಮಾರ್ಕ್‌
ರಮ್‌ ತಂಡದ ಕೈಬಿಡಲಿಲ್ಲ. ತ್ರಿಪಾಠಿ ತಮ್ಮ ಹಿಂದಿನ ತಂಡದ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್‌ ತೋರ್ಪಡಿಸಿ 37 ಎಸೆತಗಳಿಂದ 71 ರನ್‌ ಬಾರಿಸಿದ್ದು ವಿಶೇಷವಾಗಿತ್ತು. ಮಾರ್ಕ್‌ರಮ್‌ 36 ಎಸೆತಗಳಿಂದ ಅಜೇಯ 68 ರನ್‌ ಹೊಡೆದು ತಂಡವನ್ನು ದಡ ಮುಟ್ಟಿಸಿದ್ದರು.

ಹೈದರಾಬಾದ್‌ ಬೌಲಿಂಗ್‌ ವೇಗಿಗಳನ್ನೇ ಹೆಚ್ಚು ನೆಚ್ಚಿಕೊಂಡಿದೆ. ಅದರಲ್ಲೂ ಟಿ. ನಟರಾಜನ್‌, ಉಮ್ರಾನ್‌ ಮಲಿಕ್‌ ಹೆಚ್ಚು ಘಾತಕವಾಗಿ ಪರಿಣಮಿಸಿದ್ದಾರೆ. ಮಾರ್ಕೊ ಜಾನ್ಸೆನ್‌, ಭುವನೇಶ್ವರ್‌ ಕುಮಾರ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ವಿಶ್ವಾಸದಲ್ಲಿ ಪಂಜಾಬ್‌
ಪಂಜಾಬ್‌ ತನ್ನ ಹಿಂದಿನ ಪಂದ್ಯದಲ್ಲಿ ಮುಂಬೈ ಎದುರು 12 ರನ್ನುಗಳ, ಸಣ್ಣ ಅಂತರದ ಜಯ ಸಾಧಿಸಿದ ವಿಶ್ವಾಸದಲ್ಲಿದೆ. ಅಲ್ಲಿ ಬೇರ್‌ಸ್ಟೊ, ಲಿವಿಂಗ್‌ಸ್ಟೋನ್‌ ವಿಫ‌ಲರಾಗಿದ್ದರೂ ಪಂಜಾಬ್‌ಗ ಇದೊಂದು ಸಮಸ್ಯೆ ಆಗಲಾರದು. ಮುಖ್ಯವಾಗಿ ಶಾರೂಖ್‌ ಖಾನ್‌ ದೊಡ್ಡದೊಂದು ಇನ್ನಿಂಗ್ಸ್‌ ಪ್ರದರ್ಶಿಸಬೇಕಿದೆ. ಆರಂಭಿಕರಾದ ಅಗರ್ವಾಲ್‌-ಧವನ್‌ಮತ್ತೊಮ್ಮೆ ಭದ್ರ ಬುನಾದಿ ಹಾಕಿಕೊಟ್ಟರೆ ಭರ್ಜರಿ ಹೋರಾಟ ಕಂಡುಬರುವುದರಲ್ಲಿ ಅನುಮಾನವಿಲ್ಲ.

ಬೌಲಿಂಗ್‌ ವಿಭಾಗದಲ್ಲಿ ಕಾಗಿಸೊ ರಬಾಡ, ಒಡೀನ್‌ ಸ್ಮಿತ್‌ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ವೈಭವ್‌ ಅರೋರಾ, ಆರ್ಷದೀಪ್‌ ಸಿಂಗ್‌, ರಾಹುಲ್‌ ಚಹರ್‌ ಉತ್ತಮ ನಿಯಂತ್ರಣ ಸಾಧಿಸಬೇಕಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.