ರಾಜ್ ಸೌಂಡ್ಸ್ & ಲೈಟ್ಸ್: ಬೋಳಾರ್ ಇಂಟ್ರೋ ಟೀಸರ್ ಗೆ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರತಿಕ್ರಿಯೆ
2022ರ ಫೆಬ್ರುವರಿಯಲ್ಲಿ ತೆರೆ ಕಾಣಲು ಸಿದ್ಧವಾಗಿರುವುದಾಗಿ ಚಿತ್ರತಂಡ ಹೇಳಿದೆ.
Team Udayavani, Dec 29, 2021, 11:36 AM IST
ಮಂಗಳೂರು: ಬಹು ನಿರೀಕ್ಷಿತ ತುಳು ಸಿನಿಮಾ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಬಿಡುಗಡೆ ದಿನಾಂಕ ಈಗಾಗಲೇ ಚಿತ್ರತಂಡ ಘೋಷಿಸಿದ್ದು, ಇದೀಗ ಚಿತ್ರದಲ್ಲಿನ ತುಳುನಾಡ ಕಾಮಿಡಿ ಕಿಂಗ್ ಅರವಿಂದ್ ಬೋಳಾರ್ ಅಭಿನಯದ ಇಂಟ್ರೋ ಟೀಸರ್ ಬಿಡುಗಡೆಯಾಗಿದೆ.
ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಇಂಟ್ರೋ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ಲಕ್ಷಕ್ಕೂ(1,05,478) ಅಧಿಕ ಮಂದಿ ವೀಕ್ಷಿಸಿದ್ದಾರೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾವನ್ನು ವೈಭವ್ ಫ್ಲಿಕ್ಸ್ ಅವರು ಮ್ಯಾಂಗೋ ಪಿಕ್ಕಲ್ ಎಂಟರ್ ಟೈನ್ಮೆಂಟ್ ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದ್ದಾರೆ.
ದೊಡ್ಡ ಬಜೆಟ್ ಸಿನಿಮಾವಾಗಿರುವ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಈಗಾಗಲೇ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, 2022ರ ಫೆಬ್ರುವರಿಯಲ್ಲಿ ತೆರೆ ಕಾಣಲು ಸಿದ್ಧವಾಗಿರುವುದಾಗಿ ಚಿತ್ರತಂಡ ಹೇಳಿದೆ.
ಅರವಿಂದ್ ಬೋಳಾರ್ ಇಂಟ್ರೋ ಟೀಸರ್ ಹೊರತಾಗಿಯೂ ಚಿತ್ರತಂಡ ಹತ್ತು ತಿಂಗಳ ಹಿಂದೆಯೇ ನಾಯಕ ನಟರಾದ ವಿ.ಜೆ. ವಿನೀತ್, ಯಶಾ ಶಿವಕುಮಾರ್, ರವಿಶಂಕರ್ ಹಾಗೂ ಕರಿಶ್ಮಾ ಅಮೀನ್ ಅವರ ಪರಿಚಯದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದು, ಯೂಟ್ಯೂಬ್ ನಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು.
ಚಿತ್ರವನ್ನು ಆನಂದ್ ಎಂ ನಿರ್ಮಿಸಿದ್ದು, ಬಿ.ಅಶೋಕ್ ಕುಮಾರ್, ಸೀತಾರಾಮ್ ಶೆಟ್ಟಿ, ಅಜಯ್ ಬಾಳಿಗಾ, ಸುಹಾನ್ ಪ್ರಸಾದ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ ಮತ್ತು ಅರ್ಪಿತ್ ಅಡ್ಯಾರ್ ಸಹ ನಿರ್ಮಾಪಕರಾಗಿದ್ದಾರೆ.
ನಾಯಕ ನಟ ವಿ ಜಿ. ವಿನೀತ್ ಸಿನಿಮಾಕ್ಕೆ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ. ರಾಹುಲ್ ಅಮೀನ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಪಡ್ಡಾಯಿ ಖ್ಯಾತಿಯ ಪ್ರಸಾದ್ ಪಿ. ಕ್ಯಾಮರಾ ಸೆರೆಹಿಡಿದಿದ್ದಾರೆ. ಜೇಕಬ್ ಜಾನ್ಸನ್ ಸಹಕಾರ ನೀಡಿದ್ದಾರೆ. ಗಿರ್ಗಿಟ್ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ.
ಚಿತ್ರದ ಹಾಡುಗಳನ್ನು ಸೃಜನ್ ಕುಮಾರ್ ತೋನ್ಸೆ ಸಂಯೋಜಿಸಿದ್ದು, ಪ್ಲ್ಯಾಂಗಲ್ ಸ್ಟುಡಿಯೋ ಸಂಕಲನ, ಚಿತ್ರದ ಸಾಹಸ ದೃಶ್ಯಗಳನ್ನು ಚೇತನ್ ಡಿಸೋಜಾ ನಿರ್ವಹಿಸಿದ್ದಾರೆ. ನವೀನ್ ಶೆಟ್ಟಿ ಆರ್ಯನ್ ನೃತ್ಯ ಸಂಯೋಜನೆ ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ