ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್ ಸಿಂಗ್
Team Udayavani, Sep 24, 2021, 7:46 PM IST
ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ಅವರ ಹೆಸರು ಕೇಳಿದರೆ ಅಪರಾಧಿಗಳ ಮೈ ನಡುಗುತ್ತದೆ. ಹೀಗೆಂದು ಹೇಳಿರುವುದು ರಕ್ಷಣಾ ಸಚಿವ ರಾಜನಾಥ್ ಸಿಂಗ್.
ಕೆಲ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಶುಕ್ರವಾರ ಸಚಿವ ರಾಜನಾಥ್ ಸಿಂಗ್ ಅವರು ಯೋಗಿ ಅವರನ್ನು ಹಾಡಿ ಹೊಗಳಿದ್ದಾರೆ. “ಯೋಗಿ ಅವರ ನಿಯತ್ತಿನ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಮಹಾರಾಜಗಂಜ್ನಲ್ಲಿ ಯೋಗಿ ಅವರ ಗುರು ಅವೈದ್ಯನಾಥ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಅವರು ಈ ಮಾತನ್ನು ಹೇಳಿದರು.
ಇನ್ನೊಂದೆಡೆ, 2022ರ ವಿಧಾನಸಭೆ ಚುನಾವಣೆಗೆ ಉತ್ತರಪ್ರದೇಶದಲ್ಲಿ ನಿಷಾದ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂದು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ
ಮೈತ್ರಿಯಲ್ಲಿ ಅಪ್ನಾ ದಳವನ್ನೂ ಸೇರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಮೈತ್ರಿಗೆ ನಿಷಾದ್ ಪಕ್ಷವು ಅನೇಕ ಷರತ್ತುಗಳನ್ನು ಹಾಕುತ್ತಿರುವ ನಡುವೆಯೇ ಈ ಅಧಿಕೃತ ಘೋಷಣೆ ಹೊರಬಿದ್ದಿದೆ.