52 ವರ್ಷಗಳಿಂದ ನೆಲಮುಟ್ಟಿಲ್ಲ ಈ ಮಠದ ತಂಬೂರಿ :ಅಂದು ಹಚ್ಚಿದ ದೀಪ ಇಂದಿಗೂ ಪ್ರಜ್ವಲಿಸುತ್ತಿದೆ


Team Udayavani, Mar 1, 2022, 6:03 PM IST

52 ವರ್ಷಗಳಿಂದ ನೆಲಮುಟ್ಟಿಲ್ಲ ಈ ಮಠದ ತಂಬೂರಿ :ಅಂದು ಹಚ್ಚಿದ ದೀಪ ಇಂದಿಗೂ ಪ್ರಜ್ವಲಿಸುತ್ತಿದೆ

ಕುಳಗೇರಿ ಕ್ರಾಸ್ : ಈ ಮಠದಲ್ಲಿರುವ ತಂಬೂರಿ ಸುಮಾರು 52 ವರ್ಷಗಳಿಂದ ನೆಲ ಮುಟ್ಟಿಲ್ಲ… ನಿಂತಲ್ಲೇ ನಿಂತು ಓಂ.. ನಮಃ ಶಿವಾಯ… ಎಂದು 24 ಗಂಟೆ ಶಿವಧ್ಯಾನ ಮಾಡುತ್ತಿರುವ ಭಕ್ತರು… ಇಲ್ಲಿ 52 ವರ್ಷಗಳ ಹಿಂದೆ ಹಚ್ಚಿದ ದೀಪ ಇಂದು ಸಹ ಪ್ರಜ್ವಲಿಸುತ್ತಿದೆ… ಇವೆಲ್ಲ ಕೇಳಿದರೆ ಅಚ್ಚರಿ ಆಗುತ್ತಿದೆ ಅಲ್ವಾ.

ಹೌದು ಅಚ್ಚರಿಯೇ ಸರಿ ಇವೆಲ್ಲ ನಡೆಯುತ್ತಿರುವುದು ಬಾದಾಮಿ ತಾಲೂಕಿನ ಸುಕ್ಷೇತ್ರ ಸೋಮನಕೊಪ್ಪ ಗ್ರಾಮದ ಪೂರ್ಣಾನಂದರ ಮಠದಲ್ಲಿ. ಶ್ರೀಗಳೊಬ್ಬರ ಮಾತಿಗೆ ಶಿವನಾಮ ಮಾಡಲು ಬದ್ದರಾದ ಗ್ರಾಮದ ಭಕ್ತರು 52 ವರ್ಷಗಳಿಂದ ವಾದ್ಯ ಸಮೇತ ನಿರಂತರವಾಗಿ ಶಿವನಾಮ ಜಪ ಮಾಡುತ್ತಿದ್ದಾರೆ.

1970 ಅಗಸ್ಟ್ 23 ರಂದು ಪೂರ್ಣಾನಂದ ಸ್ವಾಮಿಜಿ ಅಣತೆಯಂತೆ ಹಗಲು ರಾತ್ರಿ ನಿರಂತರ ಭಜನೆಯನ್ನ ಯಾವ ಗ್ರಾಮದವರು ಹೆಚ್ಚುಕಾಲ ಮಾಡುತ್ತಿರೋ ಆ ಗ್ರಾಮಕ್ಕೆ ಬರುತ್ತೇನೆ ಬಂದು ನೆಲೆಸುತ್ತೇನೆ ಎಂದಿದ್ದರಂತೆ. ಶ್ರೀಗಳ ವಾಣಿಗೆ ಬದ್ದರಾದ ಸೋಮನಕೊಪ್ಪ ಗ್ರಾಮದ ಭಕ್ತರು 36 ವರ್ಷಗಳ ಕಾಲ ಶಿವನಾಮ ಸಪ್ತಾಹಕ್ಕೆ ಒಪ್ಪಿಕೊಂಡು ಆರಂಭಿಸಿದರು. ಶ್ರೀಗಳ ಮಾತಿಗೆ ಒಪ್ಪಿದ ಭಕ್ತರು 36 ವರ್ಷದ ನಂತರವೂ ಬಿಡದೇ ಶಿವನಾಮ ಜಪವನ್ನ ಮುಂದುವರೆಸಿದ ಭಕ್ತರ ಭಕ್ತಿ ಮೆಚ್ಚುವಂತದ್ದು.

ನಂತರ ಪೂರ್ಣಾನಂದ ಶ್ರೀಗಳು ಸೋಮನಕೊಪ್ಪ ಗ್ರಾಮದಲ್ಲಿ ಲಿಂಗೈಕ್ಯರಾದರು. ಶ್ರೀಗಳ ಗದ್ದುಗೆಯನ್ನ ಗ್ರಾಮದಲ್ಲಿ ನಿರ್ಮಿಸಲಾಯಿತು. ನಂತರ ಈ ಮಠಕ್ಕೆ ಇತ್ತಿಚೆಗೆ ಲಿಂಗೈಕ್ಯರಾದ ಶ್ರದ್ಧಾನಂದ ಸ್ವಾಮಿಜಿ ಪಟ್ಟಾಧಿಕಾರ ವಹಿಸಿಕೊಂಡರು. ಶಿವನಾಮ ಜಪ-ತಪ ಸೇರಿದಂತೆ ಕೋಟಿ ಜಪಯಜ್ಞ ಮಾಡುವ ಮೂಲಕ ಈ ಭಾಗದಲ್ಲಿ ಭಕ್ತರನ್ನು ಉದ್ಧರಿಸಿದ ಮಹಾತ್ಮರು.

ಅಂದು ಅಂಧಕಾರ ಹೋಗಲಾಡಿಸಲು ಶ್ರೀಗಳು ಹಚ್ಚಿದ ದೀಪವನ್ನು ಇಂದಿಗೂ ಜ್ಯೋತಿಯಾಗಿ ಪ್ರಜ್ವಲಿಸುತ್ತಿದೆ. ಆ ದೀಪವನ್ನ ಭಕ್ತರು ಎಣ್ಣೆ-ಬತ್ತಿ ಹಾಕಿ ಕಾಯ್ದುಕೊಂಡು ಬಂದಿದ್ದಾರೆ. ಶಿವನಾಮ ಸಪ್ತಾಹ 52 ವರ್ಷ ಕಳಿದರೂ ಹೀಗೆ ಮುಂದುವರೆಸಿಕೊಂಡು ಹೋಗುವ ಸಂಕಲ್ಪ ಸೋಮನಕೊಪ್ಪ ಗ್ರಾಮಸ್ಥರದ್ದಾಗಿದೆ.

ಪ್ರತಿ ದಿನವೂ ಮೂರ್ನಾಲ್ಕು ಮನೇತನಗಳಂತೆ ಒಂದು ಕುಟುಂಬಕ್ಕೆ ಮೂರು ಗಂಟೆಗಳಂತೆ ಸಮಯ ಹೊಂದಿಸಿಕೊಂಡು ಶಿವನಾಮ ಜಪ ಭಕ್ತಿಯಿಂದ ಮಾಡಲಾಗುತ್ತಿದೆ. ನಿತ್ಯ ಭಕ್ತರು ಶ್ರೀಮಠಕ್ಕೆ ಬಂದು ಹೆಗಲಿಗೆ ತಂಬೂರಿ ಹಾಕಿಕೊಂಡು ಉರಿಯುತ್ತಿರುವ ಜ್ಯೋತಿಯ ಎದುರು ಶಿವನಾಮ ಜಪ ಮಾಡುತ್ತಾರೆ. ಪಾಳೆ ಹಾಕಿಕೊಂಡು ಬರುವ ಭಕ್ತರು ತಂಬೂರಿ ನೆಲಕ್ಕಿಡದೆ ಒಬ್ಬರಿಗೊಬ್ಬರು ವರ್ಗಾಯಿಸಿಕೊಂಡು ಶಿವನಾಮ ಜಪಿಸುತ್ತಾರೆ.

ವಿಶೇಷವೆಂದರೆ ಈ ಮಠದಲ್ಲಿ ಜಾತಿ-ಮತ-ಬೇಧ ಇಲ್ಲ… ಹಿಂದೂ ಮುಸ್ಲಿಮ್ ಸೇರಿದಂತೆ ಎಲ್ಲ ಜಾತಿಯವರು ಜಾತ್ಯತೀತ ಮನೋಭಾವನೆಯಿಂದ ಕೋಟಿ ಜಪಯಜ್ಞ ಕಾರ್ಯದಲ್ಲಿ ಭಾಗವಹಿಸುತ್ತಾರೆ.

– ಮಹಾಂತಯ್ಯ ಹಿರೇಮಠ

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.