PTR ಗೆ ತ.ನಾಡು ವಿತ್ತಸಚಿವ ಸ್ಥಾನ ಖೋತಾ
Team Udayavani, May 12, 2023, 7:33 AM IST
ಚೆನ್ನೈ: ತಮಿಳುನಾಡು ಸಚಿವ ಸಂಪುಟ ಗುರುವಾರ ಪುನಾರಚನೆಯಾಗಿದ್ದು, ವಿತ್ತಸಚಿವರಾಗಿದ್ದ ಪಳನಿವೇಲ್ ತ್ಯಾಗರಾಜನ್ (ಪಿಟಿಆರ್) ಅವರನ್ನು ಖಾತೆಯಿಂದ ಕೈಬಿಡಲಾಗಿದೆ. ಅಲ್ಲದೇ, ಪಿಟಿಆರ್ಗೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯನ್ನು ವಹಿಸಲಾಗಿದ್ದು, ಪಿಟಿಆರ್ ಆಡಿಯೊ ವಿವಾದದ ಹಿನ್ನೆಲೆ ಈ ಬದಲಾವಣೆ ಮಹತ್ವ ಪಡೆದುಕೊಂಡಿದೆ.
ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರವು ಕಳೆದ ಕೆಲದಿನಗಳಿಂದಲೂ ಸಚಿವ ಸಂಪುಟ ಬದಲಾವಣೆಯ ಬಗ್ಗೆ ಚಿಂತನೆ ನಡೆಸುತ್ತಿತ್ತು. ಅದರಂತೆ ಇದೀಗ ವಿತ್ತಸಚಿವರ ಸ್ಥಾನಕ್ಕೆ ತೆಂಗಂ ತೆನ್ನೆರಸು ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಮನ್ನಾರ್ಗುಡಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿರುವ ಟಿಆರ್ಬಿ ರಾಜಾ ಅವರನ್ನು ಸಂಪುಟಕ್ಕೆ ಹೊಸ ಸೇರ್ಪಡೆಮಾಡಿಕೊಳ್ಳಲಾಗಿದೆ. ಅವರಿಗೆ ಕೈಗಾರಿಕಾ ಖಾತೆಯನ್ನು ನೀಡಲಾಗಿದೆ.
ಇನ್ನು ಹಣಕಾಸು ಹಾಗೂ ಮಾನವಸಂಪನ್ಮೂಲ ಖಾತೆಯಿಂದ ಹೊರಬಂದಿರುವ ಪಿಟಿಆರ್ ಇನ್ನುಮುಂದೆ ಐಟಿ ಖಾತೆಯನ್ನು ನಿರ್ವಹಿಸಲಿದ್ದು, ಈ ಹಿಂದೆ ಟಿ.ಮನೋತಂಗರಾಜ್ ಈ ಖಾತೆ ನಿರ್ವಹಿಸುತ್ತಿದ್ದರು. ಅವರಿಗೀಗ ಹಾಲು ಮತ್ತು ಡೇರಿ ಅಭಿವೃದ್ಧಿ ಇಲಾಖೆಯನ್ನು ವಹಿಸಲಾಗಿದೆ. 2021ರಿಂದೀಚೆಗೆ ಸ್ಟಾಲಿನ್ ನೇತೃತ್ವದ ಸಂಪುಟವನ್ನು ಇದು 2ನೇ ಬಾರಿಗೆ ಪುನಾರಚನೆ ಮಾಡಲಾಗಿದೆ. ಇತ್ತೀಚೆಗಷ್ಟೇ ಡಿಎಂಕೆ ಪಕ್ಷದ ಕಾರ್ಯವೈಖರಿಯನ್ನು ಹಾಗೂ ಸ್ಟಾಲಿನ್ ಪುತ್ರರಾದ ಉದಯನಿಧಿ ಸ್ಟಾಲಿನ್ ಅವರನ್ನು ಪಿಟಿಆರ್ ತೆಗಳಿದ್ದ ಆಡಿಯೊ ವಿವಾದಕ್ಕೀಡಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ