ಹಿರಿಯ ಪತ್ರಕರ್ತ, ಛಾಯಾಚಿತ್ರಗ್ರಾಹಕ ಜೀಬಿ ಇನ್ನಿಲ್ಲ


Team Udayavani, Mar 27, 2022, 6:10 AM IST

ಹಿರಿಯ ಪತ್ರಕರ್ತ, ಛಾಯಾಚಿತ್ರಗ್ರಾಹಕ ಜೀಬಿ ಇನ್ನಿಲ್ಲ

ಉಡುಪಿ: “ಉದಯವಾಣಿ’ ಆರಂಭದಿಂದ ಉಡುಪಿ ವರದಿಗಾರರಾಗಿ ಸೇವೆ ಸಲ್ಲಿಸಿದ   “ಜೀಬಿ’ ಎಂದು ಪರಿಚಿತರಾದ ಹಿರಿಯ ಪತ್ರಕರ್ತ ಪಾಂಡೇಲು ಗಣಪತಿ ಭಟ್‌ (79) ಅವರು ಮಾ. 26ರಂದು ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನುಅಗಲಿದ್ದಾರೆ.

ಕಾಸರಗೋಡು ತಾಲೂಕಿನ ಪಾಂಡೇಲು ಮನೆತನದ ಜೀಬಿಯವರು ಬದಿಯಡ್ಕ ಸಮೀಪದ ಕಿಳಿಂಗಾರಿನವರು. ಆರಂಭದಲ್ಲಿ ಬದಿಯಡ್ಕದಲ್ಲಿ ಕೆಲವು ಕಾಲ ವೈದ್ಯರಲ್ಲಿ ಕಂಪೌಂಡರ್‌ ಆಗಿ ಕೆಲಸ ಮಾಡಿದ ಭಟ್‌, ಬಳಿಕ ಬೆಂಗಳೂರಿನಲ್ಲಿ “ಮಲ್ಲಿಗೆ’ ಪತ್ರಿಕೆಯಲ್ಲಿ ಪತ್ರಕರ್ತ ವೃತ್ತಿಯನ್ನು ಆರಂಭಿಸಿದರು. ಅನಂತರ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ “ನವಭಾರತ’ ಪತ್ರಿಕೆಗೆ ಮಂಗಳೂರು ವರದಿಗಾರರಾಗಿ ಸೇರಿದರು.

1970ರಲ್ಲಿ ಮಣಿಪಾಲದಲ್ಲಿ “ಉದಯವಾಣಿ’ ಆರಂಭವಾದಾಗ ಉಡುಪಿಯ ವರದಿಗಾರರಾಗಿ ಸೇರಿ 2001ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಉದಯವಾಣಿಯ ಆರಂಭಿಕ ಸಂಪಾದಕೀಯ ಬಳಗದ ಪ್ರಮುಖರಲ್ಲಿ ಒಬ್ಬರಾದ ಭಟ್‌, ಪತ್ರಿಕೆಯ ಭಾಷೆಯನ್ನು ಸುಧಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. “ಜೀಬಿ’ ಹೆಸರಿನಲ್ಲಿ ವಿಶೇಷ ವರದಿ, ಲೇಖನಗಳನ್ನು ಬರೆಯುತ್ತಿದ್ದರು. ಬಹಳ ವರ್ಷ “ಸುತ್ತು ನೋಟ’ ಎಂಬ ಅಂಕಣ ಬರೆಯುತ್ತಿದ್ದರು. ಬರವಣಿಗೆಯೂ ಕ್ಲಿಷ್ಟಕರವಾಗಿರದೆ ಮೊನಚಿನಿಂದ ಕೂಡಿರುತ್ತಿತ್ತು, ತಿಳಿಯಾಗಿರುತ್ತಿತ್ತು.

ಉತ್ತಮ ವ್ಯಂಗ್ಯಚಿತ್ರಕಾರರು, ಛಾಯಾಚಿತ್ರಗ್ರಾಹಕರೂ ಆಗಿದ್ದರು. ಕಾಟೂìನಿಸ್ಟ್‌ಗಳ ಸಮ್ಮೇಳನವನ್ನು ಕುಂದಾಪುರದಲ್ಲಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಹಜ ಘಟನೆಗಳಿಂದಲೂ, ಘಟನೆಗಳನ್ನು ಸೃಷ್ಟಿಸಿಯೂ ಕಾಟೂìನ್‌ಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದರು. ಬಣ್ಣದ ಚಿತ್ರಗಳು ಬರುವ ಮುನ್ನ ಕಪ್ಪು – ಬಿಳುಪು ಚಿತ್ರಗಳಿದ್ದ ಕಾಲದಲ್ಲಿ ಮನೆಯಲ್ಲಿಯೇ ಸ್ಟುಡಿಯೋ ಇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು.

ಸಿನೆಮಾ ಬರೆಹಗಾರರಾಗಿದ್ದ ಜೀಬಿಯವರು ರಾಜ್‌ಕುಮಾರ್‌, ವಿಷ್ಣುವರ್ಧನ್‌, ಕಲ್ಪನಾ ಮೊದಲಾದ ಪ್ರಸಿದ್ಧ ಚಿತ್ರನಟರ ಸಂದರ್ಶನ ನಡೆಸಿದ್ದರು. ಸದಾ ಕಾಲ ಹಸನ್ಮುಖೀಯಾಗಿರುತ್ತಿದ್ದ ಜೀಬಿ, “ಹಾಸ್ಯ ಮಾತಿನ ಮಲ್ಲ’ ಆಗಿದ್ದರು. ಇವರ ಜೋಕ್‌ಗಳು ಎರವಲು ಪಡೆದದ್ದಾಗಿರದೆ ಸ್ವಯಂಸ್ಫೂರ್ತಿಯಿಂದ ಹೊರಬರುತ್ತಿದ್ದವು. ತಿಳಿಯಾದ ಹಾಸ್ಯಪ್ರಜ್ಞೆ, ವಿಡಂಬನೆ ಸಹಜ ಪ್ರವೃತ್ತಿಯಾಗಿತ್ತು. ಅವರು ಸಿಕ್ಕಿದ ತತ್‌ಕ್ಷಣವೇ ಹಾಸ್ಯದಲ್ಲಿಯೇ ಮಾತು ಆರಂಭವಾಗುತ್ತಿತ್ತು. ದಿನವೂ ಹಲವು ದಿನಪತ್ರಿಕೆ, ನಿಯತಕಾಲಿಕೆಗಳನ್ನು ಖರೀದಿಸಿ ಓದುತ್ತಿದ್ದರು. ನಿವೃತ್ತಿ ಬಳಿಕವೂ ಇಂದ್ರಾಳಿಯ ಪತ್ರಕರ್ತರ ಕಾಲನಿಯಿಂದ ಉಡುಪಿಗೆ ಪತ್ರಿಕೆಯ ಖರೀದಿಗಾಗಿಯೇ ಬರುತ್ತಿದ್ದರು. ಪುಸ್ತಕಗಳನ್ನು ಓದುವಲ್ಲಿಯೂ ಭಟ್‌ ಮುಂದಿರುತ್ತಿದ್ದರು. ಚಿತ್ರನಟರಾಗಿಯೂ ಪಾತ್ರ ವಹಿಸಿದ್ದರು. “ಗುಡ್ಡೆದಭೂತ’ ಚಿತ್ರದಲ್ಲಿ ಭಟ್‌ ಪಾತ್ರವಿತ್ತು.

ರವಿವಾರ ಬೆಳಗ್ಗೆ 11ರಿಂದ ಅಪರಾಹ್ನ 3 ಗಂಟೆಯವರೆಗೆ ಇಂದ್ರಾಳಿಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.