ಸಂಧಾನವೊಂದೇ ಮಾರ್ಗ : ಉದಯವಾಣಿ ಸಮೀಕ್ಷೆಯಲ್ಲಿ ಜನಮತ
Team Udayavani, Apr 12, 2021, 7:30 AM IST
ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರೊಂದಿಗೆ ಆದಷ್ಟು ಬೇಗ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸಿ. ವಜಾ, ವರ್ಗಾವಣೆಯಂಥ ಕಠಿನ ಕ್ರಮ ಅನುಸರಿಸಬೇಡಿ…
-ಇದು ಮುಷ್ಕರ ತಿಕ್ಕಾಟದ ಬಗ್ಗೆ “ಉದಯವಾಣಿ’ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾದ ಜನಾಭಿಪ್ರಾಯದ ಸಾರ. ಸಾರಿಗೆ ನೌಕರರ ಮುಷ್ಕರ ಮತ್ತು ಸರಕಾರದ ಕಠಿನ ಕ್ರಮಗಳ ಬೆನ್ನಲ್ಲೇ ಪತ್ರಿಕೆಯು ಜನರ ನಾಡಿಮಿಡಿತ ತಿಳಿಯಲು ಮುಂದಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, 3,500ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ಮಂದಿ ಮುಷ್ಕರವನ್ನು ಬೆಂಬಲಿಸಿದರೆ, ಕೆಲವರು ಮುಷ್ಕರಕ್ಕೆ ಇದು ಸೂಕ್ತ ಸಮಯವಲ್ಲ ಎಂದಿದ್ದಾರೆ. ಮುಷ್ಕರ ನಿರತರ ಮೇಲೆ ಸರಕಾರದ ಕ್ರಮದ ಬಗ್ಗೆ ಸಾಕಷ್ಟು ಅಪಸ್ವರ ವ್ಯಕ್ತವಾಗಿದೆ. ಇನ್ನಷ್ಟು ಕಠಿನ ಕ್ರಮ ಕೈಗೊಳ್ಳಬೇಕೆಂದು ಶೇ. 4.7ರಷ್ಟು ಜನ ಮಾತ್ರ ಹೇಳಿದರೆ, ಮಾತುಕತೆಯ ಮೂಲಕ ಬಗೆಹರಿಸಿ ಎಂದು ಶೇ. 47 ರಷ್ಟು ಮಂದಿ ಪ್ರತಿಪಾದಿಸಿದ್ದಾರೆ.
ವ್ಯಕ್ತವಾದ ಅಭಿಮತಗಳು
– ದೇಶ ಕೊರೊನಾ ಸಂಕಷ್ಟದಲ್ಲಿದೆ. ಇಂಥ ಸಮಯದಲ್ಲಿ ಮುಷ್ಕರ ಬೇಡವಾಗಿತ್ತು.
– ಇದು ಸರಕಾರ ಮತ್ತು ನೌಕರರ ನಡುವಿನ ಸಮಸ್ಯೆ. ಆದರೆ ತೊಂದರೆ ಜನಸಾಮಾನ್ಯರಿಗೆ. ಹೀಗಾಗಿ ತತ್ಕ್ಷಣವೇ ಇದಕ್ಕೆ ಪರಿಹಾರ ಹುಡುಕಬೇಕು.
– ಸರಕಾರದ ಆರ್ಥಿಕ ಪರಿಸ್ಥಿತಿ ಒಂದು ಹಂತಕ್ಕೆ ಬಂದ ಮೇಲೆ ವೇತನ ಹೆಚ್ಚಳ ಬೇಡಿಕೆ ಇರಿಸಬಹುದಾಗಿತ್ತು.
– ಇದು ಸರಕಾರ ಮತ್ತು ನೌಕರರ ನಡುವಿನ ವಿಷಯ. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಚೇತನ್ ಮಧ್ಯಪ್ರವೇಶ ಮಾಡಬಾರದಿತ್ತು. ಇವರ ಮಧ್ಯ ಪ್ರವೇಶದಿಂದಲೇ ಮುಷ್ಕರ ಹಾದಿ ತಪ್ಪುತ್ತಿದೆ.
ಸಮೀ ಕ್ಷೆಯಲ್ಲಿ ಕಂಡುಬಂದದ್ದು
- ಸರಕಾರದ ಪ್ರತಿಕ್ರಿಯೆಗೆ ಏನು ಹೇಳುತ್ತೀರಿ?
: ಸರಿ - 9.7% l ಸರಿಯಲ್ಲ – 47.9%
- ಇನ್ನಷ್ಟು ಕ್ರಮ ಕೈಗೊಳ್ಳಬೇಕು – 4.7%
- ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ – 37.7%
- ಸಾರಿಗೆ ಸಮಸ್ಯೆಗೆ ಖಾಸಗೀಕರಣ ಪರಿಹಾರವೇ?
: ಹೌದು – 4.8% l ಅಪಾಯಕಾರಿ – 29.9%
- ಏನಾದರೂ ಆಗಲಿ, ಜನರ ಹಿತ ಕಾಪಾಡಲಿ – 8.2%
- ರಾಜಕಾರಣಿಗಳ ಸ್ವಾರ್ಥಕ್ಕಾಗಿ ಖಾಸಗೀಕರಣ – 57.1%
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ