Congress: ಕಾಂಗ್ರೆಸ್ಗೆ ಬಂಡಾಯದ ಸವಾಲು
ಪಕ್ಷಾಂತರ ಹಾಗೂ ಬಂಡಾಯದತ್ತ ಕೈ ಟಿಕೆಟ್ ವಂಚಿತರು- ರಘು ಆಚಾರ್, ಮನೋಹರ್ ತಹಸೀಲ್ದಾರ್ ಜೆಡಿಎಸ್ಗೆ
Team Udayavani, Apr 8, 2023, 8:23 AM IST
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಿಡು ಗಡೆ ಮಾಡಿದ ಅಭ್ಯರ್ಥಿಗಳ 2 ಪಟ್ಟಿಗಳಲ್ಲಿ ಸ್ಥಾನ ವಂಚಿ ತರ ಅಸಮಾಧಾನ, ಆಕ್ರೋಶ ಮುಂದುವರಿದೆ. ಈ ಮುಖಂಡರ ನಿಲುವು ಈಗ ಪಕ್ಷಾಂತರ ಹಾಗೂ ಬಂಡಾಯದ ಹಂತ ತಲುಪಿದೆ. ಅತೃಪ್ತರ ನಡೆ ವರಿಷ್ಠರಿಗೂ ಆತಂಕ ಮೂಡಿಸಿದೆ.
ಟಿಕೆಟ್ ಸಿಗದ ಕೆಲವರು ನೇರ ವಾಗಿಯೇ ಅಸಮಾಧಾನ ತೋರಿ ಬೇರೆ ಪಕ್ಷ ಸೇರ್ಪಡೆಗೆ ವೇದಿಕೆ ಸಜ್ಜು ಗೊಳಿಸಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿ ಸುವುದಾಗಿ ಘೋಷಿಸಿದ್ದಾರೆ.
ಅನ್ಯ ಪಕ್ಷಗಳತ್ತ ಮುಖ
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ಗೆ ಬಂಡಾಯ ಹಾಗೂ ಅಸಮಾಧಾನ ದೊಡ್ಡ ಮಟ್ಟದ ತಲೆನೋವಿಗೂ ಕಾರಣವಾಗಿದ್ದು, ಅಧಿಕೃತ ಅಭ್ಯರ್ಥಿ ಗಳ ಮೇಲೂ ಇದು ಪರಿಣಾಮ ಬೀರುವ ಲಕ್ಷಣಗಳು ಕಂಡು ಬರುತ್ತಿವೆ. ಚಿತ್ರ ದುರ್ಗ, ಹಾನಗಲ್, ತುಮಕೂರು, ಗಂಗಾ ವತಿ, ಶಿರಸಿ, ಸವದತ್ತಿ, ಕಿತ್ತೂರು, ಬಾದಾಮಿ, ಗೋಕಾಕ್, ಮಂಡ್ಯ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರ ಆಕ್ರೋಶ ತೀವ್ರಗೊಂಡಿದ್ದು, ತಮ್ಮ ರಾಜಕೀಯ ಭವಿಷ್ಯ ಅರಸಿ ಅನ್ಯ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಟಿಕೆಟ್ ಕೈ ತಪ್ಪಿದ್ದ ರಿಂದ ಅಸಮಾಧಾನಗೊಂಡಿದ್ದ ರಘು ಆಚಾರ್ ಜೆಡಿಎಸ್ ಸೇರ್ಪಡೆಯಾಗು ವುದಾಗಿ ಘೋಷಿಸಿ, ಎ. 14ರಂದು ಪಕ್ಷ ಸೇರ್ಪಡೆಗೆ ಮುಹೂರ್ತ ನಿಗದಿ ಮಾಡಿದ್ದಾರೆ.
ಜೆಡಿಎಸ್ನತ್ತ ಅತೃಪ್ತರು
ಕಾಂಗ್ರೆಸ್ನ ಟಿಕೆಟ್ ವಂಚಿತರು ಜೆಡಿಎಸ್ ಬಾಗಿಲು ಬಡಿಯುತ್ತಿದ್ದು, ಚಿತ್ರದುರ್ಗದ ರಘು ಆಚಾರ್ , ಹಾನಗಲ್ನ ಮನೋಹರ ತಹಸೀಲ್ದಾರ್ ಮತ್ತಿತರ ನಾಯಕರು ಎಚ್.ಡಿ. ಕುಮಾರಸ್ವಾಮಿಯವರ ಸಂಪರ್ಕದಲ್ಲಿದ್ದಾರೆ. ಶಿರಸಿ, ಗಂಗಾವತಿ, ಕಿತ್ತೂರು ಸೇರಿ ಹಲವು ಕ್ಷೇತ್ರ ಗಳ ಆಕಾಂಕ್ಷಿಗಳು ಜೆಡಿಎಸ್ ಸೇರಲು ಒಲವು ತೋರಿದ್ದಾರೆ ಎಂದು ಹೇಳಲಾಗಿದೆ.
ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಬೇಕಾದರೂ ಟಿಕೆಟ್ ಭರವಸೆ ನೀಡುವುದಿಲ್ಲ. ಹಾಲಿ ಶಾಸಕರು ಬಂದರೂ ಪಕ್ಷಕ್ಕಾಗಿ ದುಡಿಯುವುದನ್ನು ಬಯಸುತ್ತೇವೆ. ರಾಜಕಾರಣ ಫುಟ್ಬಾಲ್ ಅಲ್ಲ, ಚೆಸ್. ಮುಂದೆ ಅವಕಾಶಗಳು ಇರುತ್ತವೆ. ಸಮಾಧಾನ ಮುಖ್ಯ. ಏನೇ ಅತೃಪ್ತಿ ಇದ್ದರೂ ಸರಿಪಡಿಸುತ್ತೇವೆ. ಕಾದು ನೋಡಿ.
- ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ