ಅಂತೂ ಜಾಮಾ ಮಸೀದಿ ಪ್ರದೇಶ ಅಭಿವೃದ್ಧಿ! – 20 ವರ್ಷಗಳ ಬೇಡಿಕೆ ಜಾರಿ ಸನ್ನಿಹಿತ
Team Udayavani, May 9, 2023, 7:45 AM IST
ನವದೆಹಲಿ: ಎರಡು ದಶಕಗಳಿಂದ ದೆಹಲಿಯ ಜಾಮಾ ಮಸೀದಿ ಮತ್ತು ಸುತ್ತಲ ಪ್ರದೇಶವನ್ನು ಅಭಿವೃದ್ಧಿ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಲೇ ಇದ್ದವು. ಇದೀಗ ಅದು ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಏಪ್ರಿಲ್ನಲ್ಲಿ ದೆಹಲಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿತ್ತು. ಇದಕ್ಕೆ ಸಂಬಂಧಪಟ್ಟ ಕರಡು ಯೋಜನಾ ಪ್ರತಿ (ಡಿಪಿಆರ್) ಸದ್ಯದಲ್ಲೇ ಸಿದ್ಧಗೊಳ್ಳಲಿದೆ. ಜಾಮಾ ಮಸೀದಿ ಮತ್ತು ಸುತ್ತಲ ವಾತಾವರಣ ಬಹಳ ಹದಗೆಟ್ಟು ಗಲೀಜಾಗಿರುವುದು ಮುಖ್ಯ ಕಾರಣ. ಅಲ್ಲದೇ ಇತ್ತೀಚೆಗೆ ವಿಪರೀತ ಮಳೆಯಿಂದ ಮಸೀದಿ ಮಧ್ಯದ ಗುಮ್ಮಟ ಕುಸಿದುಬಿದ್ದಿತ್ತು. ಅದರಿಂದ ಕೆಂಪು ಸ್ಲಾéಬ್ಗ ಹಾನಿಯಾಗಿತ್ತು. ಅದರ ಕೆಳಗಿದ್ದ ನ್ಯಾಯಾಲಯದ ಆವರಣಕ್ಕೆ ತೊಂದರೆಯಾಗಿತ್ತು. ಈ ಸರಣಿ ತೊಂದರೆಗಳಿಂದ ದೆಹಲಿ ಸರ್ಕಾರ ಈ ನಿರ್ಧಾರ ಮಾಡಿದೆ. ಜಾಮಾ ಮಸೀದಿ 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಒಂದು ಐತಿಹಾಸಿಕ ಕೇಂದ್ರ. ವಕ್ಫ್ ಮಂಡಳಿ ವ್ಯಾಪ್ತಿಯಲ್ಲಿ ಬಂದರೂ, ಇದರ ನಿರ್ವಹಣೆ ಮಾಡುತ್ತಿರುವುದು ಭಾರತೀಯ ಪುರಾತತ್ವ ಇಲಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು