11 ಜನರನ್ನು ಬಲಿತೆಗೆದುಕೊಂಡ ಅಪಘಾತಕ್ಕೆ ನೈಸ್ ಸಂಸ್ಥೆ ಹೊಣೆಯಲ್ಲ : ಅಶೋಕ್ ಖೇಣಿ
Team Udayavani, Jan 23, 2021, 7:30 PM IST
ಬೀದರ್ : ಹುಬ್ಬಳ್ಳಿ- ಧಾರವಾಡ ಹೆದ್ದಾರಿ ಮೇಲೆ ಇತ್ತಿಚೆಗೆ 11 ಜನ ಪ್ರವಾಸಿಗರ ದುರ್ಮರಣ ಮನಸ್ಸಿಗೆ ನೋವಾಗಿದೆ. ಆದರೆ, ಈ ಘಟನೆಗೆ ರಸ್ತೆ ಗುತ್ತಿಗೆ ಪಡೆದಿರುವ ನೈಸ್ ಸಂಸ್ಥೆ ಹೊಣೆ ಎಂಬ ಆರೋಪ ಸುಳ್ಳು ಎಂದು ನೈಸ್ ಮುಖ್ಯಸ್ಥರಾದ ಮಾಜಿ ಶಾಸಕ ಅಶೋಕ ಖೇಣಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲಿಲ್ಲ. ಹೆದ್ದಾರಿ ಮೇಲೆ ಸಾಕಷ್ಟು ವಾಹನ ದಟ್ಟಣೆ ಹೆಚ್ಚಿದೆ. ಹಾಗಾಗಿ ರಸ್ತೆಯನ್ನು ಈ ಹಿಂದೆ 4 ಲೈನ್ ಮತ್ತು 6 ಲೈನ್ ಆಗಿ ಮೇಲ್ದರ್ಜೇಗೇರಿಸಬೇಕೆಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಇಬ್ಬರು ಸಚಿವರ ಕಿತ್ತಾಟದಿಂದಾಗಿ ಹಾಗೆಯೇ ಉಳಿದಿದೆ.
ಇದನ್ನೂ ಓದಿ:ಫೆಬ್ರವರಿಯಿಂದ ರೈಲುಗಳಲ್ಲೇ ದೊರೆಯಲಿದೆ ಆಹಾರ; 10 ತಿಂಗಳುಗಳ ಬಳಿಕ ಸೇವೆ ಪುನರಾರಂಭ
ಘಟನೆ ಬಳಿಕ ಸ್ಥಳೀಯ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ ಎಂದು ಹೇಳಿದರು.