ಬೆಳಗಾವಿ ಶಾಂತವಾಗಿದ್ದು,ಬೆಂಕಿ ಬಿದ್ದಿಲ್ಲ;ಪುಂಡರನ್ನೇ ಬಂಧಿಸಲಾಗಿದೆ: ಸರಕಾರ
Team Udayavani, Dec 20, 2021, 12:17 PM IST
ಬೆಳಗಾವಿ: ಜಿಲ್ಲೆಯಲ್ಲಿ ಪುಂಡಾಟಿಕೆ ಮಾಡಿದವರನ್ನೇ ಬಂಧಿಸಲಾಗಿದ್ದು, ಹಿಂದಿನ ಸರ್ಕಾರಗಳು ಯಾವತ್ತಿಗೂ ಈ ರೀತಿಯ ಕೆಲಸವನ್ನು ಮಾಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಮವಾರ ಹೇಳಿಕೆ ನೀಡಿದ್ದಾರೆ.
ಪ್ರಮುಖರನ್ನು ಅರೆಸ್ಟ್ ಮಾಡಿ, ನಿಯಂತ್ರಣ ಮಾಡಿಸಿದ್ದೇವೆ. ಮಹಾರಾಷ್ಟ್ರ ಸರ್ಕಾರದ ಹೋಮ್ ಸೆಕ್ರೆಟರಿ ಜೊತೆ ಮಾತನಾಡಿದ್ದೇವೆ. ನಮ್ಮ ಡಿಜಿಯವರು ಅಲ್ಲಿನ ಸೆಕ್ರೆಟರಿ ಜೊತೆ ಮಾತಾಡಿದ್ದಾರೆ. ಕನ್ನಡಿಗರ ಆಸ್ತಿ ಪಾಸ್ತಿ ರಕ್ಷಣೆ ಮಾಡಬೇಕು, ಅಲ್ಲಿನ ವಾಹನಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದ್ದೇವೆ. ಇವತ್ತು ಕೂಡ ಅವರಿಗೆ ಮಾತಾಡಲು ನಿರ್ದೇಶನ ಕೊಡುತ್ತೇನೆ, ಈ ರೀತಿ ಕಾನೂನು ಸುವ್ಯವಸ್ಥೆ ಕೈಗೆ ಎತ್ತಿಕೊಂಡರೆ, ಅತ್ಯಂತ ಬಿಗಿಯಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಒಂದು ನಿರ್ಣಯ ಮಾಡಿ, ಈ ರೀತಿ ಘಟನೆ ಆಗದ ರೀತಿ ಕ್ರಮ ವಹಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ :ರಾಯಣ್ಣ ಪ್ರತಿಮೆ ವಿರೂಪದ ಹಿಂದೆ ಎಂಇಎಸ್ ಕೈವಾಡವಿದೆಯೆಂದು ಹೇಳಲಾಗದು: ಡಿಕೆಶಿ
ಇಲ್ಲಿ ಬೆಂಕಿ ಬಿದ್ದಿಲ್ಲ
ಗೃಹ ಸಚಿವ ಆರಗ ಜ್ಙಾನೇಂದ್ರ ಅವರು ಮಾತನಾಡಿ, ಬೆಳಗಾವಿಯಲ್ಲಿ ಏನೂ ಬೆಂಕಿ ಬಿದ್ದಿಲ್ಲ, ಶಾಂತವಾಗಿದೆ. ಕನ್ನಡಿಗರು, ಮರಾಠಿಗರು ಸೌಹಾರ್ದಯುತವಾಗಿದ್ದಾರೆ. ಕನ್ನಡ ಸಂಘಟನೆಗಳು ಶಾಂತಯುತವಾಗಿ ಪ್ರತಿಭಟಿಸಲಿ ಎಂದರು.
ಎಂಇಎಸ್ ಅನ್ನು ಜನರೇ ಬ್ಯಾನ್ ಮಾಡಿದ್ದಾರೆ. ಎಂಇಎಸ್ ಬ್ಯಾನ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು. ಸಿಎಂ ಜೊತೆ ಇದರ ಬಗ್ಗೆ ಚರ್ಚಿಸಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ