ಪಶ್ಚಿಮಬಂಗಾಳ: ತಂದೆ, ತಾಯಿ, ಅಜ್ಜಿ, ಸಹೋದರಿ ಹತ್ಯೆ: ಯುವಕನ ಬಂಧನ
ಶವಗಳನ್ನು ಮನೆ ಸಮೀಪದ ಗೋಡೌನ್ ನಲ್ಲಿ ಹೂತು ಹಾಕಿರುವುದಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.
Team Udayavani, Jun 19, 2021, 1:51 PM IST
ಕೋಲ್ಕತಾ: ಕಳೆದ ಫೆಬ್ರುವರಿಯಲ್ಲಿ ತಂದೆ, ತಾಯಿ, ಅಜ್ಜಿ ಹಾಗೂ ಸಹೋದರಿಯನ್ನು ಕೊಂದ ಆರೋಪದಲ್ಲಿ 19 ವರ್ಷದ ಯುವಕನನ್ನು ಶನಿವಾರ(ಜೂನ್ 19) ಪಶ್ಚಿಮಬಂಗಾಳದ ಮಾಲ್ಡಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸೇನಾ ಸಮವಸ್ತ್ರ ಧರಿಸಿ ಓಡಾಡುತ್ತಿದ್ದ ನಕಲಿ ಸೇನಾ ಅಧಿಕಾರಿ ದೆಹಲಿ ಪೊಲೀಸರ ಬಲೆಗೆ
ಆರೋಪಿ ಅಸೀಫ್ ಮೊಹಮ್ಮದ್ ಹಿರಿಯ ಸಹೋದರ ಶುಕ್ರವಾರ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ತನ್ನನ್ನು ಕೂಡಾ ಸಹೋದರ ಕೊಲ್ಲಲು ಪ್ರಯತ್ನಿಸಿದ್ದು, ತಾನು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾನೆ.
21 ವರ್ಷದ ಆರೀಫ್ ತನ್ನ ದೂರಿನಲ್ಲಿ, ತನಗೆ ತೀವ್ರ ಭಯವಾದ ಕಾರಣ ಈ ಮೊದಲು ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿಸಿದ್ದಾನೆ. ಆಸೀಫ್, ತನ್ನ ಪೋಷಕರು, ಅಜ್ಜಿ ಹಾಗೂ ಸಹೋದರಿಯನ್ನು ಫೆ.28ರಂದು ನೀರಿನಲ್ಲಿ ಮುಳುಗಿಸಿ ಕೊಂದಿದ್ದ. ನಂತರ ಅವರ ಶವಗಳನ್ನು ಮನೆ ಸಮೀಪದ ಗೋಡೌನ್ ನಲ್ಲಿ ಹೂತು ಹಾಕಿರುವುದಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ವಿಚಾರಣೆಗೊಳಪಡಿಸಿರುವುದಾಗಿ ತಿಳಿಸಿದ್ದಾರೆ. ಕೊಲೆ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಮನೆಯ ಸಮೀಪ ಜನರು ಸೇರಿದ್ದು, ಈ ಸಂದರ್ಭದಲ್ಲಿ ಸಚಿವರು ಕೂಡಾ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು