ಮಿತ್ರಪಕ್ಷ ಎಐಎಡಿಎಂಕೆಗೆ ದಿಟ್ಟ ತಿರುಗೇಟು ನೀಡಿದ BJP ರಾಜ್ಯಾಧ್ಯಕ್ಷ ಅಣ್ಣಾಮಲೈ
ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಂದಿದ್ದೇನೆ.....ನಾನು ಬೇಟೆಯಾಡಲು ನಿರ್ಧರಿಸಿದರೆ...... !
Team Udayavani, Mar 8, 2023, 8:53 PM IST
ಚೆನ್ನೈ: ಮಿತ್ರ ಪಕ್ಷ ಎಐಎಡಿಎಂಕೆ ರಾಜ್ಯದಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಬೇಟೆಯಾಡುತ್ತಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಆರೋಪಿಸಿದ್ದಾರೆ. ಬಿಜೆಪಿ ಐಟಿ ವಿಭಾಗದ ಮಾಜಿ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್ ಸೇರಿದಂತೆ ಕೆಲವು ಬಿಜೆಪಿ ಪ್ರಮುಖ ಮುಖಂಡರು ಎಐಎಡಿಎಂಕೆಗೆ ಸೇರಿದ ನಂತರ ಈ ಹೇಳಿಕೆ ನೀಡಿದ್ದಾರೆ.
ಕೆ ಅಣ್ಣಾಮಲೈ ಅವರು ಎಐಎಡಿಎಂಕೆಗೆ ಎಚ್ಚರಿಕೆ ನೀಡಿದ್ದು, “ನಾನು ಶಾಪಿಂಗ್ ಮಾಡಲು (ಬೇಟೆಯಾಡಲು) ನಿರ್ಧರಿಸಿದರೆ, ನನ್ನ ಶಾಪಿಂಗ್ ಪಟ್ಟಿ ದೊಡ್ಡದಾಗಿರುತ್ತದೆ. ಆದರೆ ಸಮಯ ಮತ್ತು ಸ್ಥಳವನ್ನು ನಾನು ನಿರ್ಧರಿಸುತ್ತೇನೆ ಎಂದಿದ್ದಾರೆ.
ಎಐಎಡಿಎಂಕೆ ಹಂಗಾಮಿ ಅಧ್ಯಕ್ಷ ಕೆ. ಪಳನಿಸ್ವಾಮಿ ವಿರುದ್ಧ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದು, “ತಮಿಳುನಾಡಿನ ಮಾಜಿ ಸಿಎಂ ಒಬ್ಬರು ಬಿಜೆಪಿಯಿಂದ ಎರಡನೇ ಹಂತ, ಮೂರನೇ ಹಂತ, ನಾಲ್ಕನೇ ಹಂತ ಮತ್ತು ಐದನೇ ಹಂತದ ಕಾರ್ಯಕರ್ತರನ್ನು ತೆಗೆದುಕೊಳ್ಳಲು ಬಯಸಿದ್ದು, ವೈಯಕ್ತಿಕವಾಗಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಅವರನ್ನು ಅವರ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ.ಇದು ತಮಿಳುನಾಡಿನಲ್ಲಿ ಬಿಜೆಪಿ ಬೆಳೆದಿದೆ ಎಂಬುದನ್ನು ತೋರಿಸುತ್ತದೆ. ನಾವು ಇತರ ದ್ರಾವಿಡ ಪಕ್ಷಗಳ ನಾಯಕರನ್ನು ಬೇಟೆಯಾಡಿ ಬಿಜೆಪಿಯನ್ನು ಬೆಳೆಯಲು ಸಹಾಯ ಮಾಡಬೇಕಾದ ಸಮಯವಿತ್ತು. ಈಗ ಕೆಲವು ದ್ರಾವಿಡ ಪಕ್ಷಗಳು ಬೆಳೆಯಬೇಕಾದರೆ ಅವರು ಬಿಜೆಪಿಯಿಂದ ನಾಯಕರನ್ನು ಬೇಟೆಯಾಡಬೇಕಾಗಿದೆ ಎಂದು ದಿಟ್ಟ ತಿರುಗೇಟು ನೀಡಿದ್ದಾರೆ.
“ಕುರುಕ್ಷೇತ್ರ ಯುದ್ಧದ ಮೊದಲು, ಜನರಿಗೆ ಶಿಬಿರಗಳನ್ನು ಬದಲಾಯಿಸಲು ಅವಕಾಶ ನೀಡಲಾಯಿತು. ಇನ್ನು ಕೆಲವೇ ತಿಂಗಳುಗಳಲ್ಲಿ ಪ್ರಾರಂಭವಾಗುವ ಯುದ್ಧವು ಎಲ್ಲರೂ ಸ್ಥಾನಗಳನ್ನು ಪಡೆದುಕೊಳ್ಳಲಿ ಎಂದರು.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ. ನಾನು ಚಪಾತಿ, ದೋಸೆ ಮಾಡಲು ಬಂದಿಲ್ಲ. ನಾನು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಂದಿದ್ದೇನೆ. ನಾನು ಬಿಜೆಪಿಯ ಮ್ಯಾನೇಜರ್ ಅಲ್ಲ. ನಾನೊಬ್ಬ ಬಿಜೆಪಿ ನಾಯಕ. ನೀವು ಏನು ಮಾಡಿದರೂ ನಾನೂ ಮಾಡುತ್ತೇನೆ ಎಂದು ಕೆ ಅಣ್ಣಾಮಲೈ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ