ಸಿಡಿ ಪ್ರಕರಣ: ಎಸ್ಐಟಿ ಅಧಿಕಾರಿಗಳ ವಾಟ್ಸ್ ಆ್ಯಪ್ಗೆ ಕನ್ನ?
ಮೊಬೈಲ್ ಹ್ಯಾಕ್ಗೆ ಮುಂದಾಗಿದ್ದ ಶ್ರವಣ್?
Team Udayavani, Mar 25, 2021, 6:45 AM IST
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ತಮ್ಮ ವಿರುದ್ಧ ಯಾವ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಯಲು ತನಿಖಾಧಿಕಾರಿಗಳ ಮೊಬೈಲ್ಗಳನ್ನೇ ಹ್ಯಾಕ್ ಮಾಡಲು ಮುಂದಾಗಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣದ ಕಿಂಗ್ಪಿನ್ ಎನ್ನಲಾದ ಪತ್ರಕರ್ತ ನರೇಶ್ ಡ, ಶ್ರವಣ್, ಸಿಡಿ ಪ್ರಕರಣದ ಯುವತಿ, ಉದ್ಯಮಿ ಶಿವಕುಮಾರ್, ಕಾರು ಚಾಲಕ ನಾಪತ್ತೆಯಾಗಿದ್ದಾರೆ. ಈ ಪೈಕಿ ಶ್ರವಣ್ ತಾಂತ್ರಿಕ ಪರಿಣಿತ . ಕೆಲವು ಆ್ಯಪ್ಗಳು, ಸಾಫ್ಟ್ವೇರ್ ಗಳನ್ನು ಬಳಸಿ ಲೊಕೇಶನ್ ಗಳನ್ನೇ ಹ್ಯಾಕ್ ಮಾಡಿ ಉತ್ತರ ಭಾರತದ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಬೆನ್ನು ಬಿದ್ದಿರುವ ಎಸ್ಐಟಿ ಅಧಿಕಾರಿಗಳ ದಿಕ್ಕುತಪ್ಪಿಸುತ್ತಿದ್ದಾರೆ ಎನ್ನಲಾಗಿದೆ.
ಗೊತ್ತಾಗಿದ್ದು ಹೇಗೆ?
ಇತ್ತೀಚೆಗೆ ಎಸ್ಐಟಿಯ ಕೆಲವು ಅಧಿಕಾರಿಗಳಿಗೆ ನಿರಂತರವಾಗಿ ವಾಟ್ಸ್ ಆ್ಯಪ್ ಒಟಿಪಿ ಸಂದೇಶಗಳು ಬಂದಿವೆ. ಅನುಮಾನಗೊಂಡ ಅಧಿಕಾರಿಗಳು ಸೈಬರ್ ವಿಭಾಗದಲ್ಲಿ ಪರಿಶೀಲಿಸಿದಾಗ ಹ್ಯಾಕಿಂಗ್ ಒಟಿಪಿಗಳಾಗಿದ್ದು, ನಿರ್ದಿಷ್ಟ ವ್ಯಕ್ತಿಯೇ ಈ ರೀತಿ ಮಾಡುತ್ತಿದ್ದಾನೆ ಎಂಬುದು ಪತ್ತೆಯಾಗಿದೆ. ಅದರ ಜಾಡು ಹಿಡಿದಾಗ ಸಿಡಿ ಆರೋಪಿಗಳೇ ಈ ಕೃತ್ಯ ಎಸಗುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಐವರು ನಾಪತ್ತೆ
ಆರೋಪಿಗಳ ಬೆನ್ನುಬಿದ್ದ ಎಸ್ಐಟಿಗೆ ಮತ್ತೂಂದು ಸ್ಫೋಟಕ ವಿಚಾರ ತಿಳಿದುಬಂದಿದೆ. ಮಾ. 10ರಿಂದ 18ರ ವರೆಗೆ ನರೇಶ್ ಗೌಡ, ಶ್ರವಣ್, ಸಿಡಿ ಲೇಡಿ, ಉದ್ಯಮಿ ಶಿವಕುಮಾರ್, ಆತನ ಕಾರು ಚಾಲಕ ಒಟ್ಟಿಗೆ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೊಟೇಲ್, ಲಾಡ್ಜ್ ಗಳ ನೋಂದಣಿ ಪುಸ್ತಕದಲ್ಲಿ ಒಬ್ಬರ ಹೆಸರು ಬರೆದು +2, +5 ಎಂದು ನಮೂದಿಸಿದ್ದಾರೆ. ಅನಂತರ ಪ್ರತ್ಯೇಕವಾಗಿ ತೆರಳಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮಾ. 2ರಂದು ಸಿಡಿ ಬಿಡುಗಡೆ ಬಳಿಕ ಮಾ. 7ರ ವರೆಗೆ ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಬಂಧನ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಆರೋ ಪಿ ಗಳ ಜತೆ ನಿಕಟ ಸಂಪರ್ಕದಲ್ಲಿದ್ದವರು, ಸ್ನೇಹಿತರು, ಸಂಬಂಧಿಕರು ಸೇರಿ ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಎಸ್ಐಟಿ ಮುಂದಾಗಿದೆ.
ನಕಲಿ ನಂಬರ್, ನಕಲಿ ಹೆಸರು!
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ತಾವು ತಂಗುವ ಹೊಟೇಲ್, ಲಾಡ್ಜ್ ಗಳು, ರೆಸಾರ್ಟ್ಗಳ ನೋಂದಣಿ ಪುಸ್ತಕದಲ್ಲಿ ಅಪರಿಚಿತರ ಹೆಸರು, ಮೊಬೈಲ್ ನಂಬರ್ ಗಳನ್ನು ಉಲ್ಲೇಖೀಸಿದ್ದಾರೆ. ಆರೋಪಿಗಳ ಲೊಕೇಷನ್ ಸಂಗ್ರಹಿಸಿ ನಿಗದಿತ ಸ್ಥಳಕ್ಕೆ ಹೋಗುವ ಕೆಲ ಹೊತ್ತಿನಲ್ಲೇ ಸ್ಥಳದಲ್ಲಿ ಕಾಲ್ಕಿಳುತ್ತಿದ್ದಾರೆ. ಬಳಿಕ ಅಲ್ಲಿನ ಸಿಸಿ ಕೆಮರಾ ಶೋಧಿಸಿದಾಗ ಆರೋಪಿಗಳು ಓಡಾಡಿರುವ ದೃಶ್ಯ ಗಳು ಸೆರೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
MUST WATCH
ಹೊಸ ಸೇರ್ಪಡೆ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು