Duleep Trophy ಸೆಮಿಫೈನಲ್‌: ದಕ್ಷಿಣದ ಗೆಲುವಿಗೆ 215 ರನ್‌ ಗುರಿ

ವೈಶಾಖ್‌ ವಿಜಯ್‌ಕುಮಾರ್‌ಗೆ 5 ವಿಕೆಟ್‌  ಪಂದ್ಯಕ್ಕೆ ಮಳೆಯಿಂದ ಅಡಚಣೆ

Team Udayavani, Jul 8, 2023, 5:54 AM IST

vaishak duleep

ಬೆಂಗಳೂರು: ದುಲೀಪ್‌ ಟ್ರೋಫಿ ಪಂದ್ಯಾವಳಿಯ ಫೈನಲ್‌ ಪ್ರವೇಶಿಸಲು ಆತಿಥೇಯ ದಕ್ಷಿಣ ವಲಯ 215 ರನ್ನುಗಳ ಸವಾಲು ಪಡೆದಿದೆ. ಮಳೆಯಿಂದ ಶುಕ್ರವಾರದ ಆಟ ಬೇಗನೇ ಕೊನೆಗೊಂಡಾಗ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿತ್ತು.

ಕರ್ನಾಟಕದ ಬಲಗೈ ಮಧ್ಯಮ ವೇಗಿ ವೈಶಾಖ್‌ ವಿಜಯ್‌ಕುಮಾರ್‌ 76ಕ್ಕೆ 5 ವಿಕೆಟ್‌ ಉಡಾಯಿಸಿ ಉತ್ತರ ವಲಯಕ್ಕೆ ಬಿಸಿ ಮುಟ್ಟಿಸಿದರು. ಮೂರೇ ರನ್ನುಗಳ, ಆದರೆ ಬಹುಮೂಲ್ಯ ಲೀಡ್‌ ಪಡೆದಿದ್ದ ಉತ್ತರ ವಲಯ ತನ್ನ ದ್ವಿತೀಯ ಸರದಿಯನ್ನು 211ಕ್ಕೆ ಮುಗಿಸಿತು.

ಫೈನಲ್‌ ಪ್ರವೇಶಿಸಬೇಕಾದರೆ ದಕ್ಷಿಣ ವಲಯ ಸ್ಪಷ್ಟ ಗೆಲುವು ಸಾಧಿಸ ಬೇಕಾ ದುದು ಅನಿವಾರ್ಯ. ಅಕಸ್ಮಾತ್‌ ಅಂತಿಮ ದಿನದಾಟಕ್ಕೆ ಮಳೆಯಿಂದ ಅಡಚಣೆ ಯಾಗಿ ಪಂದ್ಯ ಡ್ರಾಗೊಂಡರೆ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಉತ್ತರ ವಲಯ ಪ್ರಶಸ್ತಿ ಸುತ್ತು ತಲುಪಲಿದೆ.

ಉತ್ತರ ವಲಯದ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಮಿಂಚಿದ ಆಟಗಾರನೆಂದರೆ ಕೀಪರ್‌ ಪ್ರಭ್‌ಸಿಮ್ರಾನ್‌. ಅವರು 63 ರನ್‌ ಹೊಡೆದರು. ಹರ್ಷಿತ್‌ ರಾಣಾ ಅನಂ ತರದ ಹೆಚ್ಚಿನ ಸ್ಕೋರರ್‌ (38). ಅಂಕಿತ್‌ ಕಲ್ಸಿ 29, ಅಂಕಿತ್‌ ಕುಮಾರ್‌ 26 ರನ್‌ ಹೊಡೆದರು. ಸಾಯಿ ಕಿಶೋರ್‌ (28ಕ್ಕೆ 3) ಮತ್ತು ವಿದ್ವತ್‌ ಕಾವೇರಪ್ಪ (47ಕ್ಕೆ 2) ಅವರಿಂದ ವಿಜಯ್‌ಕುಮಾರ್‌ಗೆ ಉತ್ತಮ ಬೆಂಬಲ ಲಭಿಸಿತು.

ಮೊದಲ ಸರದಿಯಲ್ಲಿ ಮಿಂಚಿದ ಮಾಯಾಂಕ್‌ ಅಗರ್ವಾಲ್‌ 15 ಹಾಗೂ ಸಾಯಿ ಸುದರ್ಶನ್‌ 5 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಪಿಚ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವ ಕಾರಣ ಹನುಮ ವಿಹಾರಿ ಬಳಗ ತೀವ್ರ ಎಚ್ಚರಿಕೆಯಿಂದ ಚೇಸಿಂಗ್‌ ನಡೆಸಬೇಕಿದೆ.

ಸಂಕ್ಷಿಪ್ತ ಸ್ಕೋರ್‌: ಉತ್ತರ ವಲಯ- 198 ಮತ್ತು 211 (ಪ್ರಭ್‌ಸಿಮ್ರಾನ್‌ 63, ಹರ್ಷಿತ್‌ ರಾಣಾ 38, ಅಂಕಿತ್‌ ಕಲ್ಸಿ 29, ಅಂಕಿತ್‌ ಕುಮಾರ್‌ 26, ವಿಜಯ್‌ಕುಮಾರ್‌ ವೈಶಾಖ್‌ 76ಕ್ಕೆ 5, ಸಾಯಿ ಕಿಶೋರ್‌ 28ಕ್ಕೆ 3, ವಿದ್ವತ್‌ ಕಾವೇರಪ್ಪ 47ಕ್ಕೆ 2). ದಕ್ಷಿಣ ವಲಯ-195 ಮತ್ತು ವಿಕೆಟ್‌ ನಷ್ಟವಿಲ್ಲದೆ 21 (ಅಗರ್ವಾಲ್‌ ಬ್ಯಾಟಿಂಗ್‌ 15, ಸಾಯಿ ಸುದರ್ಶನ್‌ ಬ್ಯಾಟಿಂಗ್‌ 5).

ಪೂಜಾರ ಶತಕದ ಆಟ
ಆಲೂರು: ಟೆಸ್ಟ್‌ ತಂಡದಿಂದ ಬೇರ್ಪಟ್ಟ ಚೇತೇಶ್ವರ್‌ ಪೂಜಾರ ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿ ತನ್ನ ಆಟವಿನ್ನೂ ಮುಗಿದಿಲ್ಲ ಎಂದು ಸಾರಿದ್ದಾರೆ. ಇವರ 133 ರನ್‌ ಸಾಹಸದಿಂದ ಮಧ್ಯ ವಲಯ ವಿರುದ್ಧ ಪಶ್ಚಿಮ ವಲಯ 9 ವಿಕೆಟಿಗೆ 292 ರನ್‌ ಗಳಿಸಿದೆ. ಒಟ್ಟು ಮುನ್ನಡೆಯನ್ನು 384ಕ್ಕೆ ವಿಸ್ತರಿಸಿ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.
ಈ ಪಂದ್ಯಕ್ಕೂ ಮಳೆಯಿಂದ ಅಡಚಣೆಯಾಯಿತು. ಪಶ್ಚಿಮ ವಲಯ 3ಕ್ಕೆ 149 ರನ್‌ ಗಳಿಸಿದಲ್ಲಿಂದ ತೃತೀಯ ದಿನದಾಟ ಮುಂದುವರಿಸಿತ್ತು. ಪೂಜಾರ 50 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ದಿನದ ಮೊದಲ ಎಸೆತದಲ್ಲೇ ಸಫ‌ìರಾಜ್‌ ವಿಕೆಟ್‌ ಬಿತ್ತು. ಅವರ ಗಳಿಕೆ ಆರೇ ರನ್‌.

ಒಂದೆಡೆ ವಿಕೆಟ್‌ ಉರುಳುತ್ತ ಹೋದರೂ ಪೂಜಾರ ಕ್ರೀಸ್‌ ಆಕ್ರಮಿಸಿಕೊಂಡು ಇನ್ನಿಂಗ್ಸ್‌ ಬೆಳೆಸುತ್ತ ಹೋದರು. ಲಂಚ್‌ ವೇಳೆ 92 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಬಳಿಕ ಸೌರಭ್‌ ಖಾನ್‌ ಓವರ್‌ನಲ್ಲಿ 2 ಬೌಂಡರಿ ಬಾರಿಸಿ ಸೆಂಚುರಿ ಪೂರೈಸಿದರು.

ಶತಕದ ಬಳಿಕ ಪೂಜಾರ ಬಿರುಸಿನ ಆಟಕ್ಕಿಳಿದರು. ಅವರ 133 ರನ್‌ 278 ಎಸೆತಗಳಿಂದ ಬಂತು. ಇದರಲ್ಲಿ 14 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಅವರು 9ನೇ ವಿಕೆಟ್‌ ರೂಪದಲ್ಲಿ ರನೌಟ್‌ ಆಗಿ ಪೆವಿಲಿಯನ್‌ ಸೇರಿಕೊಂಡರು.

ಪೂಜಾರ ಹೊರತುಪಡಿಸಿದರೆ ಶುಕ್ರವಾರದ ಆಟದಲ್ಲಿ ಎರಡಂಕೆಯ ಗಡಿ ತಲುಪಿದ ಪಶ್ಚಿಮ ವಲಯದ ಏಕೈಕ ಆಟಗಾರನೆಂದರೆ ಕೀಪರ್‌ ಹೆಟ್‌ ಪಟೇಲ್‌ (27). ಶನಿವಾರ ಪಂದ್ಯದ ಅಂತಿಮ ದಿನ. ಪಂದ್ಯ ಡ್ರಾಗೊಂಡರೆ ಪಶ್ಚಿಮ ವಲಯ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಫೈನಲ್‌ ಪ್ರವೇಶಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಪಶ್ಚಿಮ ವಲಯ-220 ಮತ್ತು 9 ವಿಕೆಟಿಗೆ 292 (ಪೂಜಾರ 133, ಸೂರ್ಯ 52, ಹೆಟ್‌ ಪಟೇಲ್‌ 27, ಪೃಥ್ವಿ ಶಾ 25, ಸೌರಭ್‌ ಕುಮಾರ್‌ 79ಕ್ಕೆ 4, ಸಾರಾಂಶ್‌ ಜೈನ್‌ 56ಕ್ಕೆ 3). ಮಧ್ಯ ವಲಯ-128.

ಟಾಪ್ ನ್ಯೂಸ್

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.