ಸದನದಲ್ಲಿ ರಾಮ ಜಪ : ನಗೆಗಡಲಲ್ಲಿ ಕಲಾಪ
ನಮ್ಮ ಮನೆ ದೇವರ ಹೆಸರು ಇಟ್ಟುಕ್ಕೊಂಡು ನೀವು ಹೀಗಾಡ್ತೀರಲ್ಲ
Team Udayavani, Mar 23, 2022, 4:48 PM IST
ವಿಧಾನಸಭೆ : ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೆಣಕಿದ್ದು ಸದನದಲ್ಲಿ ಹಾಸ್ಯಮಯ ವಾತಾವರಣವನ್ನು ನಿರ್ಮಿಸಿತು.
ಮಧ್ಯಾಹ್ನದ ಕಲಾಪ ಸಂದರ್ಭದಲ್ಲಿ ಸಿದ್ದರಾಮಯ್ಯ ಮಧ್ಯ ಪ್ರವೇಶಕ್ಕೆ ಎದ್ದು ನಿಂತಾಗ ” ಒಂದು ನಿಮಿಷ ಸಾರ್, ದೇವರಾಗಿ.. ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ ಎಂದು ವ್ಯಂಗ್ಯವಾಡಿದರು.
ನಿಮ್ಮ ಮನೆ ದೇವರು ಯಾರು ಸಾರ್ ಎಂದು ಸಚಿವ ಸುಧಾಕರ್ ಪ್ರಶ್ನಿಸಿದಾಗ ಮಾಧುಸ್ವಾಮಿ ” ಸಿದ್ದರಾಮೇಶ್ವರ” ಎಂದು ಉತ್ತರಿಸಿದರು. ಆಗ ಮಧ್ಯ ಪ್ರವೇಶ ಮಾಡಿದ ಕಂದಾಯ ಸಚಿವ ಅಶೋಕ ” ಮನೆ ದೇವರಂತೆ ಬಿಟ್ಬಿಡಿ ಸರ್” ಎಂದರು. ನಮ್ ಮನೆ ದೇವ್ರು ಹೆಸ್ರು ಇಟ್ಕಂಡು ಇವ್ರು ಹಿಂಗಾಡ್ತಾರಲ್ರೀ ಅಶೋಕ್ ಎಂದು ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.
ಯೇ ಹಾಗೇನು ಇಲ್ರಪ್ಪಾ ನಮ್ ಮನೆ ದೇವ್ರು ಸಿದ್ದರಾಮೇಶ್ವರ, ನಮ್ ಅಪ್ಪನ್ ಹೆಸ್ರು ಸಿದ್ದರಾಮೇಗೌಡ, ನಮ್ ಊರ್ ಹೆಸ್ರು ಸಿದ್ದರಾಮನಹುಂಡಿ ಎಂದು ಸಿದ್ದರಾಮಯ್ಯ ದೇಸಿ ನಗೆ ನಕ್ಕಾಗ ” ನಾವು ಸಿದ್ದರಾಮನ ಒಕ್ಲು ಕೂತ್ಕಳಿ” ಎಂದು ಮಾಧುಸ್ವಾಮಿ ತಿರುಗೇಟು ನೀಡಿದರು.ಎಲ್ಲಾ ರಾಮ.. ರಾಮ.. ರಾಮ.. ರಾಮ.. ರಾಮ.. ಎಂದು ಅಶೋಕ್ ಚರ್ಚೆಗೆ ವಿರಾಮ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ