ದೇವರ ನೆರಳಾಗುವ ಆದರ್ಶ


Team Udayavani, Dec 24, 2020, 5:30 AM IST

ದೇವರ ನೆರಳಾಗುವ ಆದರ್ಶ

ಒಂದಾನೊಂದು ಕಾಲದಲ್ಲಿ ಒಬ್ಬ ಸಂತನಿದ್ದ. ಆತ ಎಷ್ಟು ಸದ್ಗುಣಿ ಎಂದರೆ, ದೇವರಂತಹ ಮನುಷ್ಯ ಎಂದರೆ ಹೇಗಿರುತ್ತಾನೆ ಎಂಬು ದನ್ನು ನೋಡಲು ಗಂಧರ್ವರೇ ಧರೆಗಿಳಿದು ಬಂದರು. ಸಂತ ತುಂಬ ಸರಳ ಜೀವಿ. ತಾರೆ ಗಳು ಬೆಳಕನ್ನು ಬೀರುವಂತೆ, ಹೂವುಗಳು ಕಂಪನ್ನು ಪಸರಿಸುವಂತೆ ತಾನೂ ಸದ್ಗುಣ ಗಳನ್ನು ಬೀರುತ್ತ ಆತ ಬದುಕಿದ್ದ. ಅವನ ದೈನಿಕ ಜೀವನವನ್ನು ಎರಡೇ ಎರಡು ಪದ ಗಳಲ್ಲಿ ವಿವರಿಸಬಹುದಿತ್ತು, “ಕೊಟ್ಟ, ಮರೆತ’. ಆದರೆ ಇದನ್ನು ಆತ ಹೇಳುತ್ತಲೂ ಇರಲಿಲ್ಲ. ಅವನ ಹಸನ್ಮುಖ, ಕಾರುಣ್ಯ, ಸಹನೆ, ಔದಾರ್ಯ ಗಳ ಮೂಲಕ ಅವು ವ್ಯಕ್ತಗೊಳ್ಳುತ್ತಿದ್ದವು.

ಗಂಧರ್ವರು ದೇವರಿಗೆ ವರದಿ ಒಪ್ಪಿಸಿ ದರು, “ದೇವರೇ ಈ ಸಂತ ಬಯಸಿದ್ದು ಈಡೇರುವಂತಹ ವರವನ್ನು ಅನುಗ್ರಹಿಸು’.
ದೇವರು ಸರಿ ಎಂದರು, ಸಂತನಿಗೇನು ಬೇಕು ಎಂದು ಕೇಳಿಕೊಂಡು ಬರುವಂತೆ ತಿಳಿಸಿದರು. ಗಂಧರ್ವರು ಸಂತನ ಬಳಿಗೆ ಮರಳಿ, “ನಿನ್ನ ಸ್ಪರ್ಶದಿಂದ ರೋಗ ಗುಣವಾಗುವಂತಹ ವರ ಬೇಕೇ’ ಎಂದು ಕೇಳಿದರು. ಸಂತ, “ಬೇಡ, ಅದು ದೇವರ ಕೆಲಸ’ ಎಂದ. “ಕೆಟ್ಟವರನ್ನು ಒಳ್ಳೆಯ ದಾರಿಗೆ ತರುವ ವರ ಆದೀತೆ’ ಎಂದು ಪ್ರಶ್ನಿಸಿದರು. ಆತ, “ಅದು ಗಂಧರ್ವರ ಕೆಲಸ, ನನ್ನದಲ್ಲ’ ಎಂದ. “ನಿನ್ನ ಸದ್ಗುಣಗಳಿಂದ ಎಲ್ಲರೂ ನಿನ್ನ ಬಳಿಗೆ ಆಕರ್ಷಿತರಾಗುವಂತಹ ವರ ಬೇಕೇ’ ಎಂದು ಗಂಧರ್ವರು ಕೇಳಿದರು. ಸಂತ, “ಹಾಗೆ ಆದರೆ ಎಲ್ಲರೂ ದೇವರನ್ನು ಮರೆತು ನನ್ನ ಹಿಂದೆ ಬಿದ್ದಾರು, ಅದಾಗದು’ ಎಂದ. “ನೀವು ಏನನ್ನೂ ಕೇಳದೆ ಇದ್ದರೆ ನಾವೇ ಯಾವುದಾದರೊಂದು ವರವನ್ನು ಒತ್ತಾಯ ಪೂರ್ವಕ ಕೊಡಬೇಕಾದೀತು’ ಎಂದರು ಗಂಧರ್ವರು. ಸಂತ, “ಅದು ಆಗಬಹುದು. ಆದರೆ ಅದು ನನ್ನ ಅರಿವಿಗೆ ಬರಬಾರದು’ ಎಂದು ಒಪ್ಪಿಕೊಂಡ.

ಗಂಧರ್ವರಿಗೆ ಸಂತೃಪ್ತಿಯಾಯಿತು. ಅವರು ಸಂತನ ಎರಡೂ ಪಾರ್ಶ್ವಗಳು ಮತ್ತು ಬೆನ್ನ ಹಿಂದೆ ಬೀಳುವ ಅವನ ನೆರಳಿಗೆ ರೋಗ, ಸಂಕಟ, ದುಃಖ ಶಮನಕಾರಿ ಶಕ್ತಿಯನ್ನು ಅನುಗ್ರಹಿಸಿದರು.

ಆ ಬಳಿಕ ಸಂತ ಹೋದ ಹಾದಿಯುದ್ದಕ್ಕೂ ಹಸುರು ಬೆಳೆಯಿತು. ಅದರಲ್ಲಿ ನಡೆದಾಡಿದ ವರ ದುಃಖಗಳು ಇಲ್ಲವಾದವು, ರೋಗ ಗಳು ಗುಣವಾದವು. ಸಂಕಟಗಳು ಶಮನ ಗೊಂಡವು. ಸಂತ ಇದ್ಯಾವುದರ ಅರಿವೂ ಇಲ್ಲದೆ ಸದ್ಗುಣಗಳ ಕಂಪನ್ನು ಸೂಸುತ್ತ ಬದುಕಿದ್ದ. ಅವನ ಗುಣಶ್ರೇಷ್ಠತೆಯನ್ನು ಮೆಚ್ಚುತ್ತ, ಗೌರವಿಸುತ್ತ ಜನರು ಮೌನವಾಗಿ ಅವನನ್ನು ಹಿಂಬಾಲಿಸುತ್ತಿದ್ದರು. ಕೊನೆ ಕೊನೆಗೆ ಅವನ ನೈಜ ಹೆಸರು ಕೂಡ ಎಲ್ಲರಿಗೂ ಮರೆತು ಹೋಯಿತು. ಅವನು “ದೇವರ ನೆರಳು’ ಎಂದೇ ಪ್ರಸಿದ್ಧನಾದ.

ಇದೊಂದು ಕಥೆ ನಿಜ. ಆದರೆ “ದೇವರ ನೆರಳು’ ಎನ್ನುವುದು ಮನುಷ್ಯನು ಮುಟ್ಟಬಹುದಾದ ಅತ್ಯುನ್ನತ ಸ್ಥಿತಿ. ನಮ್ಮೊಳಗೆ ಸಂಭವಿಸ ಬಹುದಾದ ಅತ್ಯುನ್ನತ ಪರಿ ವರ್ತನೆ ಇದು – ಮನುಷ್ಯ ಎಂಬ ಕೇಂದ್ರದ ಪಲ್ಲಟ. ಇಂತಹ ಸ್ಥಿತಿಯಲ್ಲಿ ನಮಗೆ ನಮ್ಮದೇ ಆದ ಕೇಂದ್ರ ಎಂಬುದು ಇರುವುದಿಲ್ಲ; ದೇವರೇ ಕೇಂದ್ರವಾಗಿರುತ್ತಾನೆ, ನಾವು ಅವನ ನೆರಳಾಗಿ ರುತ್ತೇವೆ. ನಾವು ಶಕ್ತಿಶಾಲಿಗಳಾಗಿರುವುದಿಲ್ಲ, ಯಾಕೆಂದರೆ ಶಕ್ತಿಯ ಕೇಂದ್ರ ನಮ್ಮಲ್ಲಿರು ವುದಿಲ್ಲ. ನಾವು ಸದ್ಗುಣಿ ಗಳೂ ಆಗಿರುವುದಿಲ್ಲ, ಗುಣಗಳ ಕೇಂದ್ರ ನಮ್ಮಲ್ಲಿರುವುದಿಲ್ಲ. ನಾವು ಧರ್ಮವಂತರೂ ಆಗಿರುವುದಿಲ್ಲ, ಏಕೆಂದರೆ ಧರ್ಮದ ಕೇಂದ್ರ ನಮ್ಮೊಳಗಿರುವುದಿಲ್ಲ. ನಾವು ಏನೂ ಅಲ್ಲ ಎಂಬ ಅತ್ಯುನ್ನತ ಶೂನ್ಯ, ಯಾವ ಅಡೆತಡೆ, ಚೌಕಟ್ಟುಗಳೂ ಇಲ್ಲದ ಶೂನ್ಯವು ನಮ್ಮ ಮೂಲಕ ದೈವಿಕತೆಯನ್ನು ಹರಿಯಿಸುತ್ತದೆ. ಆ ದೈವಿಕತೆಯ ಹರಿಯು ವಿಕೆಯು ನಮ್ಮೊಳಗೆ ನಿಲ್ಲುವುದೂ ಇಲ್ಲ, ಏಕೆಂದರೆ ಅಲ್ಲಿ ನಿಲ್ಲುವಂತಹ ಕೇಂದ್ರವಿಲ್ಲ. ಅದು ನಮ್ಮ ಮೂಲಕ ಹರಿಯುತ್ತಿರುತ್ತದೆ.

“ನಾನು’ ಎಂಬುದು ಇಲ್ಲವಾಗಿ ನಾವು ದೇವರವರು ಆಗುವುದು ಹೀಗೆ. ಆಗ ನಾವೂ “ದೇವರ ನೆರಳು’ಗಳಾಗುತ್ತೇವೆ.
(ಸಾರ ಸಂಗ್ರಹ)

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.