ಹಾವೇರಿ : ಎರಡು ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ : ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು
Team Udayavani, Jan 15, 2022, 8:25 PM IST
ಹಾವೇರಿ :ರಟ್ಟೀಹಳ್ಳಿ ಸಮೀಪದ ಕಡೂರ ರಸ್ತೆಯಲ್ಲಿ ಶನಿವಾರ ಸಂಜೆ ಲಾರಿ ಮತ್ತು ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, ಸ್ಥಳದಲ್ಲಿಯೇ ನಾಲ್ಕು ಜನರು ಮೃತ ಪಟ್ಟಿದ್ದಾರೆ. 6ಜನರು ಗಾಯಾಳುಗಳಾಗಿದ್ದು ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮತ್ತಿಕೋಟೆ ಗ್ರಾಮದ ಶಂಕರಗೌಡ ಬಸನಗೌಡ ನಾಗಪ್ಪಗೌಡ್ರ (26), ಮುಚಡಿ ಗ್ರಾಮದ ಶಾಂತಮ್ಮ ಶಿವಾನಂದಪ್ಪ ಹೊಟ್ಟೆಗೌಡ್ರ (30), ಕರ್ನಳ್ಳಿ ಗ್ರಾಮದ ಪುನೀತ ನಾಗರಾಜ ಹೊಸಗೌಡ್ರ (18) ಹಾಗೂ ಮುಚಡಿ ಗ್ರಾಮದ ಶಿವಾನಂದರ ಮಗ (06 ವರ್ಷ ಮುಚಡಿ ಗ್ರಾಮ)ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದವರು ಎರಡು ಕಾರುಗಳಲ್ಲಿ ಉಕ್ಕಡಗಾತ್ರಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೆಕ್ಕೆಜೋಳದ ಲಾರಿ ರಟ್ಟೀಹಳ್ಳಿಯಿಂದ ತುಮ್ಮಿನಕಟ್ಟಿ ಕಡೆ ಹೊರಟಿದ್ದು ಕಾರು ಉಕ್ಕಡಗಾತ್ರಿಯಿಂದ ತುಮ್ಮಿನಕಟ್ಟಿ ಮೂಲಕ ರಟ್ಟೀಹಳ್ಳಿ ಕಡೆ ಬರುತ್ತಿತ್ತು. ಕಡೂರ ರಸ್ತೆಯಲ್ಲಿ ಶನಿವಾರ ಸಂಜೆ 5 30 ರಿಂದ 6 ಘಂಟೆಯ ಸುಮಾರಿಗೆ ಅಪಘಾತವಾಗಿದ್ದು ಮೃತರನ್ನು ಉಳಿದಂತೆ 06 ಜನರಿಗೆ ಗಾಯವಾಗಿದ್ದು ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ರಟ್ಟೀಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿ.ಎಸ್.ಐ ಕೃಷ್ಣಪ್ಪ ತೋಪಿನ ಭೇಟಿ ನೀಡಿದ್ದರು.
ಇದನ್ನೂ ಓದಿ : 3-IN-ONE ಮಾದರಿ ವಾಕಿಂಗ್ ಸ್ಟಿಕ್ ! ಗ್ರಾಮೀಣ ಭಾಗದ ವಿದ್ಯಾರ್ಥಿಯ ಆವಿಷ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ