ಹೆಚ್ಚಿದ ಬಿಸಿಲ ಬೇಗೆ; ಸೀಯಾಳಕ್ಕೆ ಬೇಡಿಕೆ, ದರ ಏರಿಕೆ


Team Udayavani, Mar 18, 2021, 5:40 AM IST

ಹೆಚ್ಚಿದ ಬಿಸಿಲ ಬೇಗೆ; ಸೀಯಾಳಕ್ಕೆ ಬೇಡಿಕೆ, ದರ ಏರಿಕೆ

ಬಜಪೆ: ಬೇಸಗೆ ಬಿಸಿ ಆರಂಭವಾಗಿದ್ದು, ಬೆಳಗ್ಗೆ 11 ಆದರೆ ಸಾಕು ಸೂರ್ಯನ ಶಾಖ ನೆತ್ತಿಯ ಮೇಲೆ ಏರಿರುತ್ತದೆ. ಬಿಸಿಲಿನ‌ ಧಗೆಯಿಂದ ದಣಿವು ಆರಿಸಿಕೊಳ್ಳಲು ಜನರು ತಂಪು ಪಾನೀಯ, ಸೀಯಾಳದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸೀಯಾಳಕ್ಕೆ ಬೇಡಿಕೆ ಹೆಚ್ಚಳವಾಗಿದ್ದು, ದರವೂ ಏರಿಕೆ ಕಂಡಿದೆ.

ಮಂಗಳೂರು ಸಹಿತ ಮಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಬೇಲೂರು, ಹೊಳೆನರಸೀಪುರ, ಅರಸೀಕರೆ, ಮಂಡ್ಯ, ಮದ್ದೂರು, ಕೆ.ಆರ್‌. ಪೇಟೆಗಳಿಂದ ಸೀಯಾಳ ಆಮದು ಆಗುತ್ತವೆ. ಬೇಸಗೆಯ ಬಿಸಿಲು ಹೆಚ್ಚಿದಂತೆ ಎಲ್ಲೆಡೆ ಸೀಯಾಳಕ್ಕೆ ಬೇಡಿಕೆ ಹೆಚ್ಚುತ್ತದೆ. ಈ ಸಮಯದಲ್ಲಿ ಆಮದು ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ. ಈ ಒಂದು ವಾರದೊಳಗೆ ಸೀಯಾಳ ದರದಲ್ಲಿ ಸುಮಾರು 3ರಿಂದ 4 ರೂ.ಗಳ ಏರಿಕೆ ಕಂಡಿದೆ.

ಹೊಳೆನರಸೀಪುರದಿಂದ ಬಂದ ಸೀಯಾಳಕ್ಕೆ ಅಂಗಡಿ ಅವರಿಗೆ ಸುಮಾರು 25ರಿಂದ 28 ರೂ. ವರೆಗೆ ಸಿಗುತ್ತದೆ. ಇದನ್ನು ಅಂಗಡಿಯವರು ಸುಮಾರು 35ರೂ. ವರೆಗೂ ಮಾರಾಟ ಮಾಡುತ್ತಾರೆ. ಇನ್ನು ಕೆಲವಡೆ ಸೀಯಾಳ ಮಾರಾಟದಲ್ಲಿ ಸ್ಪರ್ಧೆ ಕಂಡುಬರುತ್ತಿದ್ದು, ಕೆಲವರು ಸುಮಾರು 30 ರೂ. ಗೆ ಮಾರಾಟ ಮಾಡುತ್ತಿದ್ದಾರೆ.

ಬೇರೆಡೆಗೆ ಸರಬರಾಜು
ಮಂಡ್ಯ, ಮದ್ದೂರು, ಕೆ.ಆರ್‌. ಪೇಟೆಯ ಗೊಂಚಲು ಸೀಯಾಳದ ದರವೂ ಏರಿಕೆ ಕಂಡಿದೆ. ಇಲ್ಲಿಯ ಸೀಯಾಳ ಮುಂಬಯಿ, ಆಂಧ್ರ, ಕೋಲ್ಕತಾ, ಗುಜರಾತ್‌, ಹೊಸದಿಲ್ಲಿ ಮೊದಲಾದೆಡೆಗೆ ಸುಮಾರು ದಿನಕ್ಕೆ 10 ಲಾರಿಯಷ್ಟು ಸರಬರಾಜು ಆಗುತ್ತದೆ. ಇಲ್ಲಿಯೂ ಸುಮಾರು 5 ರೂ. ನಷ್ಟು ಏರಿಕೆಯಾಗಿದೆ. ಇಲ್ಲಿಯ ಅಂಗಡಿಯವರು 35ರಿಂದ 40 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ.

ಆರೋಗ್ಯಕ್ಕೆ ಪೂರಕ
ತಂಪು ಪಾನೀಯಗಳಿಗಿಂತ ಜನರು ಹೆಚ್ಚು ಸೀಯಾಳವನ್ನು ಇಷ್ಟ ಪಡುತ್ತಾರೆ. ಉಷ್ಣ, ಉರಿ ಎಂದು ಔಷಧ ತೆಗೆದುಕೊಳ್ಳುವವರು ಸೀಯಾಳ ಕುಡಿಯುವುದೇ ಜಾಸ್ತಿ. ಇದು ಆರೋಗ್ಯಕ್ಕೆ ಪೂರಕವಾದ ಉತ್ಪನ್ನವಾಗಿದ್ದು ಬೇಸಗೆಯಲ್ಲಿ ಬಳಕೆ ಹೆಚ್ಚು. ಹೀಗಾಗಿ ಬೇಡಿಕೆ ಜಾಸ್ತಿಯಾಗಿದೆ. ಮಂಗಳೂರು ಸಹಿತ ಮಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಸೀಯಾಳ ಬೇರೆಡೆಯಿಂದ ಆವಕ ಮಾಡಿಕೊಳ್ಳುವುದರಿಂದ ಸಾರಿಗೆ ಸಹಿತ ಇನ್ನಿತರ ವೆಚ್ಚಗಳ ನೀಗಿಸಲು ದರ ಕೂಡ ಏರಿಕೆಯಾಗಿದೆ.
ಆದರೆ ಗ್ರಾಹಕರು ದರದ ಏರಿಕೆಯ ಬಗ್ಗೆ ಯೋಚಿಸದೇ ಉತ್ತಮವಾದ ನೀರು ಇರುವ ಸೀಯಾಳಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ.

ಲಿಂಬೆ, ಕಲ್ಲಂಗಡಿ ಬೆಲೆ ಏರಿಕೆ
ಮಾರುಕಟ್ಟೆಯಲ್ಲಿ ಸೀಯಾಳ ಬೇಡಿಕೆಯ ಜತೆಗೆ ಲಿಂಬೆಕಾಯಿ ಬೇಡಿಕೆ ಹೆಚ್ಚಿದೆೆ. ಇದರಿಂದಾಗಿ ಲಿಂಬೆ ಕೆಜಿಗೆ 85 ರೂ.ಗೆ ಮಾರಾಟವಾಗುತ್ತಿದೆ. ಹತ್ತು ದಿನಗಳ ಹಿಂದೆ ಲಿಂಬೆಕಾಯಿ ಸುಮಾರು 70 ರೂ. ಇತ್ತು. ಬೇಸಗೆಯಲ್ಲಿ ಹಣ್ಣುಗಳಿಗೆ ಹೆಚ್ಚು ಬೇಡಿಕೆಯಿರುವುದರಿಂದ ಕಲ್ಲಂಗಡಿಗೂ ಬೆಲೆ ಹೆಚ್ಚಿದೆ. ವಾರದ ಹಿಂದೆ ಕೆ.ಜಿ.ಗೆ 10 ರೂ.ಗೆ ಮಾರಾಟವಾಗುತ್ತಿದ್ದ ಕಲ್ಲಂಗಡಿಗೆ ಸದ್ಯ ಕೆ.ಜಿ. ಗೆ 15 ರೂ.ಗೆ ಮಾರಾಟವಾಗುತ್ತಿದೆ.

ಎಳೆಯ ಸೀಯಾಳಕ್ಕೆ ಬೇಡಿಕೆ
ಬೇಸಗೆಯಲ್ಲಿ ಜನರು ಹೆಚ್ಚು ಸೀಯಾಳಕ್ಕೆ ಮೊರೆ ಹೋಗುವುದು ಸಾಮಾನ್ಯ. ಅಲ್ಲದೆ ಸೀಯಾಳದಲ್ಲಿ ಹೆಚ್ಚು ಬಲಿತಿರದ ಎಳೆಯ ನೀರು ಸೀಯಾಳವನ್ನೇ ಆಯ್ಕೆ ಮಾಡಿ ಖರೀದಿಸುತ್ತಾರೆ. ಸೀಯಾಳದಲ್ಲಿ ಈಗ ಹೆಚ್ಚು ಬರುತ್ತವೆ. ಅದು ಉಳಿಯುವುದರಿಂದ ನಷ್ಟವಾಗುತ್ತದೆ. ಸೀಯಾಳ ದರ ಒಮ್ಮೆಲೇ ಏರಿಕೆ ಕಂಡಿದೆ. ಈಗಿನ ಪರಿಸ್ಥಿತಿಯಲ್ಲಿ 35ರಿಂದ 40ಕ್ಕೆ ಮಾರಬೇಕಾಗುತ್ತದೆ .
-ಪದ್ಮನಾಭ, ಬಜಪೆ, ಸೀಯಾಳ ವ್ಯಾಪಾರಿ

ಬೇಡಿಕೆಯಿಂದ ದರ ಹೆಚ್ಚಳ
ಹೊಳೆನರಸಿಪುರದಲ್ಲಿ ನಾವೇ ತೋಟಕ್ಕೆ ಹೋಗಿ ಸೀಯಾಳ ತೆಗೆಯಬೇಕು. ಒಂದು ಸೀಯಾಳಕ್ಕೆ 2 ರೂ. ತೆಗೆಯುವವನಿಗೆ ನೀಡಬೇಕು. ತೆಂಗಿನಕಾಯಿಗೂ ಕೆ.ಜಿ. ಗೆ 60 ರೂ. ಆಗಿದೆ. ನೀರು ಕಡಿಮೆಯಾಗಿ ಸೀಯಾಳ ಬೇಗ ಕಾಯಿಯಾಗುತ್ತದೆ. ಸೆಕೆ ಜಾಸ್ತಿಯಾದಷ್ಟು ಸೀಯಾಳ ಬೇಡಿಕೆ ಜಾಸ್ತಿ. ಒಮ್ಮೆಲೇ ಸೀಯಾಳದ ದರ ಏರಿಕೆ ಕಂಡಿದೆ .

-ಇಸ್ಮಾಯಿಲ್‌ ಮೂಡುಬಿದಿರೆ, ಸೀಯಾಳ ವ್ಯಾಪಾರಿ

ಟಾಪ್ ನ್ಯೂಸ್

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.