ಕಾಪು ಪುರಸಭೆ: ಚುನಾವಣೆಗೆ ಕ್ಷಣಗಣನೆ ಪ್ರಾರಂಭ
Team Udayavani, Dec 26, 2021, 5:24 PM IST
ಕಾಪು : ಕಾಪು ಪುರಸಭೆಯ ಎರಡನೇ ಅವಧಿಗೆ ಡಿ. 27ರಂದು ನಡೆಯಲಿರುವ ಚುನಾವಣೆಗೆ ಕ್ಷಣಗಣನೆ ಪ್ರಾರಂಭಗೊಂಡಿದೆ.
ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ತಾಲೂಕು ಆಡಳಿತವು ಚುನಾವಣಾ ಪೂರ್ವಭಾವಿಯಾಗಿ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ಚುನಾವಣೆಗೆ ಸಜ್ಜಾಗಿದೆ.
ಕಾಪು ಪುರಸಭೆಯ 23 ವಾರ್ಡ್ಗಳಿಗೆ ನಡೆಯುವ ಚುನಾವಣೆಯಲ್ಲಿ 23 ಮತಗಟ್ಟೆಗಳಿದ್ದು, 26 ಎಪಿರ್ಒ, 52 ಪಿಒ ಹಾಗೂ 26 ಡಿ ಗ್ರೂಪ್
ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ.
ಕೈಪುಂಜಾಲು, ಪೊಲಿಪುಗುಡ್ಡೆ, ಕೊಂಬಗುಡ್ಡೆ ಹಾಗೂ ಅಹಮದಿ ಮೊಹಲ್ಲಾ ಅತೀ ಸೂಕ್ಷ ಮತಗಟ್ಟೆಗಳಾಗಿದ್ದು, 8ಸೂಕ್ಷ ಹಾಗೂ 11 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕೆ 77 ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಬಾರಿ ಮತಯಂತ್ರದ ಮೂಲಕ ಮತದಾನ ನಡೆಯಲಿದ್ದು ಮತಯಂತ್ರದಲ್ಲಿ ಅಭ್ಯರ್ಥಿ ಭಾವಚಿತ್ರವನ್ನು ಜೋಡಿಸಲಾಗಿದೆ. ನೋಟಾ ಚಲಾವಣೆಗೂ ಅವಕಾಶವಿದೆ. ಕಾಪು ಪುರಸಭೆ ಕಚೇರಿಯನ್ನು ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಡಿ.30ರಂದು ಪುರಸಭೆಯಲ್ಲೇ ಮತ ಎಣಿಕೆ ನಡೆಯಲಿದೆ.
67 ಮಂದಿ ಕಣದಲ್ಲಿ
ಕಾಪು ಪುರಸಭೆಯ 23 ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ 7, ಎಸ್ಡಿಪಿಐ 9, ವೆಲ್ಪೇರ್ ಪಾರ್ಟಿ ಇಂಡಿಯಾ 2 ಮತ್ತು ಪಕ್ಷೇತರ 3 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಪುರಸಭೆಯ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟೈಟ್ ಫೈಟ್ ನಿರೀಕ್ಷಿಸಲಾಗುತ್ತಿದ್ದು ಜೆಡಿಎಸ್, ಎಸ್ಡಿಪಿಐ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕೂಡಾ ಪುರಸಭೆಯಲ್ಲಿ ಖಾತೆ ತೆರಯುವ ನಿರೀಕ್ಷೆಯಲ್ಲಿವೆ. ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಲು ಪಕ್ಷೇತರರೂ ಕೂಡಾ ಶ್ರಮ ವಹಿಸುತ್ತಿದ್ದಾರೆ.
ಕೈಪುಂಜಾಲು, ಕೋತಲಕಟ್ಟೆ, ಕರಾವಳಿ, ಪೊಲಿಪುಗುಡ್ಡೆ, ದಂಡತೀರ್ಥ, ಪೊಲಿಪು, ಕಲ್ಯಾ, ಕಾಪು ಪೇಟೆ, ಕೊಪ್ಪಲಂಗಡಿ, ತೊಟ್ಟಂ, ಜನಾರ್ದನ ದೇವಸ್ಥಾನ ವಾರ್ಡ್ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ನಡೆಯಲಿದ್ದು, ಲೈಟ್ ಹೌಸ್, ಜನರಲ್ ಶಾಲೆ, ಗುಜ್ಜಿ, ದುಗ್ಗನ್ ತೋಟ, ಕುಡ್ತಿಮಾರ್ನಲ್ಲಿ ತ್ರಿಕೋನ ಸ್ಪರ್ಧೆ, ಗರಡಿ, ಅಹಮದಿ ಮೊಹಲ್ಲಾ, ಭಾರತ್ ನಗರ, ಮಂಗಳಪೇಟೆ, ಬೀಡು ಬದಿಯಲ್ಲಿ ಚತುಷ್ಕೋನ ಹಾಗೂ ಬಡಗರಗುತ್ತು, ಕೊಂಬಗುಡ್ಡೆ ವಾರ್ಡ್ನಲ್ಲಿ ತಲಾ ಐವರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ