ಯಚಡಿ ದೇವಸ್ಥಾನ ಕೆರೆಗೆ ‘ಜೀವ ಜಲ’ದ ಕಾಯಕಲ್ಪ


Team Udayavani, Mar 10, 2023, 5:56 PM IST

UK

ಶಿರಸಿ: ಜಿಲ್ಲೆಯ ಅನೇಕ ಕೆರೆಗಳನ್ನು ಅಭಿವೃದ್ದಿಗೊಳಿಸಿ ಆಧುನಿಕ ಭಗೀರಥ ಎನಿಸಿಕೊಂಡ ಶಿರಸಿಯ ಜೀವ ಜಲ ಕಾರ್ಯಪಡೆ ಈ ವರ್ಷದ ಕೆರೆಯ ಕಾಯಕಲ್ಪಕ್ಕೆ ಈಗಾಗಲೇ ಚಾಲನೆ ನೀಡಿದೆ. ಜೈನ ಮಠದ ಕೆರೆಯ ಅಭಿವೃದ್ದಿ ಜೊತೆಗೆ ಯಚಡಿಯ ಪುಷ್ಕರಣಿಯ ಅಭಿವೃದ್ದಿಯಲ್ಲೂ ಬಹುಪಾಲಿನ ಕೊಡುಗೆ ನೀಡಿದೆ.

ತಾಲೂಕಿನ ಯಡಚಡಿಯ ಪುರಾತನ ಗ್ರಾಮ ದೇವರಾದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಎದುರಿಗೆ ಇರುವ ಪುಷ್ಕರಣಿಯ ಅಭಿವೃದ್ದಿಗೆ ಕಂಕಣ ತೊಟ್ಟು ತನ್ನ ಪಾಲಿನ ಕೆಲಸ‌ ಪೂರ್ಣಗೊಳಿಸಿದೆ.

ಕೈ ಜೋಡಿಸದಿದ್ದರೆ ಕಷ್ಟವಿತ್ತು
ಯಚಡಿಯ ಗ್ರಾಮ ದೇವಸ್ಥಾನ ಅಭಿವೃದ್ದಿಗೆ ಕೆಲಸ‌ ಮಾಡುತ್ತಿರುವ ಅಭಿವೃದ್ದಿ ಟ್ರಸ್ಟ್ ಹಾಗೂ ಆಡಳಿತ ಮಂಡಳಿಯು ಕೆರೆಯ ಅಭಿವೃದ್ದಿ ಮಾಡಿಸಲು ಯೋಜಿಸಿತು. ಒಂದು‌ ಪಾರ್ಶ್ವದಲ್ಲಿ ಮಣ್ಣು ಜರಿದು ಅರ್ಧ ಕೆರೆ ಆಗಿತ್ತು. ಇದರ ಹೂಳೆತ್ತಿದರೆ ಜೀವ ಜಲ ಬಳಸಬಹುದು ಎಂಬುದು ಅವರ ಕನಸಾಗಿತ್ತು. ಆದರೆ, ಕಾರ್ಯಪಡೆ ಇವರ ಕನಸಿಗೆ‌ ಕೈ ಜೋಡಿಸದೇ ಹೋದರೆ ನನಸಾಗುವದು ಕಷ್ಟವಿತ್ತು.

ಈ ಕನಸನ್ನು ಜೀವ ಜಲ‌ ಕಾರ್ಯಪಡೆ ಅಧ್ಯಕ್ಷ, ಜಲ ಯೋಗಿ ಶ್ರೀನಿವಾಸ ಹೆಬ್ಬಾರ ಅವರಲ್ಲಿ ಪದಾಧಿಕಾರಿಗಳು, ಗ್ರಾಮಸ್ಥರು ಮನವಿ‌ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿ‌ದ ಹೆಬ್ಬಾರ್ ಅವರು ‘ದೇವರ ಕೆರೆ’ಗೆ ಕಾಯಕಲ್ಪದ ಜೊತೆಯಾದರು.

ನೆರವಿನ ಹಸ್ತ:
ಹುಣಸೆಕೊಪ್ಪ‌ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಚಡಿ ಕೆರೆ ಅಭಿವೃದ್ದಿಗೆ ರಾಷ್ಟ್ರೀಯ ‌ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯೋಜಿಸಿ ಹೆಜ್ಜೆ ಇಟ್ಟರೂ ಮುಂದಿನ ಮಳೆಗಾಲದ ಒಳಗೆ ಸುತ್ತಲು ಪಿಚಿಂಗ್ ಕಟ್ಟ ಬೇಕಿತ್ತು. ಹೂಳೆತ್ತುವ ಕೆಲಸ ವಿಳಂಬವಾದರೆ ಮುಂದೆ ಪಿಚ್ಚಿಂಗ ಕಟ್ಟಲು ಸಮಸ್ಯೆ ಆದೀತೆಂದು ಕಾರ್ಯಪಡೆ‌ ನೆರವನ್ನು ಗ್ರಾಮಸ್ಥರು ಕೇಳಿದರು.

ಕಳೆದ ೮ ದಿನಗಳಿಂದ‌ ನಿರಂತರ ಕಾರ್ಯಪಡೆಯು ಹದಿನೈದಕ್ಕೂ ಅಧಿಕ ಗ್ರಾಮಸ್ಥರ ಸಹಭಾಗಿತ್ವದಿಂದ ಒಂದು ಹಂತದ ಕೆರೆ ಅಭಿವೃದ್ದಿ ಪೂರ್ಣಗೊಳಿಸಿದೆ.
ನಾಲ್ಕು ಗುಂಟೆ ೧೨ ಅಣೆ‌ ಕೆರೆ ,ಇದಾಗಿದ್ದು, ಕೆರೆಯೊಳಗಿನ ಐನೂರಕ್ಕೂ ಅಧಿಕ ಟ್ರಾಕ್ಟರ್ ‌ಮಣ್ಣು ಹೊರ ಹಾಕಲಾಗಿದೆ. ನಿರಂತರ ಬೆಳಿಗ್ಗೆ ೮ರಿಂದ ಸಂಜೆ ೬-೭ ಗಂಟೆ ತನಕ ಕೆಲಸ ಮಾಡಿ‌ ಇದನ್ನು ಪೂರ್ಣಗೊಳಿಸಲಾಗಿದೆ ಎನ್ನುತ್ತಾರೆ ಕಾರ್ಯಪಡೆಯ ಪರವಾಗಿ‌ ಶ್ರೀಧರ ಭಟ್ಟ ಕೊಳಗಿಬೀಸ್.

ಕೆರೆಯಿಂದ ಈಗಲೂ‌ ಮೂರಿಂಚು ನೀರು ಹರಿಯುತ್ತಿದೆ. ಹೆಬ್ಬಾರರ ನೆರವಿನಿಂದ‌ ಈಗ ಕೆರೆ ಒಂದು ಆಕಾರಕ್ಕೆ ಬಂದಿದೆ. ಉದ್ಯೋಗ ಖಾತ್ರಿಯಲ್ಲಿ ಪಿಚ್ಚಿಂಗ್ ಕೂಡ ಮಾಡಬೇಕಾಗಿದೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ರತ್ನಾಕರ ನಾಯ್ಕ ಹಾಗೂ ದೇವಸ್ಥಾನ ಆಡಳಿತ‌ ಮಂಡಳಿ ಕಾರ್ಯದರ್ಶಿ ಗಣೇಶ ಹೆಗಡೆ ಕಲ್ಮನೆ.

ಉದ್ಯೋಗ ಖಾತ್ರಿ ಯೋಜನೆಯ ಜೊತೆ ಜೀವ ಜಲ ಕಾರ್ಯಪಡೆ ಸಹಕಾರ‌ ಮರೆಯಲು ಸಾಧ್ಯವಿಲ್ಲ. ಹೆಬ್ಬಾರರ ಕೊಡುಗೆ ಇಲ್ಲವಾದರೆ ಕೆರೆ ಅಭಿವೃದ್ದಿ ಕನಸಾಗೇ ಇರುತ್ತಿತ್ತು. ಇನ್ನು ಎನ್ ಆರ್ ಇಜಿಯಲ್ಲಿ ‌ಪಿಚ್ಚಿಂಗ್ ಮಾಡಿಸಬೇಕಿದೆ.
-ಗಣೇಶ ಹೆಗಡೆ‌‌ ಕಲ್ಮನೆ, ಆಡಳಿತ‌ ಮಂಡಳಿ ಕಾರ್ಯದರ್ಶಿ

ಮನೆಗೆ ಬಂದವರಿಗೆ ಊಟ ಹಾಕಲು ಯೋಚಿಸುವ ಜನರ ‌ನಡುವೆ ಹೆಬ್ಬಾರ್ ಅವರಂಥವರ‌ನ್ನು ಆ ಭಗವಂತನೇ ಸೃಷ್ಟಿಸುತ್ತಾನೆ‌. ಉಳ್ಳವರು ನೆಲ‌ ಜಲಕ್ಕೆ‌ ನೆರವಾಗುವದು ಅಚ್ಚರಿ.
-ಮಹಾಬಲೇಶ್ವರ ನಾಯ್ಕ, ಯಚಡಿ

ಜೀವ ಜಲಕ್ಕೆ ಆಶ್ರಯ ತಾಣವೇ ಕೆರೆಗಳು. ಅವುಗಳ ಉಳಿವಿಗೆ ನಮ್ಮದು ಒಂದು ಸೇವೆ. ಜಲ ರಕ್ಷಣೆಯಲ್ಲಿ ಜೊತೆಯಾದರೆ ನೆಮ್ಮದಿ ಸಿಗುತ್ತದೆ.

ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು ಜೀವ ಜಲ ಕಾರ್ಯಪಡೆ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.