Kedarnath: ಕ್ರಮ ಜರುಗಿಸದಿದ್ದರೆ ಮೊಬೈಲ್ ನಿಷೇಧ
Team Udayavani, Jul 9, 2023, 7:29 AM IST
ಡೆಹ್ರಾಡೂನ್: ಕೇದಾರನಾಥ ದೇಗುಲದ ಎದುರಿಗಿನ ಪ್ರೇಮಿಗಳಿಬ್ಬರ ಪ್ರೇಮನಿವೇದನೆ ವಿಡಿಯೋ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕವೂ ದೇಗುಲದ ಬಳಿ ಹಲವರು, ರೀಲ್ಸ್ ಮಾಡುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆ ದೇಗುಲ ಆವರಣದಲ್ಲಿ ರೀಲ್ಸ್ ವಿಡಿಯೋ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ನಾವೇ ಮೊಬೈಲ್ ನಿಷೇಧಿಸುತ್ತೇವೆಂದು ಕೇದಾರನಾಥ-ಬದರಿನಾಥ ದೇಗುಲ ಮಂಡಳಿ ಪೊಲೀಸರನ್ನು ಒತ್ತಾಯಿಸಿದೆ.
ವಿಡಿಯೋ ಅವಾಂತರವು ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಈ ಹಿನ್ನೆಲೆ ಪ್ರವಾಸಿಗರ ಕ್ಲಾಕ್ರೂಮ್ನಲ್ಲಿಯೇ ಮೊಬೈಲ್ ಫೋನ್ ಇರಿಸಿ ಹೋಗುವಂತೆ ಕ್ರಮ ಜರುಗಿಸಲು ಮಂಡಳಿ ಯೋಜಿಸುತ್ತಿದೆ. ಅದಕ್ಕೂ ಮುಂಚೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಕೇಳಲಾಗಿದೆ.