ಕೊರಟಗೆರೆ: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯ ನಾಶ
Team Udayavani, Mar 6, 2023, 7:11 PM IST
ಕೊರಟಗೆರೆ: ಕೊರಟಗೆರೆ ಅಬಕಾರಿ ಇಲಾಖೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು, ಮಾರ್ಚ್ 6, ಸೋಮವಾರ ಪಟ್ಟಣ ಪಂಚಾಯತ್ ಗೆ ಸೇರಿದ ಬೋಡ ಬಂಡೇನಹಳ್ಳಿ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಮಾಡಲಾಯಿತು.
ಮಧುಗಿರಿ ಉಪ ವಿಭಾಗದ ಅಬಕಾರಿ ಉಪ ಅದೀಕ್ಷಕರಾದ ಚಂದ್ರಪ್ಪನವರ ನೇತೃತ್ವದಲ್ಲಿ,ಕೊರಟಗೆರೆ ವಲಯದ ಅಬಕಾರಿ ನೀರೀಕ್ಷಕರಾದ ಶ್ರೀ ಲತಾ .ಬಿ,ಕಂದಾಯ ಇಲಾಖೆಯ ಗ್ರೇಡ್-2 ತಹಶೀಲ್ದಾರ್ ನರಸಿಂಹಮೂರ್ತಿ ಮತ್ತು ತುಮಕೂರಿನ ಕೆಎಸ್ ಬಿ ಸಿಎಲ್ ಡಿಪೋದ ಪ್ರಥಮ ದರ್ಜೆ ಸಹಾಯಕ ನಾರಯಣ್ .ಕೆ ರವರ ಸಮ್ಮುಖದಲ್ಲಿ ಮದ್ಯವನ್ನು ನಾಶಪಡಿಸಲಾಯಿತು.
ಮಧುಗಿರಿ ಉಪ ವಿಭಾಗದ ಅಬಕಾರಿ ಉಪ ಅದೀಕ್ಷಕ ಚಂದ್ರಪ್ಪ ಮಾತನಾಡಿ ಕೊರಟಗೆರೆ ವಲಯದ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಿವಿಧ ಘೋರ ಪ್ರಕರಣಗಳಲ್ಲಿ ವಶಪಡಿಸಿಕೊಂಡು, ಸರ್ಕಾರಕ್ಕೆಮುಟ್ಟುಗೋಲು ಹಾಕಿಕೊಂಡಿರುವ 139.34 ಲೀ ಮದ್ಯ,13.408ಲೀ ಬಿಯರ್ ಹಾಗೂ 9ಲೀ ಸೇಂದಿಯನ್ನು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.
ಈ ಸಂಧರ್ಭದಲ್ಲಿ ಉಪವಿಭಾಗದ ಅಬಕಾರಿ ನಿರೀಕ್ಷಕ ನಾಗರಾಜು.ಹೆಚ್ ಕೆ,ಅಬಕಾರಿ ನಿರೀಕ್ಷಕಿ ಶ್ರೀ ಲತಾ .ಬಿ, ಗ್ರೇಡ್ -2 ತಹಶೀಲ್ದಾರ್ ನರಸಿಂಹಮೂರ್ತಿ, ಸಬ್ ಇನ್ಸ್ಪೆಕ್ಟರ್ ಪ್ರಭಾಕರ್ ಗ್ರಾಮ ಲೆಕ್ಕಿಗ ಬಸವರಾಜು ಪೇದೆ ಮಂಜುಳಾ, ಮಲ್ಲಿಕಾರ್ಜುನ ಮೊರಾಖಂಡಿ, ವಾಹನ ಚಾಲಕ ಮಧು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ