Kunigal; ಬಸ್ ಹಳ್ಳಕ್ಕೆ ಉರುಳಿ 12 ಮಂದಿಗೆ ಗಾಯ: ತಪ್ಪಿದ ಭಾರಿ ಅನಾಹುತ
ಬೀಗರ ಔತಣ ಕೂಟಕ್ಕೆ ಬಂದಿದ್ದ ಬಸ್
Team Udayavani, Dec 17, 2023, 9:14 PM IST
ಕುಣಿಗಲ್: ಬೀಗರ ಔತಣ ಕೂಟಕ್ಕೆ ಜನರನ್ನು ಕರೆತಂದಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಪರಿಣಾಮ 12 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಶ್ರೀ ರಂಗನಾಥಸ್ವಾಮ ಬೆಟ್ಟದಲ್ಲಿ ಭಾನುವಾರ ಸಂಭವಿಸಿದೆ.
ಬೆಂಗಳೂರಿನ ರತ್ನ (38), ಮಾನಸ (15), ರವಿಕುಮಾರ್ (65), ಬಾಲಾಜಿ (35), ಶ್ವೇತ (36), ಪ್ರತೀಕ್ (8) ಅಪ್ಸರ (2), ಕುಣಿಗಲ್ ತಾಲೂಕಿನ ಲಕ್ಷ್ಮಮ್ಮ (40) ಶೋಭಾ (42), ರತ್ನಮ್ಮ (60), ಚನ್ನಪಟ್ಟಣದ ಗಿರೀಶ್ ಗಾಯಗೊಂಡ ವ್ಯಕ್ತಿಗಳು. ಗಾಯಗೊಂಡವರು ಕುಣಿಗಲ್ ಪಟ್ಟಣದ ಎಂ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಬೆಂಗಳೂರಿನ ಪ್ರಕಾಶ್ ಅವರ ಕುಟುಂಬ ರಂಗನಾಥಸ್ವಾಮಿ ಬೆಟ್ಟದಲ್ಲಿ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಬೀಗರ ಔತಣಕೂಟವನ್ನು ಏರ್ಪಡಿಸಿ, ಬೆಂಗಳೂರಿನಿಂದ ಬಸ್ ವ್ಯವಸ್ಥೆ ಕಲ್ಪಸಿದ್ದರು. ಸಂಬಂಧಿಕರು ಹಾಗೂ ಸ್ನೇಹಿತರು ಬೀಗರ ಔತಣಕ್ಕೆ ಬಂದು ಊಟ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾತ್ತಿದ್ದರು. ಬಸ್ ಚಾಲನೆ ಆಗದ ಕಾರಣ, ಚಾಲಕನ್ನು ಬಸ್ ಅನ್ನು ನೂಟಲ್ ಮಾಡಿ, ಜನರಿಂದ ಬಸ್ ಅನ್ನು ತಳ್ಳಿಸಿ ಸ್ಟಾಟ್ ಮಾಡುವ ವೇಳೆ, ಬಸ್ ಸ್ಟಾಟ್ ಆಗದೇ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ.
ತಪ್ಪಿದ ಭಾರಿ ದುರಂತ
ಶ್ರೀ ರಂಗನಾಥಸ್ವಾಮಿ ಬೆಟ್ಟಕ್ಕೆ ಶನಿವಾರ, ಭಾನುವಾರ ಹಾಗೂ ರಜಾ ದಿನದಂದು ತಾಲೂಕು ಸೇರಿದಂತೆ ಬೆಂಗಳೂರು ಮತ್ತು ಇತರೆ ಕಡೆಯಿಂದ ಆನೇಕ ಮಂದಿ ಇಲ್ಲಿ ಬೀಗರ ಔರಣ ಕೂಟ, ಹರಸೇವೆ ನಡೆಯುತ್ತಿವೆ ಭಕ್ತರು ಹಾಗೂ ನಾಗರಿಕರು ಬೆಟ್ಟಕ್ಕೆ ಬರಲು ರಸ್ತೆ ನಿರ್ಮಾಣ ಮಾಡಲಾಗಿದೆ ರಸ್ತೆಯ ಎರಡು ಕಡೆ ಲೋಹದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಭಾನುವಾರ ಔತಣ ಕೂಟಕ್ಕೆ ಬಂದಿದ್ದ ಬಸ್ ಜನರನ್ನು ತುಂಬಿಕೊಡು ಬೆಂಗಳೂರಿಗೆ ವಾಪಸ್ಸ್ ಆಗುತ್ತಿದ್ದ ವೇಳೆ ಬಸ್ ಹಳ್ಳಕ್ಕೆ ಉರುಳಿದೆ ಪಕ್ಕದಲ್ಲಿ ಲೋಹದ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಬಸ್ ಬೆಟ್ಟದಿಂದ ಕೆಳಕ್ಕೆ ಉರುಳಿ ಬಿದ್ದು ಭಾರಿ ಅನಾಹುತ ಸಂಭವಿಸುತ್ತಿತ್ತು. ಲೋಹದ ತಡೆಗೋಡೆಯಿಂದ ಭಾರಿ ಅನುಹುತ ತಪ್ಪಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!