ಅಕ್ರಮ ಚಿನ್ನ ಸಾಗಾಣಿಕೆ ಬಗ್ಗೆ ಶಿವಶಂಕರ್ಗೆ ಗೊತ್ತಿತ್ತು: ಕೋರ್ಟ್ಗೆ ಇ.ಡಿ. ಮಾಹಿತಿ
Team Udayavani, Nov 11, 2020, 5:45 PM IST
ಕೊಚ್ಚಿ: ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿರುವ ಅಕ್ರಮ ಚಿನ್ನ ಸಾಗಣೆ ಪ್ರಕರಣದ ಬಗ್ಗೆ ವಜಾಗೊಂಡಿರುವ ಐಎಎಸ್ ಅಧಿಕಾರಿ ಎಂ.ಶಿವಶಂಕರ್ಗೆ ಗೊತ್ತಿತ್ತು. ಜತೆಗೆ ಅವರು ಸರ್ಕಾರ ಜಾರಿಗೊಳಿಸುವ ಪ್ರಮುಖ ಯೋಜನೆಗಳ ಮಾಹಿತಿಯನ್ನು ಸ್ವಪ್ನಾ ಜತೆಗೆ ಹಂಚಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ. ಕೊಚ್ಚಿಯಲ್ಲಿರುವ ವಿಶೇಷ ಕೋರ್ಟ್ಗೆ ಸಲ್ಲಿಕೆ ಮಾಡಲಾಗಿರುವ ಅಫಿಡವಿಟ್ನಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ.
ರಾಜತಾಂತ್ರಿಕ ಮಾರ್ಗಗಳ ಮೂಲಕ ಸಾಗಣೆಯಾಗುವ ಚಿನ್ನದ ಬಗ್ಗೆ ಶಿವಶಂಕರ್ಗೆ ಮಾಹಿತಿ ಇತ್ತು. ಎಲ್ಡಿಎಫ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಲೈಫ್ ಮಿಷನ್ ಪ್ರಾಜೆಕ್ಟ್’ ಜಾರಿಗೆ ಸಂಬಂಧಿಸಿದಂತೆ 1 ಕೋಟಿ ರೂ. ಕಮಿಷನ್ ಅನ್ನು ಶಿವಶಂಕರ್ಗೆ ನೀಡಲಾಗಿತ್ತು ಎಂದು ಸ್ವಪ್ನಾ ಸುರೇಶ್ ಇ.ಡಿ.ಗೆ ತಿಳಿಸಿದ್ದಾಳೆ. ಆ ಮೊತ್ತವನ್ನು ಎನ್ಐಎ ಸ್ವಪ್ನಾ ಲಾಕರ್ನಿಂದ ವಶಪಡಿಸಿಕೊಂಡಿದ್ದರು. ಆ ಲಾಕರ್ ಅನ್ನು ಶಿವಶಂಕರ್ ಸೂಚನೆ ಹಿನ್ನೆಲೆಯಲ್ಲಿಯೇ ತೆರೆಯಲಾಗಿತ್ತು.
ಈ ಸಂದರ್ಭದಲ್ಲಿ ವಜಾಗೊಂಡಿರುವ ಅಧಿಕಾರಿ ಜತೆಗಿನ ಕೆಲವು ವಾಟ್ಸ್ಆ್ಯಪ್ ಚಾಟ್ನ ಮಾಹಿತಿಯನ್ನು ಸ್ವಪ್ನಾ ಸುರೇಶ್ ಅಧಿಕಾರಿಗಳಿಗೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು