ಜಾತಿ, ಧರ್ಮ, ಭಾಷೆಯ ಮಧ್ಯೆ ಸ್ಪರ್ಧೆ ಅಲ್ಲ: ಹರಿಪ್ರಸಾದ್
Team Udayavani, Apr 4, 2024, 12:35 AM IST
ಮಂಗಳೂರು: ದಕ್ಷಿಣ ಕನ್ನಡ, ಉಡುಪಿಯಲ್ಲಿ ಯಾವುದೇ ಜಾತಿ, ಧರ್ಮ, ಭಾಷೆಗಳ ಮಧ್ಯೆ ಸ್ಪರ್ಧೆ ನಡೆಯುತ್ತಿಲ್ಲ. ಸಂವಿಧಾನ ಉಳಿಸುವ ಆಶಯದ ಚುನಾವಣೆ ಮಾತ್ರ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಐದು ವರ್ಷದ ಬಳಿಕವೂ ಚುನಾವಣೆ ನಡೆಯಬೇಕು ಎಂದಾದರೆ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಗೆಲ್ಲಬೇಕಿದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಥ ಹೊಸ ಅಭ್ಯರ್ಥಿ ವಕೀಲ ಪದ್ಮರಾಜ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು.
ಈ ಜಿಲ್ಲೆ ಯಾವ ಹಿಂದುತ್ವದ ಭದ್ರಕೋಟೆಯೂ ಅಲ್ಲ. ಸಾವರ್ಕರ್ ಸ್ಥಾಪಿಸಿದ್ದ ಮಹಾರಾಷ್ಟ್ರದಲ್ಲೇ ಹಿಂದುತ್ವದ ಭದ್ರಕೋಟೆ ಇಲ್ಲ. ಎಂಥೆಂತ ಕೋಟೆಗಳು ಮುರಿದು ಬಿದ್ದಿವೆ. ರಾಜ ಮಹಾರಾಜರ ಕೋಟೆಗಳು ಪಾಳು ಬಿದ್ದಿವೆ. ಇಲ್ಲೂ ಹಾಗಾಗುತ್ತದೆ. ಮೋದಿ ಹೇಳುವಂತೆ ದೇಶ ವಿಭಜಿಸುವ ಕೆಲಸ ನಾವು ಮಾಡಿಲ್ಲ. ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ