ಪರಿಷತ್ ಚುನಾವಣೆ: 17 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ
Team Udayavani, Nov 22, 2021, 6:55 PM IST
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಎಐಸಿಸಿ ಸೋಮವಾರ ಸಂಜೆ ತನ್ನ ಅಧಿಕೃತ 17 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ.
ತೀವ್ರ ಗೊಂದಲಕ್ಕೆ ಕಾರಣವಾಗಿದ್ದ ದ.ಕ- ಉಡುಪಿ ಕ್ಷೇತ್ರಕ್ಕೆ ಮಂಜುನಾಥ ಭಂಡಾರಿ ಕಾಂಗ್ರೆಸ್ ಅಭ್ಯರ್ಥಿ ಎಂದು ಎಐಸಿಸಿ ಘೋಷಣೆ ಮಾಡಿದೆ. ಈ ಕ್ಷೇತ್ರದಲ್ಲಿ ಡಾ.ರಾಜೇಂದ್ರ ಕುಮಾರ್ ಅವರ ಹೆಸರೂ ಕೇಳಿ ಬಂದಿತ್ತು.
ಅಭ್ಯರ್ಥಿಗಳ ಪಟ್ಟಿ ಇಂತಿದೆ
ಕಲಬುರಗಿ: ಶಿವಾನಂದ ಪಾಟೀಲ್ ಮರ್ತುರು
ಬೆಳಗಾವಿ: ಚೆನ್ನರಾಜ್ ಹಟ್ಟಿಹೊಳಿ
ಉತ್ತರಕನ್ನಡ -ಭೀಮಣ್ಣ ನಾಯ್ಕ್
ಧಾರವಾಡ: ಸಲೀಂ ಅಹಮದ್
ರಾಯಚೂರು: ಶರಣಗೌಡ ಪಾಟೀಲ್
ಚಿತ್ರದುರ್ಗ -ಬಿ.ಸೋಮಶೇಖರ್
ಶಿವಮೊಗ್ಗ: ಆರ್. ಪ್ರಸನ್ನ ಕುಮಾರ್
ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ
ಹಾಸನ: ಎಂ. ಶಂಕರ್
ತುಮಕೂರು: ಆರ್. ರಾಜೇಂದ್ರ
ಮಂಡ್ಯ: ದಿನೇಶ್ ಗೂಳಿಗೌಡ
ಕೊಡಗು: ಮಂಥರ್ ಗೌಡ
ವಿಜಯಪುರ-ಬಾಗಲಕೋಟೆ : ಸುನಿಲ್ ಗೌಡ
ಮೈಸೂರು-ಚಾಮರಾಜನಗರ : ಡಾ.ಡಿ. ತಿಮ್ಮಯ್ಯ
ಬಳ್ಳಾರಿ : ಕೆ.ಸಿ.ಕೊಂಡಯ್ಯ
ಬೆಂಗಳೂರು ಗ್ರಾಮಾಂತರ: ಎಸ್.ರವಿ