ಕಾರವಾರದಲ್ಲಿ ಉತ್ತಮ ಮಳೆ : ಸಿಡಿಲಿನಿಂದ ತೆಂಗಿನ ಮರಕ್ಕೆ ಹಾನಿ
Team Udayavani, Mar 24, 2021, 9:50 PM IST
ಕಾರವಾರ : ಬುಧುವಾರ ರಾತ್ರಿ 7.45 ಕ್ಕೆ ಜಿಲ್ಲೆಯಾದ್ಯಂತ ಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಕಳೆದ 8 ದಿನಗಳಿಂದ ಅತೀಯಾದ ಬಿಸಿಲಿನಿಂದ ಕೆಂಗೆಟ್ಟಿದ್ದ ಜಿಲ್ಲೆಯ ಜನತೆ ಮಳೆ ಬಿದ್ದ ಕಾರಣ ತಂಪಾದ ವಾತಾವರಣ ಕಂಡರು.
ಜಿಲ್ಲೆಯಲ್ಲಿ ದಿನವೂ 23 ರಿಂದ 34 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಿಂದಾಗಿ ಜನತೆ ಬಸವಳಿದಿದ್ದರು.
ಅತೀ ಬಿಸಿಲಿನಿಂದ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗೆ ಸಹ ಬರುತ್ತಿರಲಿಲ್ಲ.ಕಾರವಾರ ಹಿಂದೆಂದು ಮಾರ್ಚ ತಿಂಗಳಲ್ಲಿ ಇಂಥ ಸುಡು ಬಿಸಿಲು ಕಂಡಿರಲಿಲ್ಲ.ಇದರ ಪರಿಣಾಮವೋ ಎಂಬಂತೆ ರಾತ್ರಿ 8 ರಿಂದ 8.40 ರವರೆಗೆ ಮಳೆ ಸುರಿಯುತ್ತಲೇ ಇತ್ತು. ಮಳೆ ಮುಂದುವರಿದಿದ್ದು, ಇಳೆ ತಂಪಾಯಿತು.
ಆರಂಭದಲ್ಲಿ ಬೀಸಿದ ಅತೀಯಾದ ಗಾಳಿಗೆ ಅಲ್ಲಲ್ಲಿ ಮರದ ಟೊಂಗೆ ಮುರಿದು ಬಿದ್ದಿವೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಶಿರಸಿ ಹಾಗೂ ಸೊಂದಾ ಸುತ್ತ ಮುತ್ತ ಸಂಜೆ 4.30 ಮಳೆ ಸುರಿದಿದ್ದು.
ಇದನ್ನೂ ಓದಿ:ಏ.4 ರೊಳಗೆ ರೈತರ ಕಬ್ಬಿನ್ ಬಿಲ್ ಪಾವತಿ ಮಾಡಿ : ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ
ಪರಿಣಾಮ ಹಳ್ಳಿಗಳಲ್ಲಿನ ಶಿಕ್ಷಕರು, ಮಕ್ಕಳು ಶಾಲೆಯಿಂದ ಮನೆ ಸೇರಲು ಒಂದು ತಾಸು ಕಾಯಬೇಕಾಯಿತು. ಉತ್ತರ ಕನ್ನಡದಲ್ಲಿ ಅತೀಹೆಚ್ಚು ತಾಪಮಾನ ದಾಖಲಾಗಿದ್ದು. ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸಿಡಿಲಿಗೆ ತೆಂಗಿನ ಮರಕ್ಕೆ ಹಾನಿ :
ಅಂಕೋಲಾದ ಹಡವ ಗ್ರಾಮದ ಬಲೀಂದ್ರ ಸುಕ್ರು ಗೌಡ ಎಂಬುವವರ ಮನೆಯ ಎರಡು ತೆಂಗಿನಮರಗಳು ಸಿಡಿಲಿನ ಆರ್ಭಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಬಿಸಿಲು: ಮತದಾನ ಸಮಯ ಪರಿಷ್ಕರಣೆಗೆ ಬಿಜೆಪಿ ಮನವಿ
Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್
Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ
Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ
MUST WATCH
ಹೊಸ ಸೇರ್ಪಡೆ
Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ