ಕಾರವಾರದಲ್ಲಿ ಉತ್ತಮ ಮಳೆ : ಸಿಡಿಲಿನಿಂದ ತೆಂಗಿನ ಮರಕ್ಕೆ ಹಾನಿ
Team Udayavani, Mar 24, 2021, 9:50 PM IST
ಕಾರವಾರ : ಬುಧುವಾರ ರಾತ್ರಿ 7.45 ಕ್ಕೆ ಜಿಲ್ಲೆಯಾದ್ಯಂತ ಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಕಳೆದ 8 ದಿನಗಳಿಂದ ಅತೀಯಾದ ಬಿಸಿಲಿನಿಂದ ಕೆಂಗೆಟ್ಟಿದ್ದ ಜಿಲ್ಲೆಯ ಜನತೆ ಮಳೆ ಬಿದ್ದ ಕಾರಣ ತಂಪಾದ ವಾತಾವರಣ ಕಂಡರು.
ಜಿಲ್ಲೆಯಲ್ಲಿ ದಿನವೂ 23 ರಿಂದ 34 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಿಂದಾಗಿ ಜನತೆ ಬಸವಳಿದಿದ್ದರು.
ಅತೀ ಬಿಸಿಲಿನಿಂದ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗೆ ಸಹ ಬರುತ್ತಿರಲಿಲ್ಲ.ಕಾರವಾರ ಹಿಂದೆಂದು ಮಾರ್ಚ ತಿಂಗಳಲ್ಲಿ ಇಂಥ ಸುಡು ಬಿಸಿಲು ಕಂಡಿರಲಿಲ್ಲ.ಇದರ ಪರಿಣಾಮವೋ ಎಂಬಂತೆ ರಾತ್ರಿ 8 ರಿಂದ 8.40 ರವರೆಗೆ ಮಳೆ ಸುರಿಯುತ್ತಲೇ ಇತ್ತು. ಮಳೆ ಮುಂದುವರಿದಿದ್ದು, ಇಳೆ ತಂಪಾಯಿತು.
ಆರಂಭದಲ್ಲಿ ಬೀಸಿದ ಅತೀಯಾದ ಗಾಳಿಗೆ ಅಲ್ಲಲ್ಲಿ ಮರದ ಟೊಂಗೆ ಮುರಿದು ಬಿದ್ದಿವೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಶಿರಸಿ ಹಾಗೂ ಸೊಂದಾ ಸುತ್ತ ಮುತ್ತ ಸಂಜೆ 4.30 ಮಳೆ ಸುರಿದಿದ್ದು.
ಇದನ್ನೂ ಓದಿ:ಏ.4 ರೊಳಗೆ ರೈತರ ಕಬ್ಬಿನ್ ಬಿಲ್ ಪಾವತಿ ಮಾಡಿ : ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ
ಪರಿಣಾಮ ಹಳ್ಳಿಗಳಲ್ಲಿನ ಶಿಕ್ಷಕರು, ಮಕ್ಕಳು ಶಾಲೆಯಿಂದ ಮನೆ ಸೇರಲು ಒಂದು ತಾಸು ಕಾಯಬೇಕಾಯಿತು. ಉತ್ತರ ಕನ್ನಡದಲ್ಲಿ ಅತೀಹೆಚ್ಚು ತಾಪಮಾನ ದಾಖಲಾಗಿದ್ದು. ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸಿಡಿಲಿಗೆ ತೆಂಗಿನ ಮರಕ್ಕೆ ಹಾನಿ :
ಅಂಕೋಲಾದ ಹಡವ ಗ್ರಾಮದ ಬಲೀಂದ್ರ ಸುಕ್ರು ಗೌಡ ಎಂಬುವವರ ಮನೆಯ ಎರಡು ತೆಂಗಿನಮರಗಳು ಸಿಡಿಲಿನ ಆರ್ಭಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಗಿವೆ.