ಒತ್ತುವರಿ ಕಾಫಿ ತೋಟ ಗುತ್ತಿಗೆಗೆ ನಿಯಮ; ಎಕ್ರೆಗೆ 2 ಸಾವಿರ ರೂ. ನಿಗದಿ
50 ಸಾವಿರ ರೈತರಿಗೆ ಒತ್ತುವರಿ ಆರೋಪದಿಂದ ಮುಕ್ತಿ
Team Udayavani, Dec 20, 2022, 7:35 AM IST
ಬೆಳಗಾವಿ: ಮಲೆನಾಡು ಭಾಗದಲ್ಲಿ ಸರಕಾರಿ ಜಾಗದಲ್ಲಿರುವ ಕಾಫಿ ತೋಟ ಒತ್ತುವರಿಯನ್ನು ಸಕ್ರಮಗೊಳಿಸಿ ಗುತ್ತಿಗೆಗೆ ನೀಡಲು ರಾಜ್ಯ ಸರಕಾರ ನಿಯಮಾವಳಿ ಸಿದ್ಧಪಡಿಸಿದೆ. ಒಂದು ಎಕ್ರೆಗೆ ವರ್ಷಕ್ಕೆ ಎರಡು ಸಾವಿರ ರೂ.ಯಂತೆ 30 ವರ್ಷಗಳ ಲೀಸ್ ಮೊತ್ತವನ್ನು ಮೊದಲೇ ಕಟ್ಟಿಸಿಕೊಳ್ಳಲು ನಿರ್ಧರಿಸಲಾಗಿದೆ.
ಸುಮಾರು ಒಂದು ಲಕ್ಷ ಎಕ್ರೆ ಸಕ್ರಮವಾಗಲಿದ್ದು, ರಾಜ್ಯದ ಬೊಕ್ಕಸಕ್ಕೆ 400 ಕೋಟಿ ರೂ.ವರೆಗೆ ಆದಾಯವೂ ಸಂಗ್ರಹವಾಗಲಿದೆ.
ಇಪ್ಪತ್ತು ಎಕ್ರೆವರೆಗಿನ ಒತ್ತುವರಿ ಸಕ್ರಮಕ್ಕೆ ತೀರ್ಮಾನಿಸಿದ್ದು, 1ರಿಂದ 5 ಎಕರೆ ಒತ್ತುವರಿ ಪ್ರಮಾಣವೇ ಶೇ.80ರಷ್ಟು ಇದೆ. ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ ಎಂದು ಹೇಳಲಾಗಿದೆ. ರೈತರಿಗೆ ಕಾಫಿ ತೋಟ ಗುತ್ತಿಗೆ ನೀಡುವ ಸಂಬಂಧ ಇದೇ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.
ಪ್ರಮಾಣಪತ್ರ
ಕಾಫಿ ತೋಟ ಒತ್ತುವರಿ ಸಕ್ರಮಕ್ಕೆ ಪ್ರತ್ಯೇಕ ನಮೂನೆ ಸಿದ್ಧಪಡಿಸಲಾಗುತ್ತಿದ್ದು, ಮೊದಲು ಒತ್ತುವರಿ ಮಾಡಿಕೊಂಡಿರುವ ರೈತ ಪ್ರಮಾಣಪತ್ರ ನೀಡಬೇಕು. ಎಷ್ಟು ಎಕ್ರೆ ಒತ್ತುವರಿ ಎಂಬುದನ್ನು ತಿಳಿಸಬೇಕು. ಅನಂತರ ಆ ಜಮೀನು ಗುತ್ತಿಗೆ ಆಧಾರದಲ್ಲಿ ಪಡೆಯಲು ಅರ್ಜಿ ಸಲ್ಲಿಸಬೇಕು. ಸರಕಾರ ನಿಗದಿಪಡಿಸುವ ಮೊತ್ತವನ್ನು ಒಮ್ಮೆಲೇ ಪಾವತಿಸಬೇಕು. 30 ವರ್ಷಗಳಿಗೆ ಮಾತ್ರ ಸದ್ಯಕ್ಕೆ ಗುತ್ತಿಗೆಗೆ ನೀಡಲು ತೀರ್ಮಾನಿಸಲಾಗಿದ್ದು, ಇನಂತರ ಆಗಿನ ಪರಿಸ್ಥಿತಿ ನೋಡಿಕೊಂಡು ಮುಂದುವರಿಯಲು ನಿರ್ಧರಿಸಲಾಗಿದೆ.
ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ ಒಂದು ಲಕ್ಷ ಎಕ್ರೆ ಕಾಫಿ ತೋಟ ಒತ್ತುವರಿ ಗುರುತಿಸಲಾಗಿದೆ. ಕಾಫಿ ತೋಟದ ಮಧ್ಯೆ ಸರಕಾರಿ ಜಾಗ ಇದ್ದು, ಅಲ್ಲಿ ಒತ್ತುವರಿ ಮಾಡಿ ತೋಟ ಮಾಡಲಾಗಿದೆ.
ಮಲೆನಾಡು ಭಾಗದ ಜನಪ್ರತಿನಿಧಿಗಳ ಜತೆ ಈ ಬಗ್ಗೆ ಹಲವು ಸುತ್ತಿನ ಸಭೆ ನಡೆದು ನಿಯಮಾವಳಿ ರೂಪುರೇಷೆ ಚರ್ಚಿಸಲಾಗಿದ್ದು, ಅನಂತರವೇ ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಸೇಂದಿವನವೂ ಕೃಷಿಗೆ ಬಳಕೆ
ಈ ನಡುವೆ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿರುವ ಸೇಂದಿವನ ಜಾಗ ರೈತರಿಗೆ ಉಳುಮೆ ಮಾಡಲು ಸಾಗುವಳಿ ಚೀಟಿ ನೀಡಲು ಸರಕಾರ ಮುಂದಾಗಿದ್ದು, ಈ ವಿಚಾರವೂ ಭೂ ಕಂದಾಯ ತಿದ್ದುಪಡಿ ಮಸೂದೆಯಲ್ಲಿ ಸೇರಿದೆ.
ಈ ಹಿಂದೆ ಸೇಂದಿವನಎಂದು ಗುರುತಿಸಲಾಗಿದ್ದ ಜಾಗ ಸರಕಾರದ ಸುಪರ್ದಿಯಲ್ಲಿದ್ದು, ಅಲ್ಲಿ ಕೃಷಿ ಚುಟುವಟಿಕೆ ನಡೆಸುತ್ತಿರುವ ರೈತರಿಗೆ ಶಾಶ್ವತವಾಗಿ ಸಾಗುವಳಿಚೀಟಿ ನೀಡುವುದು ಸರಕಾರದ ಉದ್ದೇಶವಾಗಿದಸೆ ಎಂದು ಹೇಳಲಾಗಿದೆ.
ಮಲೆನಾಡು, ಕರಾವಳಿ ಭಾಗದಲ್ಲಿ 50 ಸಾವಿರ ಎಕ್ರೆಗೂ ಹೆಚ್ಚು ಸೇಂದಿವನದ ಜಾಗ ಇದೆ. ಅಲ್ಲಿ ರೈತರು ಕೃಷಿ ಚಟುವಟಿಕೆ ಮಾಡುತ್ತಿದ್ದು, ಈಗ ಆ ಜಾಗವನ್ನು ರೈತರಿಗೆ ಬಿಟ್ಟುಕೊಟ್ಟು ಬಗರ್ಹುಕುಂ ಅಡಿ ಸಾಗುವಳಿ ಚೀಟಿ ನೀಡಲು ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾಫಿ ತೋಟ ಒತ್ತುವರಿ ಸಕ್ರಮಗೊಳಿಸಿ ಗುತ್ತಿಗೆಗೆ ನೀಡುವುದರಿಂದ ಸುಮಾರು 40ರಿಂದ 50 ಸಾವಿರ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಈ ಭಾಗದ ರೈತರ ಮನವಿ ಮೇರೆಗೆ ಸರಕಾರ ಇದಕ್ಕೆ ಮುಂದಾಗಿದೆ. ಗುತ್ತಿಗೆ ನೀಡುವುದರಿಂದ ಸರಕಾರಕ್ಕೂ ಆದಾಯ ಸಿಗಲಿದೆ.
– ಆರ್.ಅಶೋಕ್, ಕಂದಾಯ ಸಚಿವ
-ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !