ಶಾಸಕರ ಅಮಾನತು: ತರಬೇತಿಯ ಪ್ರಾಯೋಗಿಕ ಭಾಗ- ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌


Team Udayavani, Jul 22, 2023, 7:12 AM IST

U T KHADER

ಬೆಂಗಳೂರು: ಪೀಠಕ್ಕೆ ಅಗೌರವ ತೋರಿದವರನ್ನು ಅಮಾನತುಪಡಿಸಿದ್ದು ಹೊಸ ಶಾಸಕರಿಗೆ ನೀಡಿದ ತರಬೇತಿಯ ಪ್ರಾಯೋಗಿಕ ಭಾಗ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ವ್ಯಾಖ್ಯಾನಿಸಿದರು.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆ ಅಧಿವೇಶನ ಆರಂಭಕ್ಕೂ ಮುನ್ನ ಹೊಸ ಶಾಸಕರಿಗೆ ಬೆಂಗಳೂರಿನ ಹೊರವಲಯದಲ್ಲಿ ಮೂರು ದಿನಗಳ ತರಬೇತಿ ನೀಡಲಾಗಿತ್ತು. ಅಲ್ಲಿ ಥಿಯರಿ ಪಾಠ ಆಗಿತ್ತು. ಇಲ್ಲೀಗ ಪ್ರಾಕ್ಟಿಕಲ್‌ ಪಾಠ ಆಗಿದೆ. ಇದೂ ತರಬೇತಿಯ ಒಂದು ಭಾಗ ಎಂದರು.

ಸ್ಪೀಕರ್‌ ಆಗಿ ನಾನಂತೂ ಪ್ರತಿಪಕ್ಷದ ಮಿತ್ರ. ನನ್ನ ಮೇಲೆ ಪ್ರತಿಪಕ್ಷದವರಿಗೆ ಸಂಶಯ ಇರಬಹುದು. ಟೀಕಿಸಿರಬಹುದು. ಇವೆಲ್ಲವೂ ಪ್ರಜಾಪ್ರಭುತ್ವದ ಸೌಂದರ್ಯ. ಯಾವುದೇ ಒತ್ತಡಕ್ಕೆ ಮಣಿಯುವ ಅಗತ್ಯ ನನಗಿಲ್ಲ. ಹಿಂದೆಲ್ಲಾ ಇಂತಹ ಅಶಿಸ್ತುಗಳು ನಡೆದಾಗ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರಿಂದಲೇ ಹೀಗಾಗಿದೆ. ಇನ್ನು ಮುಂದಾದರೂ ಅಶಿಸ್ತು ನಿಲ್ಲಬೇಕು.

ಸದನವನ್ನು ಉತ್ತಮವಾಗಿ ನಡೆಸುವುದು ನನ್ನೊಬ್ಬನ ಜವಾಬ್ದಾರಿ ಅಷ್ಟೇ ಅಲ್ಲ. ಎಲ್ಲ ಸದಸ್ಯರ ಹೊಣೆಯೂ ಹೌದು. ಐಎಎಸ್‌ ಅಧಿಕಾರಿ ನೇಮಕ ಸಂಬಂಧ ಪ್ರತಿಪಕ್ಷ ಸದಸ್ಯರು ಚರ್ಚೆಗೆ ಕೇಳಿದಾಗ ಕೊಟ್ಟಿದ್ದೆ. ಬರಗಾಲ, ರೈತ ವಿಚಾರ ಸೇರಿ ಹಲವು ವಿಷಯಗಳಿದ್ದವು. ಎಲ್ಲವನ್ನೂ ಬಿಟ್ಟು ಈ ವಿಚಾರಕ್ಕೆ ಧರಣಿ ನಡೆಸಿದರು. ಕಲಾಪ ಮುಂದೂಡಿ ಸಂಧಾನಕ್ಕೆ ಯತ್ನಿಸಿದರೂ ರಾಜಿಯಾಗಲಿಲ್ಲ. ಹಲವು ವಿಧೇಯಕಗಳ ಮಂಡನೆ, ಅನುಮೋದನೆ ಮಾಡಬೇಕಿತ್ತು. ಧರಣಿಯಲ್ಲೇ ಕಾಲ ಕಳೆದು ಹೋಗಿದ್ದರಿಂದ ಹಾಗೂ ಗಮನ ಸೆಳೆಯುವ ಸೂಚನೆಗಳು ಸೇರಿ ಅನೇಕ ವಿಷಯಗಳು ಇದ್ದುದರಿಂದ ಭೋಜನ ವಿರಾಮ ನೀಡಲಾಗಲಿಲ್ಲ.

ಬದಲಿಗೆ ಕಲಾಪ ಮುಂದುವರಿಸಿ, ಊಟಕ್ಕೆ ಹೋಗುವವರಿಗೆ ಅವಕಾಶ ಕೊಡಲಾಗಿತ್ತು. ಸಭೆಯೊಂದಕ್ಕೆ ತೆರಳಬೇಕಿದ್ದರಿಂದ ಉಪಸಭಾಧ್ಯಕ್ಷರನ್ನು ಪೀಠದಲ್ಲಿ ಕೂರಿಸಿ ಹೋಗಿದ್ದಾಗ ಕಾಗದ ಪತ್ರಗಳನ್ನು ಅವರ ಮುಖಕ್ಕೆ ತೂರಿದ ಧರಣಿನಿರತರು, ಪೀಠಕ್ಕೆ ಅಗೌರವ ತೋರಿದರು. ಪೀಠದ ಗೌರವ ಉಳಿಸಬೇಕಾದದ್ದು ನನ್ನ ಕರ್ತವ್ಯವಾಗಿದ್ದರಿಂದ 10 ಶಾಸಕರನ್ನು ಅಮಾನತು ಮಾಡುವ ಕನಿಷ್ಠ ಶಿಕ್ಷೆಯನ್ನು ಬೇಸರದಿಂದಲೇ ಕೊಡಬೇಕಾಯಿತು. ಅವರೆಲ್ಲರ ಪಕ್ಷಗಳು ಬೇರೆಯದರೂ ನಮ್ಮ ಆತ್ಮೀಯ ಮಿತ್ರರೆ. ಅವರಿಗೆ ಸಂಶಯವಿದ್ದರೆ ಏನು ಮಾಡುವುದು? ಅದೇ ರೀತಿ ಸದನದಲ್ಲಿ ನಡೆದದ್ದನ್ನು ಸಂವಿಧಾನದ ಮುಖ್ಯಸ್ಥರಾದ ರಾಜ್ಯಪಾಲರಿಗೆ ವರದಿ ಮಾಡುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ನಾನು ಮುಕ್ತ ಮನಸ್ಸಿನಿಂದ ಇದ್ದೇನೆ
ಅಶಿಸ್ತು ತೋರಿದ 10 ಶಾಸಕರನ್ನಷ್ಟೇ 2 ದಿನಗಳ ಕಾಲ ಅಮಾನತುಪಡಿಸಿದ್ದೆ. ಉಳಿದವರು ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೇಳಬಹುದಿತ್ತು ಅಥವಾ ಸದನದ ಹೊರಗೆ ಪ್ರತಿಭಟಿಸುವ ಬದಲು ಮಾತುಕತೆ ಮಾಡಬಹುದಿತ್ತು. ಬುದ್ಧಿವಾದ ಹೇಳಿ ಅವರ ವರ್ತನೆ ಸರಿಪಡಿಸಿಕೊಂಡು ಹೋಗಬಹುದಿತ್ತು. ನಾನಂತೂ ಮುಕ್ತ ಮನಸ್ಸಿನಿಂದ ಇದ್ದೇನೆ. ಎಲ್ಲರೂ ನಮಗೆ ಮಿತ್ರರೇ ಎಂದು ಸ್ಪೀಕರ್‌ ಹೇಳಿದರು.

ಖಾಸಗಿ ಹೋಟೆಲ್‌ನಲ್ಲಿ ಅತಿಥಿಗಳಿಗೆ ಮುಖ್ಯಮಂತ್ರಿಗಳು ಔತಣ ಕೂಟ ಏರ್ಪಡಿಸಿದ್ದರು. ನನಗೂ ಆಹ್ವಾನವಿತ್ತು. ಹೋಗಿ ಶುಭ ಹಾರೈಸಿ ಬಂದೆನೇ ಹೊರತು, ಅಲ್ಲಿ ಯಾವುದೇ ರಾಜಕೀಯ ಸಭೆ, ಚರ್ಚೆಗಳಲ್ಲಿ ನಾನು ಪಾಲ್ಗೊಂಡಿಲ್ಲ. ಸ್ಪೀಕರ್‌ ಸ್ಥಾನದಲ್ಲಿದ್ದಾಗ ಸಿಎಂ ಬೇಡ, ಇನ್ನೊಬ್ಬರು ಬೇಕು ಎನ್ನಲಾಗುವುದಿಲ್ಲ.
ಯು.ಟಿ. ಖಾದರ್‌, ಸ್ಪೀಕರ್‌

ಟಾಪ್ ನ್ಯೂಸ್

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ

Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

24-saturday

Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

ಬಿಸಿಲು: ಮತದಾನ ಸಮಯ ಪರಿಷ್ಕರಣೆಗೆ ಬಿಜೆಪಿ ಮನವಿ

ಬಿಸಿಲು: ಮತದಾನ ಸಮಯ ಪರಿಷ್ಕರಣೆಗೆ ಬಿಜೆಪಿ ಮನವಿ

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ

Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.