2011ರ ವಿಶ್ವಕಪ್ ಕ್ರಿಕೆಟ್ ಫೈನಲ್ ಫಿಕ್ಸ್ ಆಗಿದ್ದಕ್ಕೆ ಸಾಕ್ಷ್ಯವಿಲ್ಲ
ಕ್ರಿಕೆಟಿಗರ ವಿಚಾರಣೆ ಮುಗಿಸಿದ ಪೊಲೀಸರು, ಐಸಿಸಿ, ಬಿಸಿಸಿಐ ತನಿಖೆ ನಡೆಸೀತೇ?
Team Udayavani, Jul 4, 2020, 5:45 AM IST
ಕೊಲಂಬೊ: 2011ರ ವಿಶ್ವ ಕಪ್ ಕ್ರಿಕೆಟ್ ಫೈನಲ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು ತನಿಖೆಯನ್ನು ಪೂರ್ತಿಗೊಳಿಸಿದ್ದಾರೆ. ಇದಕ್ಕೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ ಎಂದಿದ್ದಾರೆ.
ಅಂದಿನ ತಂಡದ ನಾಯಕ ಕುಮಾರ ಸಂಗಕ್ಕರ ಮತ್ತು ಪ್ರಮುಖ ಬ್ಯಾಟ್ಸ್ಮನ್ ಮಾಹೇಲ ಜಯವರ್ಧನೆ ಅವರನ್ನು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಅಂದಿನ ಆಯ್ಕೆ ಸಮಿತಿ ಅಧ್ಯಕ್ಷ ಅರವಿಂದ ಡಿ ಸಿಲ್ವ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.
ಆರೋಪ ದೃಢಪಟ್ಟಿಲ್ಲ
“ನಾವು ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೆ ಈಗಾಗಲೇ ವರದಿ ಸಲ್ಲಿ ಸಿದ್ದೇವೆ. ಇಂದು ನಡೆದ ಆಂತರಿಕ ಸಂವಾದದ ಬಳಿಕ ನಾವು ತನಿಖೆಯನ್ನು ಮುಗಿಸಿದ್ದೇವೆ. ಪಂದ್ಯ ಫಿಕ್ಸ್ ಆಗಿರುವುದಕ್ಕೆ ನಮಗೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ’ ಎಂದು ಪೊಲೀಸ್ ಮಹಾನಿರ್ದೇಶಕ ಜಗತ್ ಫೊನ್ಸೇಕ ತಿಳಿಸಿದ್ದಾರೆ.
“ಅಂದಿನ ಕ್ರೀಡಾ ಸಚಿವ ಮಹಿಂದಾ ನಂದ ಅಲುತಗಾಮಗೆ ಅವರ 14 ಅಂಶಗಳ ಆರೋಪಗಳಾÂವುವೂ ದೃಢ ಪಟ್ಟಿಲ್ಲ. ಹೀಗಾಗಿ ಎಲ್ಲ ಆಟಗಾರರಿಗೂ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಮುಂದುವರಿಸುವ ಅಗತ್ಯ ಕಂಡು ಬರುವುದಿಲ್ಲ’ ಎಂದು ಜಗತ್ ಫೊನ್ಸೇಕ ಹೇಳಿದರು.
“ಕೊನೆಯ ಗಳಿಗೆಯಲ್ಲಿ ತಂಡದಲ್ಲಿ ಭಾರೀ ಬದಲಾವಣೆ ಸಂಭವಿಸಿತು ಎಂಬುದು ಅಲುತಗಾಮಗೆ ಮಾಡಿದ ಆರೋಪಗಳಲ್ಲಿ ಪ್ರಮುಖವಾದುದು. ಇದಕ್ಕೇನು ಕಾರಣ ಎಂಬುದನ್ನು ಮೂವರು ಕ್ರಿಕೆಟಿಗರ ವಿಚಾರಣೆಯ ವೇಳೆ ವಿವರಣೆ ಪಡೆಯಲಾಗಿದೆ’ ಎಂದರು.
ಆದರೆ ಆಟಗಾರರ್ಯಾರೂ ಫಿಕ್ಸಿಂಗ್ನಲ್ಲಿ ಪಾಲ್ಗೊಂಡಿಲ್ಲ, ಹೊರಗಿನ ನಿರ್ದಿಷ್ಟ ಫಿಕ್ಸಿಂಗ್ ತಂಡವೊಂದರ ಕೈವಾಡವಿದೆ ಎಂಬುದು ಅಲುತಗಾಮಗೆ ಮಾಡಿದ ಮುಖ್ಯ ಆರೋಪವಾಗಿತ್ತು.
ತನಿಖೆ ಈ ಜಾಡಿನಲ್ಲಿ ಮುಂದು ವರಿದೀತೇ, ಐಸಿಸಿ ಹೆಚ್ಚಿನ ತನಿಖೆಗೆ ಸೂಚಿ ಸೀತೇ ಎಂಬುದು ಮುಂದಿನ ಹಂತದ ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ