ಯುಪಿಯಲ್ಲಿ ‘ಮಿಸ್ ಬಿಕಿನಿ’ಗೆ ಕಾಂಗ್ರೆಸ್ ಟಿಕೆಟ್: ವ್ಯಾಪಕ ಟೀಕೆ
''ಬಿಸಿಯೇರಿದ'' ಉತ್ತರಪ್ರದೇಶದ ಚುನಾವಣಾ ಕಣ !
Team Udayavani, Jan 15, 2022, 6:12 PM IST
ಲಕ್ನೋ : ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಾಮಾನ್ಯ ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಹೊಸತನ ತೋರಿರುವ ಕಾಂಗ್ರೆಸ್ ಪಕ್ಷ ‘ಬಿಕಿನಿ ಮಾಡೆಲ್’ ಎಂದು ಸುದ್ದಿಯಾಗಿದ್ದ ನಟಿಗೆ ಟಿಕೆಟ್ ನೀಡಿ ಟ್ರೊಲರ್ ಗಳಿಗೆ ಮತ್ತೆ ಆಹಾರವಾಗಿದೆ.
ಬಲಪಂಥೀಯ ಗುಂಪುಗಳು ಮೀರತ್ನ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದಿಂದ ‘ಬಿಕಿನಿ ಮಾಡೆಲ್’ ಖ್ಯಾತಿಯ ಅರ್ಚನಾ ಗೌತಮ್ ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ವ್ಯಾಪಕವಾಗಿ ಟೀಕಿಸುತ್ತಿವೆ. ಅವರ ಬಿಕಿನಿ ಫೋಟೋಗಳು ಪ್ರವಾಹದೋಪಾದಿಯಲ್ಲಿ ಹರಿದಾಡುತ್ತಿದೆ.
ಅರ್ಚನಾ ಅವರು ‘ಮಿಸ್ ಬಿಕಿನಿ ಇಂಡಿಯಾ 2018’, ‘ಮಿಸ್ ಉತ್ತರ ಪ್ರದೇಶ 2014’ ಮತ್ತು ‘ಮಿಸ್ ಕಾಸ್ಮೋ ವರ್ಲ್ಡ್ 2018’ ನಂತಹ ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ :ಹಾರುವ “ಕುದುರೆ”ಗಳಿಗೆ ಸ್ಥಳ ಬಿಡಲು ಬಿಜೆಪಿಯಿಂದಲೇ ಓಪನ್ ಆಫರ್
ಅರ್ಚನಾ ಗೌತಮ್ ಅವರ ಬಿಕಿನಿ ತೊಟ್ಟ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ”ನಾನು ಮಿಸ್ ಬಿಕಿನಿ 2018 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ನಾನು ಮಿಸ್ ಉತ್ತರ ಪ್ರದೇಶ 2014 ಮತ್ತು ಮಿಸ್ ಕಾಸ್ಮೊ ವರ್ಲ್ಡ್ 2018 ಆಗಿದ್ದೇನೆ. ನನ್ನ ರಾಜಕೀಯ ವೃತ್ತಿಯೊಂದಿಗೆ ಮಾಧ್ಯಮಗಳು ನನ್ನ ವೃತ್ತಿಯನ್ನು ವಿಲೀನಗೊಳಿಸದಂತೆ ನಾನು ಜನರನ್ನು ವಿನಂತಿಸುತ್ತೇನೆ” ಎಂದಿದ್ದಾರೆ.
ಚುನಾವಣೆಗೆ ಮುನ್ನ ಹಸ್ತಿನಾಪುರದ ಬಗ್ಗೆ ತನ್ನ ದೂರದೃಷ್ಟಿಯ ಬಗ್ಗೆ ಮಾತನಾಡಿದ ನಟಿ, ಚುನಾವಣೆಯಲ್ಲಿ ಗೆದ್ದರೆ ಅಭಿವೃದ್ಧಿ ಕಾರ್ಯಗಳ ಮೇಲೆ ತನ್ನ ಮುಖ್ಯ ಗಮನ. ‘ಪ್ರಾಚೀನ ಪವಿತ್ರ’ ನಗರವಾಗಿರುವ ಹಸ್ತಿನಾಪುರದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದಾರೆ.
”ಹಸ್ತಿನಾಪುರ ಪ್ರವಾಸಿ ಸ್ಥಳವಾಗಿದ್ದು, ಸಾಕಷ್ಟು ಪುರಾತನ ದೇವಾಲಯಗಳಿದ್ದರೂ ಸಂಪರ್ಕ ಸಮಸ್ಯೆಯಿಂದ ಜನರು ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ, ಶಾಸಕನಾದ ನಂತರ ಬಸ್ ನಿಲ್ದಾಣ, ರೈಲು ನಿಲ್ದಾಣ ನಿರ್ಮಾಣಕ್ಕೆ ನನ್ನ ಮೊದಲ ಆದ್ಯತೆ. ಪ್ರವಾಸೋದ್ಯಮ ಸಿಕ್ಕರೆ ಒಂದು ಉತ್ತೇಜನ, ಹೆಚ್ಚು ಪ್ರವಾಸಿಗರು ಬರುತ್ತಾರೆ ಮತ್ತು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಗೌತಮ್ ಹೇಳಿರುವುದಾಗಿ ಎಎನ್ಐ ಉಲ್ಲೇಖಿಸಿದೆ.
ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ. ಅವರಿಂದ ಇಂತಹ ಅಭ್ಯರ್ಥಿ ಹೊರತು ಪಡಿಸಿ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ತಿರುಗೇಟು
ಟೀಕೆಗಳಿಗೆ ತಿರುಗೇಟು ನೀಡಿರುವ ಯುಪಿ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ , ಬಿಜೆಪಿಯಲ್ಲಿ ನಟಿಯರು ಜನಪ್ರತಿನಿಧಿಗಳಾಗಿಲ್ಲವೇ? ಕೆಲವರು ಕೇಂದ್ರ ಸಚಿವರು ಕೂಡ ಆಗಿದ್ದಾರೆ. ನಟಿಯೊಬ್ಬರು ರಾಜಕಾರಣಿಯಾಗಲು ಮುಂದೆ ಬಂದರೆ ಪ್ರೋತ್ಸಾಹ ನೀಡಿ ಹುರಿದುಂಬಿಸಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ