ಎಲ್ಲರ ಕುತೂಹಲ ಡೊಮಿನಿಕಾ ದೇಶದ ಬಗ್ಗೆ…ಭಾರತಕ್ಕೆ ಚೋಕ್ಸಿಯನ್ನು ಗಡಿಪಾರು ಮಾಡಲು ಸಾಧ್ಯವೇ?

ಡೊಮಿನಿಕಾದ ಕಾಮನ್ ವೆಲ್ತ್ ಹೈಕೋರ್ಟ್ ವಜ್ರೋದ್ಯಮಿ ಮೆಹೂಲ್ ಜೋಕ್ಸಿಯನ್ನು ಭಾರತಕ್ಕೆ ಗಡಿಪಾರುವುದಕ್ಕೆ ತಡೆ ನೀಡಿದೆ.

Team Udayavani, May 28, 2021, 11:33 AM IST

ಎಲ್ಲರ ಕುತೂಹಲ ಡೊಮಿನಿಕಾ ದೇಶದ ಬಗ್ಗೆ…ಭಾರತಕ್ಕೆ ಚೋಕ್ಸಿಯನ್ನು ಗಡಿಪಾರು ಮಾಡಲು ಸಾಧ್ಯವೇ?

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿ ಆ್ಯಂಟಿಗುವಾದಲ್ಲಿ ನೆಲೆಸಿದ್ದ ವಜ್ರೋದ್ಯಮಿ ಮೆಹೂಲ್ ಚೋಕ್ಸಿಯನ್ನು ದ್ವೀಪರಾಷ್ಟ್ರದಲ್ಲಿ ಬಂಧಿಸಿದ ತರುವಾಯ ಭಾರತದಲ್ಲಿ ಅತೀ ಹೆಚ್ಚು ಜನರು ಡೊಮಿನಿಕಾ ದೇಶದ ಬಗ್ಗೆ ಸರ್ಜ್ (ಶೋಧಿಸು) ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕೋವಿಡ್ ನಿಂದ ದೂರವಿರಲು ಹಾವು ತಿಂದ ತಮಿಳುನಾಡಿನ ವ್ಯಕ್ತಿಯ ಬಂಧನ

62ವರ್ಷದ ಮೆಹೂಲ್ ಚೋಕ್ಸಿ ಭಾರತದಿಂದ ಪರಾರಿಯಾದ ನಂತರ 2018ರಿಂದ ಆ್ಯಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸ್ತವ್ಯ ಹೂಡಿದ್ದ. ಏತನ್ಮಧ್ಯೆ ಭಾನುವಾರ ಚೋಕ್ಸಿ ಆ್ಯಂಟಿಗುವಾದಿಂದ ನಿಗೂಢವಾಗಿ ಕಣ್ಮರೆಯಾಗಿದ್ದ. ಆದರೆ ದಿಢೀರ್ ಬೆಳವಣಿಗೆಯಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಚೋಕ್ಸಿಯನ್ನು ಡೋಮಿನಿಕಾ ಗಣರಾಜ್ಯದಲ್ಲಿ ಅಧಿಕಾರಿಗಳು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದರು.

ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಎಲ್ಲರ ಮನಸ್ಸಿನಲ್ಲಿ ಮೂಡಿದ್ದು, ಡೊಮಿನಿಕಾ ದೇಶ ಎಲ್ಲಿದೆ? ಅಲ್ಲಿನ ನೀತಿ, ನಿಯಮಗಳೇನು ಎಂಬ ಬಗ್ಗೆ ಜನರು ಗೂಗಲ್ ನಲ್ಲಿ ಹೆಚ್ಚು ಸರ್ಜ್ ಮಾಡಿ ಮಾಹಿತಿ ಕಲೆಹಾಕಿದ್ದರು ಎಂದು ವರದಿ ತಿಳಿಸಿದೆ.

“ಡೊಮಿನಿಕಾ ಪೂರ್ವ ಕೆರಿಬಿಯನ್ ಸಮುದ್ರ ಪ್ರದೇಶದಲ್ಲಿದೆ. ಈ ದ್ವೀಪ ರಾಷ್ಟ್ರ ಲೆಸ್ಸರ್ ಆ್ಯಂಟಿಲ್ಲೀಸ್ ದ್ವೀಪಸಮೂಹದಲ್ಲಿರುವ ವಿಂಡ್ವರ್ಡ್ ದ್ವೀಪ ಸಮೂಹಗಳ ಒಂದು ಭಾಗವಾಗಿದೆ. ಡೊಮಿನಿಕಾದ ರೋಸೌ ಈ ದೇಶದ ರಾಜಧಾನಿ ಮತ್ತು ಮುಖ್ಯ ಬಂದರು ಪ್ರದೇಶವಾಗಿದೆ. ಇದು ದ್ವೀಪದ ಪಶ್ಚಿಮಭಾಗದಲ್ಲಿದೆ”.

ಡೊಮಿನಿಕಾ ದ್ವೀಪ ರಾಷ್ಟ್ರ 750 ಚದರ ಕಿಲೋಮೀಟರ್ ನಷ್ಟು ವ್ಯಾಪ್ತಿ ಹೊಂದಿದೆ. ಅಂದಾಜು 75 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ರೂಸ್ವೆ.ಲ್ಟ್ ಸ್ಕೆರಿಟ್ ಡೊಮಿನಿಕಾದ ಪ್ರಧಾನಿಯಾಗಿದ್ದಾರೆ. ಇವರು ಸತತ ನಾಲ್ಕು ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಏರಿದ್ದರು ಎಂದು ವರದಿ ತಿಳಿಸಿದೆ.

ಭಾರತದಿಂದ ಚೋಕ್ಸಿ ಪರಾರಿಯಾದ ನಂತರ ಕೆರಿಬಿಯನ್ ಸಮುದ್ರ ಪ್ರದೇಶವನ್ನು ಆವರಿಸಿಕೊಂಡಿರುವ ಆ್ಯಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸ್ತವ್ಯ ಹೂಡಿದ್ದ. ಪ್ರಮುಖ ದ್ವೀಪಪ್ರದೇಶವಾದ ಆ್ಯಂಟಿಗುವಾ ಮತ್ತು ಬಾರ್ಬುಡಾ ಇತರ ಪುಟ್ಟ ದ್ವೀಪಗಳನ್ನೂ ಒಳಗೊಂಡಿದ್ದು, ಸೇಂಟ್ ಜಾನ್ಸ್ ಇದರ ರಾಜಧಾನಿಯಾಗಿದೆ. ಆ್ಯಂಟಿಗುವಾದಿಂದ ಡೊಮಿನಿಕಾ ಸುಮಾರು 188.55 ಕಿಲೋ ಮೀಟರ್ ದೂರದಲ್ಲಿದೆ.

ಮೆಹೂಲ್ ಚೋಕ್ಸಿಯನ್ನು ಡೊಮಿನಿಕಾದಿಂದ ಭಾರತಕ್ಕೆ ಗಡಿಪಾರು ಮಾಡಲು ಸಾಧ್ಯವೇ?
ಡೊಮಿನಿಕಾದ ಕಾಮನ್ ವೆಲ್ತ್ ಹೈಕೋರ್ಟ್ ವಜ್ರೋದ್ಯಮಿ ಮೆಹೂಲ್ ಜೋಕ್ಸಿಯನ್ನು ಭಾರತಕ್ಕೆ ಗಡಿಪಾರುವುದಕ್ಕೆ ತಡೆ ನೀಡಿದೆ. ಡೊಮಿನಿಕಾದ ಅಧಿಕಾರಿಗಳ ಪ್ರಕಾರ, ಚೋಕ್ಸಿಯನ್ನು ಆ್ಯಂಟಿಗುವಾಕ್ಕೆ ವಾಪಸ್ ಕಳುಹಿಸಲಾಗುವುದು. ಚೋಕ್ಸಿ ಆ್ಯಂಟಿಗುವಾದ ಪ್ರಜೆಯಾಗಿದ್ದಾರೆ. ಕಾನೂನು ಬಾಹಿರವಾಗಿ ಡೊಮಿನಿಕಾ ಪ್ರವೇಶಿಸಿದ್ದ ಚೋಕ್ಸಿ ವಿರುದ್ಧ ಕಾನೂನು ಪ್ರಕಾರ ನಾವು ಆ್ಯಂಟಿಗುವಾ/ಬಾರ್ಬುಡಾಕ್ಕೆ ವಾಪಸ್ ಕಳುಹಿಸಬೇಕಾಗಿದೆ ಎಂದು ಡಬ್ಲ್ಯುಐಸಿ ನ್ಯೂಸ್ ಗೆ
ತಿಳಿಸಿದ್ದಾರೆ.

ಚೋಕ್ಸಿ ಪರ ವಕೀಲರು ಕೂಡಾ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಮೆಹೂಲ್ ಚೋಕ್ಸಿ ಈಗ ಭಾರತದ ಪ್ರಜೆಯಲ್ಲ, ಆತ ಆ್ಯಂಟಿಗುವಾದ ನಾಗರಿಕ. ಅಲ್ಲದೇ ವಲಸೆ ಮತ್ತು ಪಾಸ್ ಪೋರ್ಟ್ ಕಾಯ್ದೆ ಸೆಕ್ಷನ್ 17 ಮತ್ತು 23ರ ಪ್ರಕಾರ ಚೋಕ್ಸಿಯನ್ನು ಆ್ಯಂಟಿಗುವಾಕ್ಕೆ ಮಾತ್ರ ಗಡಿಪಾರು ಮಾಡಬಹುದೇ ವಿನಃ, ಭಾರತಕ್ಕೆ ಸಾಧ್ಯವಿಲ್ಲ ಎಂದು ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ.

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.