ನಾಪೋಕ್ಲು ಸ್ಟುಡಿಯೋಕ್ಕೆ ಬಂತು ಪಾಪದ ಅತಿಥಿ !


Team Udayavani, Apr 9, 2021, 8:06 PM IST

ನಾಪೋಕ್ಲು ಸ್ಟುಡಿಯೋಕ್ಕೆ ಬಂತು ಪಾಪದ ಅತಿಥಿ !

ಮಡಿಕೇರಿ: ನಾಪೋಕ್ಲುವಿನ ರಮ್ಯ ಸ್ಟುಡಿಯೋ ಮಾಲೀಕ, ಪತ್ರಕರ್ತ ದುಗ್ಗಳ ಸದಾನಂದ ಅವರು ಎಂದಿನಂತೆ ತಮ್ಮ ಸ್ಟುಡಿಯೋ ಬಾಗಿಲು ತೆರೆಯಲು ಬಂದಾಗ ಅಪರೂಪದ ಅತಿಥಿಯೊಬ್ಬರು ಕಾದು ಕುಳಿತಿದ್ದರು. ಅತ್ಯಂತ ಸಂಕೋಚ ಸ್ವಭಾವದ ಈ ಅತಿಥಿಯನ್ನು ಒಮ್ಮೆ ಮುದ್ದಿಸೋಣವೆಂದು ಹೊರಟ ಅವರ ಕೈಗೆ ಅದು ಕಚ್ಚಿಯೇ ಬಿಟ್ಟಿತು. ಪಾಪ ಸದಾನಂದ ಅವರನ್ನು ಅತಿಥಿಯಾಗಿ ಕಾಡಿದ್ದು ವನ್ಯಜೀವಿ “ಕಾಡುಪಾಪ”.

ಕುತೂಹಲ ಮೂಡಿಸಿದ “ಕಾಡುಪಾಪ”ವನ್ನು ಕಾರ್ಡ್‍ಬೋರ್ಡ್ ಪೆಟ್ಟಿಗೆಯೊಂದರಲ್ಲಿರಿಸಿದ ಸದಾನಂದ ಅವರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಭಾಗಮಂಡಲದ ವಲಯ ಅರಣ್ಯಾಧಿಕಾರಿ ದೇವರಾಜ್ ಸ್ಥಳಕ್ಕೆ ಆಗಮಿಸಿ, ಕಾಡುಪಾಪವನ್ನು ವಶಕ್ಕೆ ಪಡೆದು ನಂತರ ಅರಣ್ಯ ಪ್ರದೇಶಕ್ಕೆ ಬಿಟ್ಟರು.

ವನಪಾಲಕ ಸುರೇಶ್, ಸೋಮಣ್ಣ ಗೌಡ, ಪ್ರವೀಣ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ಕರ್ನಾಟಕದ ಮಲೆನಾಡ ಅರಣ್ಯ ಭಾಗ ಸೇರಿದಂತೆ, ಭಾರತ ಹಾಗೂ ಸಿಂಹಳದ ಅಭಯಾರಣ್ಯಗಳಲ್ಲಿ ಕಂಡು ಬರುವ “ಕಾಡುಪಾಪ” ಎಂಬ ಅಮಾಯಕ ಜೀವ ನಾಪೋಕ್ಲುವಿಗೆ ಹೇಗೆ ಬಂತೆಂಬುದೇ ಅಚ್ಚರಿ.

ಇದನ್ನೂ ಓದಿ :ಬೆತ್ತಲೆಯಾಗಿ ಪತ್ತೆಯಾದ ಉಪನ್ಯಾಸಕನ ಮೃತದೇಹ !

ಕಾಡುಪಾಪಕ್ಕೆ ಕೊಡವ ಭಾಷೆಯಲ್ಲಿ `ಚೀಂಗೆ ಕೂಳಿ’ ಮತ್ತು ತುಳುವಿನಲ್ಲಿ `ಉರಿಯೋಳು’ ಎನ್ನುತ್ತಾರೆ. ಅತ್ಯಂತ ಸಂಕೋಚದ ಸ್ವಭಾವದ ಈ ಜಿವಿಗಳು, ವೃಕ್ಷವಾಸಿಗಳು. ದೇಹದ ಉದ್ದ ಸುಮಾರು 175 ರಿಂದ 275 ಮಿಲಿ ಮೀಟರ್. ಹಳದಿ ಮಿಶ್ರಿತ ಬೂದು ಅಥವಾ ಕಡುಕಂದು ಬಣ್ಣದ ಉಣ್ಣೆಯಂಥ ಮೃದುವಾದ ಕೂದಲಿದೆ. ಬಾಲವಿಲ್ಲ, ಹೆಬ್ಬೆರಳಿದೆ, ದೊಡ್ಡ, ಗುಂಡಗಿನ ಕಣ್ಣು, ತಲೆಯ ಮೇಲೆ ಎದ್ದು ಕಾಣುವ ಕಿವಿಗಳಿವೆ.

ನಿಶಾಚರಿಯಾದ ಕಾಡುಪಾಪ, ಹಗಲಿನಲ್ಲಿ ಮರದ ಮೇಲೆ ನಿದ್ರಿಸುತ್ತ ಕಾಲ ಕಳೆಯುತ್ತದೆ. ಓಡಾಟ ಬಲು ನಿಧಾನ, ಕೀಟ, ಹಲ್ಲಿ, ಮರಗಪ್ಪೆ, ಹಕ್ಕಿಗಳು ಇದರ ಆಹಾರ. ವರ್ಷಕ್ಕೊಮ್ಮೆ ಗರ್ಭಧರಿಸುವ ಇವು ಎರಡು ಮರಿಗಳಿಗೆ ಜನ್ಮ ನೀಡುತ್ತವೆ.

– ಎಸ್.ಕೆ. ಲಕ್ಷ್ಮೀಶ್ ಮಡಿಕೇರಿ

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.