ಅತಿಯಾಗಿ ಮೊಬೈಲ್ ಬಳಸದಂತೆ ಪತಿ,ಮನೆಯವರು ಬುದ್ದಿವಾದ ಹೇಳಿದ್ದಕ್ಕೆ ಮಹಿಳೆ ಆತ್ಮಹತ್ಯೆ
Team Udayavani, Apr 14, 2023, 5:11 AM IST
ಪುಂಜಾಲಕಟ್ಟೆ : ಮೊಬೈಲ್ ಅತಿ ಬಳಕೆಯ ಬಗ್ಗೆ ಪತ್ನಿಗೆ ಪತಿ ಹಾಗೂ ಆಕೆಯ ಮನೆಯವರು ಬುದ್ದಿವಾದ ಹೇಳಿದ್ದಕ್ಕೆ ಖನ್ನತೆಗೊಳಗಾಗಿ ಮಹಿಳೆಯೋರ್ವರು ಆತ್ಮಹತ್ಯೆಗೈದ ಘಟನೆ ಎ.12ರಂದು ಸಂಜೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ನಯನಾಡು, ಬೆಂಚಿನಡ್ಕ ಎಂಬಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿ ಹರಿಪ್ರಸಾದ್ ಅವರ ಪತ್ನಿ ಜಯಲಕ್ಷ್ಮಿ ದೇವಾಡಿಗ(35)ಅವರು ಆತ್ಮಹತ್ಯೆ ಗೈದವರಾಗಿದ್ದಾರೆ.
ಹರಿಪ್ರಸಾದ್ ಅವರು ಜಯಲಕ್ಷ್ಮಿ ಅವರನ್ನು 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಜಯಲಕ್ಷ್ಮಿ ಅವರು ಮೊಬೈಲ್ನಲ್ಲಿ ಜಾಸ್ತಿ ಹೊತ್ತು ಯಾರಲ್ಲಿಯೋ ಮಾತನಾಡುವುದು, ಮೆಸೇಜ್ ಮಾಡುವುದನ್ನು ಗಮನಿಸಿ ಹರಿಪ್ರಸಾದ್ ಅವರು ಬುದ್ದಿವಾದ ಹೇಳಿದ್ದು ಆ ಬಳಿಕ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ ತನ್ನ ತಪ್ಪಿನ ಅರಿವಾಗಿ ಬಳಿಕ ಖನ್ನತೆಯಲ್ಲಿರುವುದನ್ನು ಗಮನಿಸಿ ಹರಿಪ್ರಸಾದ್ ಸಮಾಧಾನ ಮಾಡಿ ಬಳಿಕ ಜಯಲಕ್ಷ್ಮಿ ಅವರ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ಅವರು ಕೂಡಾ ಆಕೆಗೆ ಸಮಾದಾನ ಹೇಳಿದ್ದರು. ಆದರೆ ಬುಧವಾರ ಸಂಜೆ ತನ್ನ ಗಂಡ ಪೇಟೆಗೆ ಹೋಗಿರುವುದನ್ನು ಗಮನಿಸಿ ತನ್ನ ಮನೆಯ ಕೊಟ್ಟಿಗೆಯಲ್ಲಿರುವ ಕೊಠಡಿಯೊಳಗೆ ಕೊಠಡಿಯ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ದಯಾನಂದ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ