World Cup ಅರ್ಹತಾ ಕೂಟ: ಲಂಕಾ ಚಾಂಪಿಯನ್‌


Team Udayavani, Jul 10, 2023, 7:28 AM IST

lanka

ಹರಾರೆ: ಅಜೇಯ ಅಭಿಯಾನಗೈದ ಶ್ರೀಲಂಕಾ ತಂಡ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದ ರೊಂದಿಗೆ ಬಹಳ ಗತ್ತಿನಿಂದಲೇ ಪ್ರಧಾನ ಸುತ್ತಿಗೇರಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ರವಿವಾರದ ಫೈನಲ್‌ನಲ್ಲಿ ದಸುನ್‌ ಶಣಕ ಪಡೆ ನೆದರ್ಲೆಂಡ್ಸ್‌ಗೆ 128 ರನ್ನುಗಳ ಆಘಾತಕಾರಿ ಸೋಲುಣಿಸಿತು.

ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದರು. ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 47.5 ಓವರ್‌ಗಳಲ್ಲಿ 233ಕ್ಕೆ ಆಲೌಟ್‌ ಆಯಿತು. ಜವಾಬಿತ್ತ ನೆದರ್ಲೆಂಡ್ಸ್‌ 23.3 ಓವರ್‌ಗಳಲ್ಲಿ 105ಕ್ಕೆ ಕುಸಿಯಿತು.

ಈ ಎರಡೂ ತಂಡಗಳು ಕ್ರಮವಾಗಿ 9ನೇ ಹಾಗೂ 10ನೇ ತಂಡಗಳಾಗಿ ವಿಶ್ವಕಪ್‌ ಪ್ರಧಾನ ಸುತ್ತಿನಲ್ಲಿ ಆಡಲಿವೆ. ಇದರೊಂದಿಗೆ ವಿಶ್ವಕಪ್‌ ವೇಳಾಪಟ್ಟಿ ಪರಿಪೂರ್ಣಗೊಂಡಿದೆ. ಹಾಗೆಯೇ ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ ತಂಡಗಳ ಗೈರು ಎದ್ದು ಕಾಣಲಿದೆ.

ಏಕೈಕ ಅರ್ಧ ಶತಕ
ಪಿಚ್‌ ಬೌಲಿಂಗ್‌ಗೆ ಸಹಕರಿಸುತ್ತಿದ್ದ ಕಾರಣ ಲಂಕೆಗೆ ಬಿರುಸಿನ ಬ್ಯಾಟಿಂಗ್‌ ಸಾಧ್ಯವಾಗಲಿಲ್ಲ. ಆದರೆ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಎಚ್ಚರಿಕೆಯ ಆಟವಾಡುವಲ್ಲಿ ಯಶಸ್ವಿ ಯಾದರು. ಆರಂಭಿಕರಾದ ಪಥುಮ್‌ ನಿಸ್ಸಂಕ (23), ಸಮರವಿಕ್ರಮ (19) 44 ರನ್‌ ಆಗುವಷ್ಟರಲ್ಲಿ ವಾಪಸಾದರು. ಆಗಲೇ 10 ಓವರ್‌ ಮುಗಿದಿತ್ತು. ಈ ಹಂತದಲ್ಲಿ ಕುಸಲ್‌ ಮೆಂಡಿಸ್‌ (43), ಸಹಾನ್‌ ಅರಚಿಗೆ ಸರ್ವಾಧಿಕ 57 ಮತ್ತು ಚರಿತ ಅಸಲಂಕ 36 ರನ್‌ ಮಾಡಿ ತಂಡದ ಹೋರಾಟವನ್ನು ಜಾರಿಯಲ್ಲಿರಿಸಿದರು. ವನಿಂದು ಹಸರಂಗ 29 ರನ್‌ ಕೊಡುಗೆ ಸಲ್ಲಿಸಿದರು.

ಎಡಗೈ ಬ್ಯಾಟರ್‌ ಸಹಾನ್‌ ಅರಚಿಗೆ ಏಕದಿನದಲ್ಲಿ ಮೊದಲ ಸಲ ಕ್ರೀಸ್‌ ಇಳಿದು 57 ರನ್‌ ಬಾರಿಸಿ ಮಿಂಚಿದರು (71 ಎಸೆತ, 4 ಬೌಂಡರಿ). ಇದು ಅವರ 2ನೇ ಪಂದ್ಯ. ಪದಾರ್ಪಣ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್‌ ಅವಕಾಶ ಲಭಿಸಿರಲಿಲ್ಲ.

ನೆದರ್ಲೆಂಡ್ಸ್‌ ಬೌಲಿಂಗ್‌ ಸರದಿ ಯಲ್ಲಿ ಲೋಗನ್‌ ವಾನ್‌ ಬೀಕ್‌, ರಿಯಾನ್‌ ಕ್ಲೀನ್‌, ವಿಕ್ರಮ್‌ಜೀತ್‌ ಸಿಂಗ್‌ ಮತ್ತು ಶಕಿಬ್‌ ಜುಲ್ಫಿಕರ್‌ ತಲಾ 2 ವಿಕೆಟ್‌ ಉಡಾಯಿಸಿ ಲಂಕೆಯನ್ನು ನಿಯಂತ್ರಿಸಿದರು.

ನೆದರ್ಲೆಂಡ್ಸ್‌ ಸರದಿಯಲ್ಲಿ ಎರಡಂಕೆಯ ಸ್ಕೋರ್‌ ದಾಖಲಿಸಿದ್ದು ಮೂವರು ಮಾತ್ರ. 33 ರನ್‌ ಮಾಡಿದ ಆರಂಭಕಾರ ಮ್ಯಾಕ್ಸ್‌ ಓಡೌಡ್‌ ಅವರದೇ ಹೆಚ್ಚಿನ ಗಳಿಕೆ. ಲೋಗನ್‌ ವಾನ್‌ ಬೀಕ್‌ 20, ವಿಕ್ರಮ್‌ಜೀತ್‌ ಸಿಂಗ್‌ 13 ರನ್‌ ಮಾಡಿದರು. ಮಹೀಶ್‌ ತೀಕ್ಷಣ 4, ದಿಲ್ಶನ್‌ ಮಧುಶಂಖ 3 ಮತ್ತು ವನಿಂದು ಹಸರಂಗ 2 ವಿಕೆಟ್‌ ಉರುಳಿಸಿ ಡಚ್ಚರನ್ನು ಮಗುಚಿದರು. ಸತತ 3 ಓವರ್‌ಗಳಲ್ಲಿ 3 ವಿಕೆಟ್‌ ಕಿತ್ತ ಮಧುಶಂಖ ಪಂದ್ಯಶ್ರೇಷ್ಠರೆನಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-47.5 ಓವರ್‌ಗಳಲ್ಲಿ 233 (ಅರಚಿಗೆ 57, ಮೆಂಡಿಸ್‌ 43, ಅಸಲಂಕ 36, ಹಸರಂಗ 29, ನಿಸ್ಸಂಕ 23, ವಿಕ್ರಮ್‌ಜೀತ್‌ 12ಕ್ಕೆ 2, ವಾನ್‌ ಬೀಕ್‌ 40ಕ್ಕೆ 2, ಕ್ಲೀನ್‌ 42ಕ್ಕೆ 2, ಜುಲ್ಫಿಕರ್‌ 59ಕ್ಕೆ 2). ನೆದರ್ಲೆಂಡ್ಸ್‌ -23.3 ಓವರ್‌ಗಳಲ್ಲಿ 105 (ಓಡೌಡ್‌ 33, ವಾನ್‌ ಬೀಕ್‌ 20, ತೀಕ್ಷಣ 31ಕ್ಕೆ 4, ಮಧುಶಂಖ 18ಕ್ಕೆ 3, ಹಸರಂಗ 35ಕ್ಕೆ 2). ಪಂದ್ಯಶ್ರೇಷ್ಠ: ದಿಲ್ಶನ್‌ ಮಧುಶಂಖ.

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.