ಇಡಿ ನೋಟಿಸ್ ಹಿನ್ನೆಲೆ ದೆಹಲಿಗೆ ತೆರಳಿದ ಜಮೀರ್ ಅಹಮದ್ ಖಾನ್
Team Udayavani, Aug 21, 2021, 1:34 PM IST
ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಇಂದು ದೆಹಲಿಗೆ ತೆರಳಿದರು.
ಜಾರಿ ನಿರ್ದೇಶನಾಲಯದಿಂದ ನೋಟಿಸ್ ವಿಚಾರವಾಗಿಯೇ ಶುಕ್ರವಾರ ತಡರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಜಮೀರ್ ಅಹ್ಮದ್, ಚರ್ಚೆ ನಡೆಸಿದ್ದರು. ಇಡಿ ವಿಚಾರಣೆ ಎದುರಿಸುವ ನಿಟ್ಟಿನಲ್ಲಿ ಜಮೀರ್ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಅಫ್ಘಾನಿಸ್ತಾನ್ ಬಿಕ್ಕಟ್ಟು: ಕಾಬೂಲ್ ನಿಂದ 85ಕ್ಕೂ ಅಧಿಕ ಭಾರತೀಯರ ಏರ್ ಲಿಫ್ಟ್
ಜಮೀರ್ ಅಹಮದ್ ಖಾನ್ ಅವರ ಮನೆ, ಕಚೇರಿ ಸೇರಿದಂತೆ ಆಸ್ತಿಗಳ ಮೇಲೆ ಆಗಸ್ಟ್ 5ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.