Uppala ಮುಂದಕ್ಕೆ ಚಲಾಯಿಸಿದ ಕಾರನಡಿಗೆ ಬಿದ್ದು ಮಗು ಸಾವು
Team Udayavani, Nov 13, 2023, 6:06 PM IST
ಉಪ್ಪಳ: ಶೆಡ್ನಿಂದ ಕಾರನ್ನು ಮುಂದಕ್ಕೆ ತೆಗೆಯುತ್ತಿದ್ದಾಗ ಕಾರಿನಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವಿಗೀಡಾದ ಘಟನೆ ನಡೆದಿದೆ.
ಸೋಂಕಾಲು ಕೊಡಂಗೆ ರಸ್ತೆಯ ಕೊಡಂಬೈಲು ನಿವಾಸಿ, ಕೊಲ್ಲಿ ಉದ್ಯೋಗಿಯಾಗಿರುವ ನಿಜಾರ್ ಅವರ ಪುತ್ರ ಮಸ್ತುಲ್ ಜಾಸಿದ್ ಸಾವಿಗೀಡಾದ ಮಗು.
ಮಗುವಿನ ಚಿಕ್ಕಪ್ಪ ಮನೆಯ ಶೆಡ್ನಿಂದ ಕಾರನ್ನು ಮುಂದಕ್ಕೆ ತೆಗೆಯುತ್ತಿದ್ದಾಗ ಮುಂಬದಿಯಲ್ಲಿ ಮಗು ನಿಂತು ಕೊಂಡಿರುವುದು ತಿಳಿಯದೆ ಈ ದುರಂತ ಸಂಭವಿಸಿತು. ಗಂಭೀರ ಗಾಯಗೊಂಡ ಮಗುವನ್ನು ತತ್ಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಮೇಲೆ ಹರಿದ ಲಾರಿ: ವೃದ್ಧನ ಸಾವು
ಮಂಜೇಶ್ವರ: ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬೈಕ್ನಿಂದ ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಲಾರಿ ಹರಿದು ಸಾವಿಗೀಡಾದ ಘಟನೆ ನಡೆದಿದೆ.
ರಾ.ಹೆದ್ದಾರಿಯ ಮಂಜೇಶ್ವರ ಕರೋಡದಲ್ಲಿ ಅಪಘಾತ ಸಂಭವಿಸಿದ್ದು, ಹೊಸಬೆಟ್ಟು ಕೊಪ್ಪಳ ಕಡಪ್ಪುರ ನಿವಾಸಿ, ಮೀನು ಕಾರ್ಮಿಕ ಅಬ್ದುಲ್ ಖಾದರ್(71) ಸಾವಿಗೀಡಾದರು.
ರಸ್ತೆಗೆ ಬಿದ್ದ ತತ್ಕ್ಷಣ ಹಿಂಬದಿಯಿಂದ ಬಂದ ಲಾರಿ ಮೈಮೇಲೆ ಹರಿದು ಗಂಭೀರ ಗಾಯಗೊಂಡಿದ್ದು ಸ್ಥಳದಲ್ಲೇ ಸಾವಿಗೀಡಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Covishield Vaccine; ಹಾಕಿಸಿಕೊಂಡವರು ಐಸ್ಕ್ರೀಮ್ ತಿನ್ನಬಾರದಾ?
Supreme Court ಸಲಹೆ; ಹೊಂದಾಣಿಕೆಯು ಸುಖ ದಾಂಪತ್ಯದ ಅಡಿಪಾಯ
Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ