ಕೇರಳದಲ್ಲಿ ಮೀನು ಉತ್ಪಾದನೆ: 15 ಕೋಟಿ ರೂ. ಯೋಜನೆ


Team Udayavani, Jun 30, 2018, 6:00 AM IST

29ksde12.jpg

ಕಾಸರಗೋಡು: ಸಾಕಷ್ಟು ಹಿನ್ನೀರಿನ ಸೌಕರ್ಯವಿರುವ ಕೇರಳದಲ್ಲಿ ಮೀನಿನ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸಮುದ್ರ ಮೀನು ಸಂಶೋಧನಾ ಕೇಂದ್ರ 15 ಕೋಟಿ ರೂಪಾಯಿಯ ಯೋಜನೆಯನ್ನು ಸಿದ್ಧಪಡಿಸಿದೆ. ಕೇಂದ್ರ ಕೃಷಿ ಸಚಿವಾಲಯದ ಏಜೆನ್ಸಿಯಾದ ನ್ಯಾಶನಲ್‌ ಫಿಶರೀಸ್‌ ಡೆವಲಪ್‌ಮೆಂಟ್‌ ಬೋರ್ಡ್‌(ಎನ್‌ಎಫ್‌ಡಿಬಿ)ಯ ಆರ್ಥಿಕ ನೆರವಿನೊಂದಿಗೆ 15 ಕೋಟಿ ರೂ. ಯೋಜನೆಯನ್ನು ಸಾಕಾರಗೊಳಿಸಲಿದೆ. 

ಇದರ ಅಂಗವಾಗಿ ಮೀನು ಕೃಷಿಕರ ಸಹಭಾಗಿತ್ವದಲ್ಲಿ ಕೇರಳದಲ್ಲಿ 500 ಮೀನು ಕೃಷಿ ಘಟಕಗಳನ್ನು ಆರಂಭಿಸಲಾಗುವುದು. ವ್ಯಯಕ್ತಿಕವಾಗಿಯೂ, ತಂಡವಾಗಿಯೂ ಮೀನು ಕೃಷಿಗೆ ಅವಕಾಶವಿದೆ. ಮೀನು ಕೃಷಿ ಮಾಡುವ ಕೃಷಿಕರಿಗೆ ಒಟ್ಟು ಮೊತ್ತದ 40 ಶೇ. ಸಬ್ಸಿಡಿ ನೀಡಲಾಗುವುದು. ಮಹಿಳೆಯರಿಗೆ ಮತ್ತು ಎಸ್‌.ಸಿ, ಎಸ್‌.ಟಿ. ವಿಭಾಗದವರಿಗೆ ಶೇ. 60 ಸಬ್ಸಿಡಿ ನೀಡಲಾಗುವುದು. ಮೀನು ಕೃಷಿಯನ್ನು ಕರಾವಳಿ ಪ್ರದೇಶದಲ್ಲಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. 

ಮನೆ ಬಳಿಯ ಕೆರೆಗಳಲ್ಲೂ ಮೀನು ಕೃಷಿ ಮಾಡಬಹುದು. ಜಲಾಶಯಗಳ ಸೌಕರ್ಯಗಳಿರುವವರಿಗೆ ಪ್ರಥಮ ಆದ್ಯತೆ ಕಲ್ಪಿಸಲಾಗಿದೆ. ಸಿ.ಎಂ.ಎಫ್‌.ಆರ್‌. ಐ.ಯ ತಾಂತ್ರಿಕತೆಯೊಂದಿಗೆ ಕೃಷಿಯನ್ನು ಮಾಡಬೇಕು. ಮೀನು ಕೃಷಿ ಮಾಡುವ ಜಲಾಶಯವನ್ನು ಸಿಎಂಎಫ್‌ಆರ್‌ಐ ಯ ತಜ್ಞರು ವೀಕ್ಷಿಸಿದ ಬಳಿಕ ಮೀನು ಕೃಷಿಗೆ ಅನುಕೂಲಕರವಾಗಿದೆ ಎಂದು ಕಂಡು ಬಂದಲ್ಲಿ ಸಿಎಂಎಫ್‌ಆರ್‌ಐಯ ಮಾರಿ ಕಲ್ಚರ್‌ ವಿಭಾಗ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಹಾಯವೊದಗಿಸುವುದು. 

ಮೀನು ಕೃಷಿ ಘಟಕ ಆರಂಭಿಸುವ ಆಸಕ್ತರಿಗೆ ಶೇ.50 ಸಬ್ಸಿಡಿ ನೀಡಲಿದ್ದು, ಕರಾವಳಿ ಪ್ರದೇಶದ ಜನರ ಜೀವನ ಮಟ್ಟವನ್ನು ಉತ್ತಮ ಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶಿಸಲಾಗಿದೆ. ಅಲ್ಲದೆ ಮೀನು ಕೃಷಿಯ ಮೂಲಕ ಯಾವುದೇ ರಾಸಾಯನಿಕ ವಸ್ತು ಬಳಸದ ಮೀನು ಲಭಿಸುವುದು. ಮೀನು ಕೃಷಿ ಮಾಡುವ ವ್ಯಕ್ತಿಗಳಿಗೆ ಸಿಎಂಎಫ್‌ಆರ್‌ಐ ತರಬೇತಿ ನೀಡಲಿದೆ. ಕೇರಳಕ್ಕೆ ಅನ್ಯ ರಾಜ್ಯಗಳಿಂದ ಬರುವ ಮೀನುಗಳಿಗೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. 

ಕೇರಳದಲ್ಲೇ ಮೀನು ಕೃಷಿ ಮಾಡುವುದರಿಂದ ಅನ್ಯ ರಾಜ್ಯಗಳನ್ನು ಅವಲಂಬಿಸಬೇಕಾದ ಅಗತ್ಯತೆ ಇರುವುದಿಲ್ಲ. ಅಲ್ಲದೆ ರಾಸಾಯನಿಕ ವಸ್ತುಗಳನ್ನು ಬಳಸದ ಮೀನು ಗ್ರಾಹಕರಿಗೆ ಲಭಿಸುವುದು. ಉತ್ತಮ ಗುಣ ಮಟ್ಟದ ಮೀನನ್ನು ಗ್ರಾಹಕರಿಗೆ ಒದಗಿಸುವುದು ಕೂಡ ಸಿಎಂಎಫ್‌ಆರ್‌ಐ ಯೋಜನೆಯ ಮುಖ್ಯ ಉದ್ದೇಶವಾಗಿದೆ. 

ಆಕ್ವಾ ವನ್‌ ಲ್ಯಾಬ್‌
ಮೀನು ಕೃಷಿಕರಿಗೆ ನೆರವಾಗಲು ರಾಜ್ಯದ ಮೂರು ಕಡೆಗಳಲ್ಲಿ ಆಕ್ವಾ ವನ್‌ ಲ್ಯಾಬ್‌ಗಳನ್ನು ಆರಂಭಿಸಲಾಗುವುದು. ನೀರಿನ ಗುಣಮಟ್ಟ ಪರಿಶೀಲನೆ, ರೋಗ ನಿರ್ಣಯ ಮೊದಲಾದವುಗಳು ಈ ಅಕ್ವಾ ವನ್‌ ಲ್ಯಾಬ್‌ನಲ್ಲಿ ನಡೆಯಲಿದೆ. ಸ್ವಂತವಾಗಿಯೂ ಲ್ಯಾಬ್‌ ಆರಂಭಿಸಬಹುದಾಗಿದ್ದು, ಲ್ಯಾಬ್‌ ಆರಂಭಿಸುವವರಿಗೆ ಒಟ್ಟು ಮೊತ್ತದ 50 ಶೇಕಡಾ ಸಬ್ಸಿಡಿ ಲಭಿಸುವುದು. ಅಲ್ಲದೆ ಮೀನಿನ ಕಿರು ಆಹಾರ ಘಟಕವನ್ನು ಆರಂಭಿಸಲು ಯೋಜನೆಯಲ್ಲಿ ಅವಕಾಶವಿದೆ. 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.