Kumbla ಹೃದಯಾಘಾತ: ಇಸ್ರೋ ವಿಜ್ಞಾನಿ ಸಾವು
Team Udayavani, Dec 18, 2023, 12:24 AM IST
ಕುಂಬಳೆ: ಬೆಂಗಳೂರು ಇಸ್ರೋ ಉದ್ಯೋಗಿ, ಕಾಸರಗೋಡಿನ ಯುವ ವಿಜ್ಞಾನಿ ಹೃದಯಾಘಾತದಿಂದ ಡಿ. 15ರಂದು ನಿಧನ ಹೊಂದಿದ್ದಾರೆ.
ಕಾಸರಗೋಡು ಬೆಟ್ಟಂಬಾರೆ ಸೂರ್ಲು ನಿವಾಸಿ ಅಶೋಕ್ (43) ಮಂಡಿ ನೋವಿಗೆ ಸರ್ಜರಿ ಚಿಕಿತ್ಸೆ ನಡೆದ ಬಳಿಕ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕೂಡ್ಲು ಗೋಪಾಲಕೃಷ್ಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ.ಪೂ. ಶಿಕ್ಷಣ, ಪೆರಿಯ ಪಾಲಿಟೆಕ್ನಿಕಲ್ ವಿದ್ಯಾಲಯದಲ್ಲಿ ಡಿಪ್ಲೋಮಾ ಮಾಡಿ ಬಳಿಕ ಇಸ್ರೋದಲ್ಲಿ ಉದ್ಯೋಗಿಯಾಗಿದ್ದರು.
ಚಂದ್ರಯಾನ ಯಶಸ್ವಿ ಉಡ್ಡಯನದಲ್ಲಿ ಇವರ ಪಾತ್ರವಿದ್ದು, ಕಾಸರಗೋಡು ಗಣೇಶ ಮಂದಿರದಲ್ಲಿ ಜರಗಿದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಇವರನ್ನು ಸಮ್ಮಾನಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ